ನೀರು ಹಿಡಿವುದೇ ಉದ್ಯೋಗ


Team Udayavani, Apr 16, 2018, 12:35 PM IST

neeru.jpg

ಬೆಂಗಳೂರು: ಕೆಲಸಕ್ಕೆ ತಡವಾಗಿದೆ ಎಂಬ ಒತ್ತಡದ ನಡುವೆಯೂ ಅತುರ ಆತುರವಾಗಿ ನೀರು ಹಿಡಿಯುತ್ತಿರುವ ಉದ್ಯೋಗಿಗಳು, ನೀರು ಬರುವ ದಿನ ಸ್ವಲ್ಪ ಯಾಮಾರಿದರೂ ಒಂದು ವಾರ ನೀರಿಲ್ಲ ಎಂಬ ಭಯ, ದುಬಾರಿ ಬೆಲೆಗೆ ಟ್ಯಾಂಕರ್‌ ನೀರು ಖರೀದಿಸಬೇಕಾದ ಅನಿವಾರ್ಯತೆ.

ಗಾರ್ಮೆಂಟ್ಸ್‌ ಕಾರ್ಮಿಕರು, ಕಟ್ಟಡ ಕೆಲಸಗಾರರು ಹಾಗೂ ದಿನಗೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೊಮ್ಮನಹಳ್ಳಿ ವಲಯದ ಹಲವಾರು ಭಾಗಗಳಲ್ಲಿ ಕಂಡುಬರುವ ದೃಶ್ಯಗಳಿವು. ಬೊಮ್ಮನಹಳ್ಳಿ ವಲಯದ ಕೆಲವೊಂದು ಪ್ರತಿಷ್ಠಿàತ ಬಡಾವಣೆಗಳನ್ನು ಹೊರತುಪಡಿಸಿ ಉಳಿದೆಲ್ಲ ಭಾಗಗಳಿಗೆ ಜಲಮಂಡಳಿಯಿಂದ ವಾರದಲ್ಲಿ ಎರಡು ಬಾರಿ ನೀರು ಹರಿಸಲಾಗುತ್ತಿದೆ.

ಅದೂ ಬೆಳಗಿನ ಹೊತ್ತು ನೀರು ಬರುವುದರಿಂದ ಕಾರ್ಮಿಕರು ಮೊದಲು ನೀರು ಹಿಡಿದು ನಂತರ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಕೆಲಸಕ್ಕೆ ತಡವಾಗಿ ಹೋದರೆ, ಕಂಪನಿಯವರು ಒಳಗೆ ಸೇರಿಸುವುದಿಲ್ಲ. ನೀರು ಹಿಡಿಯದಿದ್ದರೆ ಒಂದು ವಾರ ನೀರಿಲ್ಲದಂತಹ ಪರಿಸ್ಥಿತಿಯಿದೆ.

ಇನ್ನು ಬೇಗೂರು-ಕೊಪ್ಪ ರಸ್ತೆಯಲ್ಲಿ ಬರುವ ಅಂಬೇಡ್ಕರ್‌ ನಗರ ನಿವಾಸಿಗಳು ಪ್ರಮುಖವಾಗಿ ಕೊಳವೆಬಾವಿ ನೀರನ್ನೇ ಆಶ್ರಯಿಸಿದ್ದು, ಕೊಳವೆ ಬಾವಿಯಲ್ಲಿರುವ ನೀರು ಕುಡಿಯಲು ಯೋಗ್ಯವಾಗಿಲ್ಲವೆಂದು ಅಧಿಕಾರಿಗಳೇ ಕೆಲವು ಕಡೆ ನೀರನ್ನು ಬಳಸದಂತೆ ಫ‌ಲಕಗಳನ್ನು ಹಾಕಿದ್ದಾರೆ. ಅಂಬೇಡ್ಕರ್‌ ನಗರದ ಮೂಲಕ ಸಮೀಪದ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಹರಿಯುತ್ತಿದ್ದರೂ, ಈ ಭಾಗದ ನಿವಾಸಿಗಳಿಗೆ ಮಾತ್ರ ಕಾವೇರಿ ನೀರು ಸಿಕ್ಕಿಲ್ಲ.

ಟ್ಯಾಂಕರ್‌ಗಳದ್ದೇ ದರ್ಬಾರು: ಜಲಮಂಡಳಿಯಿಂದ ವಾರದಲ್ಲಿ ಎರಡು ದಿನ ಹರಿಸುವ ನೀರು ಸಾಕಾಗಾದ ಹಿನ್ನೆಲೆಯಲ್ಲಿ ಜನರು ಟ್ಯಾಂಕರ್‌ ನೀರಿನ ಮೊರೆ ಹೋಗಬೇಕಾಗಿದೆ. ಇದೇ ಕಾರಣಕ್ಕೆ ಟ್ಯಾಂಕರ್‌ ನೀರಿನ ಬೆಲೆ ಸಹ ಹೆಚ್ಚಾಗಿದ್ದು, ಈ ಹಿಂದೆ ಒಂದು 350 ರೂ. ಇದ್ದ ಟ್ಯಾಂಕರ್‌ ಬೆಲೆ 500 ರೂ. ಆಗಿದೆ. ಹೆಚ್ಚಿನ ಭಾಗಗಳಿಗೆ ಕಾವೇರಿ ನೀರು ಸಮರ್ಪಕವಾಗಿ ಹರಿಯದ ಹಿನ್ನೆಲೆಯಲ್ಲಿ ವಲಯದಲ್ಲಿ ಟ್ಯಾಂಕರ್‌ಗಳಿಗೆ ಭಾರಿ ಬೇಡಿಕೆಯಿದ್ದು, ಬಡಾವಣೆಯ ಎಲ್ಲ ರಸ್ತೆಗಳಲ್ಲಿ ಟ್ಯಾಂಕರ್‌ಗಳೇ ಕಾಣುತ್ತವೆ.

ಕ್ಯಾನ್‌ ನೀರಿಗೆ ಬಹಳ ಬೇಡಿಕೆ: ಜಲಮಂಡಳಿ ಹಾಗೂ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಕಾರಣದಿಂದ ಬೊಮ್ಮನಹಳ್ಳಿ ವಲಯದ ಬಹುತೇಕ ಭಾಗಗಳಲ್ಲಿನ ಜನರು ಕುಡಿಯುವ ನೀರಿಗಾಗಿ ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರು ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ವಾರ್ಡ್‌ಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಘಟಕ ತೆರೆದಿದ್ದು, ಈ ಘಟಕಗಳ ಎದುರು ನಿತ್ಯ ಬೆಳಗ್ಗೆ ಕ್ಯಾನ್‌ ಹಿಡಿದು ಸಾಲುಗಟ್ಟಿ ನಿಲ್ಲುವ ಜನರನ್ನು ಕಾಣಬಹುದು.

ಸಮಸ್ಯೆ ಎಲ್ಲೆಲ್ಲಿ?: ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಬರುವ ಹೊಂಗಸಂದ್ರ, ಮುನಿಸ್ವಾಮಪ್ಪ ಲೇಔಟ್‌, ವೈಶ್ಯ ಬ್ಯಾಂಕ್‌ ಕಾಲೋನಿ, ಕೆನರಾ ಬ್ಯಾಂಕ್‌ ಕಾಲೋನಿ, ಅಕ್ಷಯ ನಗರ, ಎಲೇನಹಳ್ಳಿ, ಅಂಬೇಡ್ಕರ್‌ ನಗರ, ಬೇಗೂರು, ಅಯ್ಯಪ್ಪಸ್ವಾಮಿ ದೇವಸ್ಥಾನ ಮುಖ್ಯರಸ್ತೆ, ಮಂಗಮ್ಮನಪಾಳ್ಯ, ಹೊಸಕೆರೆಹಳ್ಳಿ, ಇಟ್ಟಮಡು, ಕೂಡ್ಲು, ನಾಗನಾಥಪುರ, ಬಸವನಪುರ ಸೇರಿದಂತೆ ಪ್ರಮುಖ ಭಾಗಗಳಲ್ಲಿ ನೀರಿನ ಸಮಸ್ಯೆಯಿದೆ.

ಜಲಮಂಡಳಿಯಿಂದ ಮಂಗಳವಾರ ಹಾಗೂ ಶನಿವಾರ ನೀರು ಬಿಡುತ್ತಾರೆ. ಆದರೆ, ಕಡಿಮೆ ಪ್ರಮಾಣದ ನೀರು ಬರುತ್ತಿದ್ದು, ಟ್ಯಾಂಕರ್‌ಗಳ ಮೊರೆ ಹೋಗಬೇಕು. ಇಲ್ಲವೆ, ಕೊಳವೆಬಾವಿ ಇರುವ ನೆರೆಮನೆಯವರಿಗೆ ಹಣ ಕೊಟ್ಟು ನೀರು ಪಡೆಯಬೇಕು. 
-ದೇವಿಕಾ, ಹೊಂಗಸಂದ್ರ

ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಈ ಹಿಂದೆ à ನೀರು ಕುಡಿದು ಹಲವು ಬಾರಿ ಆರೋಗ್ಯ ಹದಗೆಟ್ಟ ಉದಾಹರಣೆಗಳಿವೆ. ಹೀಗಾಗಿ ಕುಡಿಯಲು ದುಬಾರಿ ದರದ ಕ್ಯಾನ್‌ ನೀರನ್ನು ಬಳಸುತ್ತಿದ್ದೇವೆ.
-ಯಶೋಧಾ, ಮಂಗಮ್ಮನಪಾಳ್ಯ

ಜಲಮಂಡಳಿ ಪೈಪ್‌ಲೈನ್‌ ಹಾಕಿ ಹಲವು ತಿಂಗಳಾಗಿದೆ. ಆದರೆ, ನೀರು ಹರಿಸದಿರುವ ಕಾರಣ, ಅನಿವಾರ್ಯವಾಗಿ ಟ್ಯಾಂಕರ್‌ ನೀರು ಖರೀದಿಸಬೇಕಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಟ್ಯಾಂಕರ್‌ನವರು ಕೂಡ ಬೆಲೆ ಹೆಚ್ಚಿಸಿದ್ದಾರೆ. 
-ಗಂಗಾ, ಸಿಂಗಸಂದ್ರ

* ವೆಂ.ಸುನೀಲ್‌ಕುಮಾರ್‌ 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.