ಪ್ರವಾಸೋದ್ಯಮ ಅಭಿವೃದ್ಧಿ: ಬೇಕಲದಲ್ಲಿ ಬೀಚ್‌ ಸೈಕಲ್‌ ಫೆಸ್ಟ್‌


Team Udayavani, Apr 18, 2018, 6:45 AM IST

17ksde10.jpg

ಕಾಸರಗೋಡು: ಇತಿಹಾಸ ಪ್ರಸಿದ್ಧ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಭೂಪಟದಲ್ಲಿ ಸ್ಥಾನವನ್ನು ಪಡೆದಿರುವ ಬೇಕಲ ಕೋಟೆಯನ್ನು ಕೇಂದ್ರವನ್ನಾಗಿರಿಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಬೇಕಲದಲ್ಲಿ ಬೀಚ್‌ ಸೈಕಲ್‌ ಫೆಸ್ಟ್‌ ನಡೆಸಲಾಗುವುದು. ಜಾಗತಿಕ ಪ್ರವಾಸೋದ್ಯಮ ವಲಯ ದಲ್ಲಿ  ಹೆಚ್ಚು  ಗಮನ ಸೆಳೆದ ಸೈಕಲ್‌ ಟೂರಿಸಂನ್ನು  ಕಾಸರಗೋಡು ಜಿಲ್ಲೆಯಲ್ಲಿ ಪ್ರಚುರಪಡಿಸಲು ಸಮಗ್ರ ಕಾರ್ಯ ಯೋಜನೆ ರೂಪಿಸುತ್ತಿದೆ  ಎಂದು ಬಿಆರ್‌ಡಿಸಿ (ಬೇಕಲ ರೆಸಾರ್ಟ್ಸ್ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌) ಆಡಳಿತ ನಿರ್ದೇಶಕ ಟಿ.ಕೆ. ಮನ್ಸೂರ್‌ ಹೇಳಿದ್ದಾರೆ.

ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಯೋಜನೆಯನ್ನು ಪೂರ್ಣರೂಪದಲ್ಲಿ ಕಾರ್ಯಗತಗೊಳಿಸ ಲಾಗುವುದು. ಮುಖ್ಯವಾಗಿ ಬೇಕಲ ಮತ್ತು ವಲಿಯಪರಂಬ ವಲಯಗಳಲ್ಲಿ  ಯೋಜನೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ.

ಯೋಜನೆಯ ಅಂಗವಾಗಿ 10 ಬೀಚ್‌ಗಳಲ್ಲಿ  ಸೈಕಲ್‌ ಹಬ್‌ಗಳನ್ನು  ಸ್ಥಾಪಿಸಲಾಗುವುದು. ಪ್ರತಿಯೊಂದು ಬೀಚ್‌ನ ಡಾಕಿಂಗ್‌ ಸ್ಟೇಶನ್‌ಗಳನ್ನು  ಹಾಗೂ ಪ್ರಯಾಣಿಕರನ್ನು  ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಲಿಂಕ್‌ ಮಾಡಲಾಗುವುದು. 
ಕುಟುಂಬಶ್ರೀ, ಇತರ ಸಂಘ ಸಂಸ್ಥೆಗಳು ಮುಂತಾದ ಏಜೆನ್ಸಿಗಳ ಮೂಲಕ ಯೋಜನೆಯ ದೈನಂದಿನ ನಿರ್ವಹಣೆ ಯನ್ನು ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯದ ತರಬೇತಿ ಯನ್ನು  ಬಿಆರ್‌ಡಿಸಿ ನೀಡಲಿದೆ. ಸೈಕಲ್‌ ಟೂರಿಸಂ ಗಿರುವ ಅರ್ಹತೆ ಪರಿಗಣಿಸಿ ವಲಿಯ ಪರಂಬದಲ್ಲೂ  ಯೋಜನೆಯನ್ನು  ಜಾರಿಗೊಳಿಸಲಾಗುವುದು. 24 ಕಿ.ಮೀ. ಉದ್ದದ ಅಗಲ ಕಿರಿದಾದ ವಲಿಯಪರಂಬ ದ್ವೀಪದ ಮೂಲಕ ಒಂದು ಬದಿಯಲ್ಲಿ  ಸಮುದ್ರ, ಇನ್ನೊಂದು ಬದಿಯಲ್ಲಿ  ಹಿನ್ನೀರು ನೋಡಿ ಕೊಂಡು ಸೈಕಲ್‌ ಸವಾರಿ ಪ್ರವಾಸಿಗರಿಗೆ ಹೊಸ ಅನುಭವ ಒದಗಿಸಲಿದೆ.

ಜಿಲ್ಲೆಯಲ್ಲಿ  ಕಾರ್ಯಗತ ಸುಲಭ 
ಕೇರಳದಲ್ಲಿ ಅತ್ಯಧಿಕ ನದಿಗಳಿರುವ ಕಾಸರಗೋಡು ಜಿಲ್ಲೆಯ ಗ್ರಾಮ ಮತ್ತು  ನಗರಗಳಲ್ಲಿ ವಿಸ್ತರಿಸಿರುವ ಹೊಳೆ ತೀರಗಳು, ಬೀಚ್‌ಗಳು, ಕೋಟೆಗಳು, ಆರಾಧನಾಲಯಗಳೆಲ್ಲ ಸೈಕಲ್‌ ಟೂರಿಸಂಗೆ ಯೋಗವಾದ ಸ್ಥಳವಾಗಿವೆ. ಹೊಳೆ, ಬೆಟ್ಟ, ಸಮುದ್ರ ತೀರಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ  ಈ ಯೋಜನೆ ಕಾರ್ಯಗತಗೊಳಿಸಲು ಸುಲಭ ವಾಗುವುದು. ಸೈಕಲ್‌  ಟೂರಿಸಂ ಜಾರಿಯಲ್ಲಿ ಆಸಕ್ತಿಯಿರುವ ಸ್ಥಳೀಯಾ ಡಳಿತ ಸಂಸ್ಥೆಗಳು ಬಿಆರ್‌ಡಿಸಿಯನ್ನು  ಸಂಪರ್ಕಿ ಸಲು ಅಧಿಕಾರಿಗಳು ತಿಳಿಸಿದ್ದಾರೆ.

ಸೈಕಲ್‌ನಲ್ಲಿ  ದೂರ ಸವಾರಿ ಮಾಡು ವುದಕ್ಕಿಂತ ಹೆಚ್ಚಾಗಿ ನಾಡಿನ ಸಂಸ್ಕೃತಿ, ಜೀವನ ವಿಧಾನಗಳನ್ನೆಲ್ಲಾ  ಹತ್ತಿರದಿಂದ ಅರಿತು ಕಥೆಗಳು, ಅನುಭವ ಗಳನ್ನು  ಹುಡುಕಲು ಸಾಧ್ಯವಾಗಲಿದೆ. ನಮ್ಮ ಪ್ರಕೃತಿ ಮತ್ತು   ಸುತ್ತುಮುತ್ತಲಿನ ಪ್ರದೇಶಗಳಿಗೆ ಸೈಕಲ್‌ ಟೂರಿಸಂ ಹೆಚ್ಚು  ಯೋಗ್ಯವಾದುದಾಗಿದೆ.ಸೈಕಲ್‌ ನಲ್ಲಿ “ಬೀಚ್‌  ಸೈಕಲ್‌ ಫೆಸ್ಟ್‌’ ಪ್ರಚುರಪಡಿಸಲಾಗುವುದು. ವಿದೇಶೀ ಯರನ್ನು ಪಾಲ್ಗೊಳ್ಳಿಸಿ ವಿಪುಲ ವಾದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾ ನಿಸಲಾಗಿದೆ ಎಂದು ಬಿಆರ್‌ಡಿಸಿ ಆಡಳಿತ ನಿರ್ದೇಶಕ ಟಿ.ಕೆ.ಮನ್ಸೂರ್‌ ಹೇಳಿದ್ದಾರೆ.

ಮೊದಲ ಹಂತದಲ್ಲಿ ಬೇಕಲ ಬೀಚ್‌ ಪಾರ್ಕ್‌ನಲ್ಲಿ  400 ಮೀಟರ್‌ ಉದ್ದದ ಫುಟ್‌ಪಾತ್‌ ನಿರ್ಮಿಸಲಾಗುವುದು. ಈ ಮೂಲಕ ಪ್ರವಾಸಿಗರು ಹಾಗೂ ಸಂದರ್ಶಕರು ಗಾಳಿಗೆ ಮೈಯೊಡ್ಡಿ  ಕಡಲಿನ ಸೌಂದರ್ಯವನ್ನು  ಆಸ್ವಾದಿಸುತ್ತಾ  ನಡೆಯಬಹುದು. ಫುಟ್‌ಪಾತ್‌ನ ಇಕ್ಕೆಲಗಳಲ್ಲಿ  ಪ್ರಸಿದ್ಧ  ಚಿತ್ರಕಲಾವಿದರ, ಶಿಲ್ಪಿಗಳ ಕಲಾರಚನೆಗಳನ್ನು  ಶಾಶ್ವತವಾಗಿ ಪ್ರದರ್ಶಿಸಲಾಗುವುದು. ಪ್ರಾದೇಶಿಕ ಕಲಾರೂಪಗಳಿಗೆ ಪ್ರಾಧಾನ್ಯ ನೀಡುವ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. ಪ್ರಾದೇಶಿಕ ಕಲಾವಿದರಿಗೆ ಅತ್ಯುತ್ತಮ ಅವಕಾಶಗಳನ್ನು  ನೀಡುವ ಯೋಜನೆ ಕೂಡ ಇದರಲ್ಲಿದೆ. ಕಲೆಯ ಆಶಯವನ್ನು  ಗುರಿಯಾಗಿರಿಸಿ ಬೀಚ್‌ಗಳನ್ನು  ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಆಯಿಸ್ಟರ್ಸ್‌ ಬೀಚ್‌, ಕೈಟ್ಸ್‌ ಬೀಚ್‌, ಸ್ಯಾಂಡ್‌ ಆರ್ಟ್ಸ್ ಬೀಚ್‌ ಮೊದಲಾದ ಹೆಸರುಗಳಲ್ಲಿ  ಬೀಚ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ ಅನುಭವಾತ್ಮಕ ಪ್ರವಾಸೋದ್ಯಮ ಬೀಚ್‌ಗಳು ಎಂಬ ಯೋಜನೆಯೊಂದಿಗೆ ಸೈಕಲ್‌ ಟೂರಿಸಂನ್ನು  ಜೋಡಿಸಲು ತೀರ್ಮಾನಿಸಲಾಗಿದೆ.

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Kasaragod: ಬೋಟ್‌ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್‌ ಮೃತದೇಹ ಪತ್ತೆ

8

Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ

17

Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರಕಾರ

courts

Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.