ಪಾವಂಜೆ: ವಿಶ್ವ ಜಿಗೀಷದ್ ಯಾಗ
Team Udayavani, Apr 14, 2018, 10:16 AM IST
ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಎ. 13ರಂದು ನಾಲ್ಕನೇ ದಿನದಲ್ಲಿ ನಾಲ್ಕು ಮಂದಿ ವಟುಗಳಿಗೆ ಉಪನಯನವು ವೇದೋಕ್ತವಾಗಿ ನಡೆಯಿತು.
ಯಜ್ಞಾಂಗಣಕ್ಕೆ ಚಿನ್ಮಯ ಮಿಷನ್ನ ಮುಖ್ಯಸ್ಥರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಭೇಟಿ ನೀಡಿ ಯಾಗ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಯಾಗದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಕೆ. ಅಭಯಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.
ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಜನಪ್ರತಿನಿ ಧಿಗಳು ಪೂರ್ಣಾಹುತಿಯಲ್ಲಿ ಭಾಗವಹಿಸಿದರು. ಮಹರ್ಷಿ ಜಾತೂಕರ್ಣ ವೇದಿಕೆಯಲ್ಲಿ ಕೊಲೆಕಾಡಿ ವಿಶ್ವಕರ್ಮ ಮಹಿಳಾ ಮಂಡಳಿಯಿಂದ ಭಜನ ಸೇವೆಯನ್ನು ನೀಡಿದರು.
ಕಲ್ಲಡ್ಕ ವಿಟ್ಠಲ ನಾಯಕ್ ಅವರಿಂದ ಸಾಹಿತ್ಯ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸುಮಾ ರು ನಾಲ್ಕು ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ವಿವಿಧ ಆರು ಸಂಘ ಸಂಸ್ಥೆಗಳ ಸದಸ್ಯರು ಅನ್ನಪ್ರಸಾದದ ವಿತರಣೆಯಲ್ಲಿ ತಮ್ಮ ಸೇವೆಯನ್ನು ನೀಡಿದರು.
ಬಳಿಕ ಎಲ್ಲ ಸದಸ್ಯರನ್ನು ಯಾಗ ಸಮಿತಿ ವತಿಯಿಂದ ಗೌರವಿಸಲಾಯಿತು. ಸಂಜೆ ಸುರತ್ಕಲ್ನ ಎನ್ಐಟಿಕೆ ಸಿಬಂದಿ ಕೂಟದಿಂದ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ
Price Hike: ಕಾಫಿ ಪ್ರಿಯರಿಗೆ ಕಹಿ ಸುದ್ದಿ, ಕಾಫಿ ಪುಡಿ ಬೆಲೆ 100 ರೂ. ಹೆಚ್ಚಳ
Donation: ರಾಮನಗರದ ಮಠಕ್ಕೆ ರಾಜಸ್ಥಾನದ ಉದ್ಯಮಿಯಿಂದ 3 ಸಾವಿರ ಎಕರೆ ಭೂಮಿ ದಾನ!
Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ
Koppal: ಸಿಎಂ ವಾಹನ ಸಂಚಾರಕ್ಕೆ ಅಡ್ಡಿ: ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರು ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.