ಬಂಡಾಯದ ಬೆಂಕಿ


Team Udayavani, Apr 18, 2018, 12:47 PM IST

h1.jpg

ಧಾರವಾಡ: ರಾಜಕೀಯ ಎನ್ನುವುದು ಚದುರಂಗದ ಆಟವಿದ್ದಂತೆ. ಇಲ್ಲಿ ಒಂದು ಕಾಯಿ ಮೇಲೆದ್ದ ತಕ್ಷಣವೇ ಚದುರಂಗ ಪಟದ ಕೊನೆಯ ಮೂಲೆಯಲ್ಲಿನ  ಕಾಯಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಸದ್ಯಕ್ಕೆ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿನ ಕಾಂಗ್ರೆಸ್‌ ಟಿಕೇಟ್‌ ಹಂಚಿಕೆಯಲ್ಲಿ ಕಾಂಗ್ರೆಸ್‌ ಮುಖಂಡರು  ಕೈಗೊಂಡ ನಿರ್ಧಾರಗಳು ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ಕ್ಷೇತ್ರದ ಕಾಂಗ್ರೆಸ್‌ ಟಿಕೇಟ್‌ ಮೇಲೆ ಪರಿಣಾಮ ಬೀರಿದ್ದು,

ಕೈ ಟಿಕೆಟ್‌ ಪಟ್ಟಿಯಲ್ಲಿ ಬೇರೆ ಜಿಲ್ಲೆಯ  ಅಭ್ಯರ್ಥಿಗಳು ಸೇರ್ಪಡೆ ಧಾರವಾಡ ಜಿಲ್ಲೆಯ ಆಕಾಂಕ್ಷಿಗಳಿಗೆ ಹೊಡೆತ ಕೊಟ್ಟಿದೆ. ಹೌದು. ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ 25ಲಕ್ಷಕ್ಕೂ ಅಧಿಕ ಇರುವ  ಮರಾಠಾ ಸಮುದಾಯದವರನ್ನು ಕಾಂಗ್ರೆಸ್‌ ಹಿಂದಿನಿಂದಲೂ  ಮನವೊಲಿಸುತ್ತಲೇ ಬಂದಿದೆ.

ಹಿಂದಿನ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಚುನಾವಣೆ ಕಣಕ್ಕಿಳಿದು ಶಾಸಕರಾದವರು ಮತ್ತು ಸಚಿವರಾಗಿದ್ದವರು ಇದೀಗ ಮತ್ತೆ ಟಿಕೆಟ್‌ ಕೇಳಿದ್ದರು. ಆದರೆ ಬೆಳಗಾವಿ, ಹಾವೇರಿ ಜಿಲ್ಲೆಯಲ್ಲಿ ಈ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ  ಧಾರವಾಡ ಜಿಲ್ಲೆಯ ಮರಾಠ ಸಮುದಾಯದ ಎಸ್‌.ಆರ್‌.ಮೋರೆ ಮತ್ತು ಮರಾಠಾ ಚಿತ್ಪಾವನ ಬ್ರಾಹ್ಮಣ ಸಮುದಾಯದ ದೀಪಕ್‌ ಚಿಂಚೋರೆ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

ಅವರೀಗ ಕೈ ವಿರುದ್ಧ ಬಂಡಾಯ ಸಾರಿದ್ದಾರೆ. ಖಾನಾಪುರ ಕ್ಷೇತ್ರಕ್ಕೆ ರμàಕ್‌ಖಾನ್‌ ಕಾಂಗ್ರೆಸ್‌ ಟಿಕೇಟ್‌ ಕೇಳಿದ್ದರು. ಆದರೆ  ಖಾನಾಪುರದಲ್ಲಿ ಮರಾಠಿ ಭಾಷಿಕರಾದ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್‌ ಸಿಕ್ಕಿದೆ. ಹಾನಗಲ್‌ನಲ್ಲಿ ಮುಸ್ಲಿಂ ಸಮುದಾಯದ ಪಠಾನ್‌ ಟಿಕೆಟ್‌ ಕೇಳಿದ್ದರೂ ಅಲ್ಲಿ  ಮರಾಠಾ ಸಮುದಾಯದ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕಲಘಟಗಿಯಲ್ಲಿ ಸಂತೋಷ ಲಾಡ್‌, ಬಳ್ಳಾರಿಯಲ್ಲಿ ಅನಿಲ ಲಾಡ್‌  ಸೇರಿದಂತೆ ಈ ಸಮುದಾಯದ ಕೋಠಾದಲ್ಲಿ  ಸದ್ಯಕ್ಕೆ ಒಟ್ಟು ಐದು ಜನರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. 2 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕೈ ಬಿಟ್ಟು  -ಧಾ ಪಶ್ಚಿಮಕ್ಕೆ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದರೆ ಪ್ರತಿಫಲವೇ ಇದೀಗ ಬಂಡಾಯವೆದ್ದ ಕೈ ಗಡಗಡ ನಡಗುವಂತಾಗಿದೆ. ದೀಪಕ್‌ ಚಿಂಚೋರೆ  74ನೇ ಕ್ಷೇತ್ರದ ಟಿಕೇಟ್‌ ಆಕಾಂಕ್ಷಿಯಾಗಿದ್ದರೂ,

ಅವರು ಬಂಡಾಯ ಅಭ್ಯರ್ಥಿಯಾಗುತ್ತಿರುವುದು ಸಚಿವ ವಿನಯ್‌ ಕುಲಕರ್ಣಿ ಸ್ಪರ್ಧಿಸುತ್ತಿರುವ ಧಾರವಾಡ  ಗ್ರಾಮೀಣ ಕ್ಷೇತ್ರ-71ಕ್ಕೆ. ಇದಕ್ಕೆ ಕಾರಣ ಈ ಕ್ಷೇತ್ರ ವ್ಯಾಪ್ತಿಗೆ ಬರುವ ಧಾರವಾಡ ನಗರದ 8 ವಾರ್ಡ್‌ಗಳ ಪೈಕಿ ಚಿಂಚೋರೆ ಕೂಡ 7ನೇ ವಾರ್ಡ್‌ನ ಪಾಲಿಕೆ  ಸದಸ್ಯರಾಗಿದ್ದು, ತಮ್ಮ ಹಿಡಿತ ಸಾಧಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿಂದಲೇ ಸ್ಪರ್ಧಿಸಿ ಕಾಂಗ್ರೆಸ್‌ ಮುಖಂಡರಿಗೆ ಬಿಸಿ ಮುಟ್ಟಿಸಬೇಕು  ಎನ್ನುತ್ತಿದ್ದಾರೆ. 

ಮೋರೆ ತೆರೆಗೆ: ವಯಸ್ಸು ಮತ್ತು ಸಂಘಟನಾತ್ಮಕ ಚಾತುರ್ಯದ ಕೊರತೆಯಿಂದ ಮಾಜಿ ಸಚಿವ ಧಾರವಾಡದ ಮರಾಠಾ ಹುಲಿ ಎಸ್‌.ಆರ್‌.ಮೋರೆ ಸದ್ಯಕ್ಕೆ  ರಾಜಕೀಯದ ತೆರೆಗೆ ಸರಿದಂತೆ ಭಾಸವಾಗುತ್ತಿದೆ. ಈವರೆಗೂ ಮಹಾರಾಷ್ಟ್ರದ ಮರಾಠಾ ನಾಯಕರ ನೆರವಿನಿಂದ ತಮ್ಮ ಸ್ಥಾನ ಭದ್ರ  ಪಡಿಸಿಕೊಳ್ಳುತ್ತ ಬಂದಿದ್ದರು.

ಆದರೆ ಜಿಲ್ಲೆಯಲ್ಲಿ ಮರಾಠಾ ಸಮುದಾಯ ನೇರವಾಗಿ ಸಂತೊಷ ಲಾಡ್‌ ಮತ್ತು ಮಾನೆ ಅವರ ಬೆನ್ನಿಗೆ ನಿಂತಿದ್ದರಿಂದ ಈ  ಯುವ ಪಡೆ ವಯಸ್ಸಾದ ಕೈ ಮುಖಂಡರನ್ನು ಹಿಂದಿಕ್ಕಿ ರಾಜಕಾರಣದಲ್ಲಿ ಮುಂದಡಿ ಇಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಾನೆ ಅವರು ಹಾಲಿ  ಎಂಎಲ್‌ಸಿ ಇದ್ದರೂ, ಹಾನಗಲ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

* ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

P.-Joshi

Bengaluru Jail: ಸರಕಾರದಿಂದಲೇ ದರ್ಶನ್‌ ಕೇಸ್‌ ಫೋಟೋ ವೈರಲ್‌: ಪ್ರಹ್ಲಾದ್‌ ಜೋಶಿ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.