ನಿಮ್ಮ ವಾಟ್ಸ್ಯಾಪ್‌ ಗ್ರೂಪ್‌ನ ಅಡ್ಮಿನ್‌ ಹೀಗಿದ್ದಾನಾ? 


Team Udayavani, Apr 17, 2018, 5:58 PM IST

nimma-wats.jpg

ಜಗತ್ತಿನ ಕೆಲವು ಜವಾಬ್ದಾರಿಯುತ ಹುದ್ದೆಗಳಲ್ಲಿ ವಾಟ್ಸ್ಯಾಪ್‌ ಅಡ್ಮಿನ್‌ ಕೂಡ ಒಂದು ಎನ್ನುವ ತಮಾಷೆಯನ್ನು ಯಾವಾಗಲೂ ಕೇಳುತ್ತಲೇ ಇರುತ್ತೇವೆ. ಅಡ್ಮಿನ್‌ನನ್ನು ಕಾಲೆಳೆಯಲು, ಗ್ರೂಪ್‌ ರಚಿಸಿ ಕಿರಿಕಿರಿ ಕೊಡುತ್ತಿದ್ದಾನೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಳ್ಳಲು ಅವನ ಮೇಲೆ ನೂರಾರು ಜೋಕುಗಳನ್ನು ಸಿಡಿಸಿ, ಮನರಂಜನೆಯನ್ನೂ ಪಡೆಯುತ್ತೇವೆ. ಆದರೆ, ಅವೆಲ್ಲ ಬಿಡಿ… ಅಡ್ಮಿನ್‌ ಆಗಿ ಎಲ್ಲರನ್ನೂ ಗ್ರೂಪ್‌ನಲ್ಲಿ ಇಟ್ಟುಕೊಳ್ಳೋದು ಒಂದು ಕಲೆ ಎನ್ನುವುದು ನಿಮಗೆ ಗೊತ್ತೇ?

ಹೌದು, ವಾಟ್ಸ್ಯಾಪ್‌ ಗ್ರೂಪ್‌ ಅನ್ನು ಯಾರೂ ರಚಿಸಬಹುದು. ಆದರೆ, ಆ ಗ್ರೂಪ್‌ ಅನ್ನು ಯಶಸ್ವಿಗೊಳಿಸೋ ಗುಟ್ಟು ಕೆಲವರಿಗಷ್ಟೇ ಗೊತ್ತಿರುತ್ತೆ. ಆತ ಬಹಳ ನಾಜೂಕಾಗಿ ತಾನು ರಚಿಸಿದ ಗ್ರೂಪ್‌ನ ಉದ್ದೇಶಗಳನ್ನು ಸಾಕಾರಗೊಳಿಸುತ್ತಿರುತ್ತಾನೆ. ಅಷ್ಟಕ್ಕೂ ಯಶಸ್ವಿ ಅಡ್ಮಿನ್‌ಗೂ ಒಂದಿಷ್ಟು ಲಕ್ಷಣಗಳು ಇವೆಯಂತೆ. ಅವೇನು ಗೊತ್ತೇ?

– ಅಡ್ಮಿನ್‌ ಒಬ್ಬ ಕೂಡು ಕುಟುಂಬದ ಯಜಮಾನ ಇದ್ದಂತೆ. ಅವನಿಗೆ ಯಾರನ್ನೂ ಹರ್ಟ್‌ ಮಾಡುವ ಉದ್ದೇಶವಿರುವುದಿಲ್ಲ. ಹಾಗೇನಾದರೂ ಮನ ನೋಯಿಸಿದರೆ, ಆತ ಯಶಸ್ವಿ ಅಡ್ಮಿನ್‌ ಆಗಲು ಅರ್ಹನಲ್ಲ.

– ಯಶಸ್ವಿ ಅಡ್ಮಿನ್‌ ಯಾವತ್ತೂ ಗುಡ್‌ ಮಾರ್ನಿಂಗ್‌, ಗುಡ್‌ನೈಟ್‌ ಮೆಸೇಜುಗಳನ್ನು ಕಳಿಸುವುದಿಲ್ಲ. ಅಶ್ಲೀಲವಾಗಿ ಸಂದೇಶಗಳನ್ನು ರವಾನಿಸುವುದಿಲ್ಲ.

– ಯಾವ ಉದ್ದೇಶಕ್ಕಾಗಿ ವಾಟ್ಸ್ಯಾಪ್‌ ಗ್ರೂಪ್‌ ರಚನೆಯಾಗಿದೆ ಎಂಬುದರ ಅರಿವು ಆತನೊಳಗೆ ಸದಾ ಇರುತ್ತೆ. ಹಾಗಾಗಿ, ಆತ ಅದಕ್ಕೆ ಪೂರಕವಾದಂಥ ಸಂದೇಶಗಳನ್ನೇ ತನ್ನ ಗ್ರೂಪ್‌ನಲ್ಲಿ ಹಾಕುತ್ತಿರುತ್ತಾನೆ.

– ನಾಲ್ಕು ಜನ ಇದ್ದಲ್ಲಿ ಜಗಳ, ಮನಸ್ತಾಪ ಇದ್ದಿದ್ದೇ. ಆ ಸತ್ಯ ಅಡ್ಮಿನ್‌ಗೂ ಗೊತ್ತಿರಬೇಕು. ಅವರನ್ನು ಸಮಾಧಾನಪಡಿಸಿ, ನ್ಯಾಯಯುತವಾಗಿ ಬುದ್ಧಿಹೇಳುವ ಕೆಲಸವನ್ನು ಆತ ಮಾಡುತ್ತಾನೆ.

– ಗ್ರೂಪ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ, ಬೇರೆ ವಿಚಾರವನ್ನು ಪ್ರಸ್ತಾಪಿಸಿ, ಚರ್ಚೆಯ ಹಳಿ ತಪ್ಪಿಸುವ ಕೆಲಸವನ್ನು ಯಶಸ್ವಿ ಅಡ್ಮಿನ್‌ ಎಂದೂ ಮಾಡುವುದಿಲ್ಲ.

– ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಅಡ್ಮಿನ್‌, ಗ್ರೂಪ್‌ಗೆ ಸಂಬಂಧಿಸಿದ ವಿಚಾರಗಳನ್ನು ಪೋಸ್ಟ್‌ ಮಾಡುತ್ತಾನೆ.

– ಚರ್ಚೆಯ ವೇಳೆ ಯಾರಾದರೂ ಕೋಪಗೊಂಡು ಗ್ರೂಪ್‌ ತ್ಯಜಿಸಿದರೆ (ಲೆಫ್ಟ್ ಆದರೆ) ಅವರ ಬಗ್ಗೆ ಆತ ಹಗುರವಾಗಿ ಮಾತಾಡುವುದಿಲ್ಲ. ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸಿ, ಪುನಃ ಗ್ರೂಪ್‌ಗೆ ಸೇರಿಸುವ ಕಲೆ ಆತನಿಗೆ ಗೊತ್ತಿರುತ್ತೆ. 

– ಫೇಕ್‌ನ್ಯೂಸ್‌ಗಳನ್ನು ಪೋಷಿಸುವ ಕೆಲಸವನ್ನು ಆತ ಎಂದಿಗೂ ಮಾಡುವುದಿಲ್ಲ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.