ನಿಂಬೆ ಹಣ್ಣಿನಂಥಾ ಹಬ್ಬ ಬಂತು ನೋಡಿ! 


Team Udayavani, Apr 19, 2018, 7:00 AM IST

9.jpg

ಬೇಸಿಗೆಯ ಬಾಯಾರಿಕೆ ತಣಿಸುವ ಅತ್ಯುತ್ತಮ ಮಾರ್ಗವೆಂದರೆ ನಿಂಬೆ ಹಣ್ಣಿನ ಪಾನಕ. ನಿಂಬೆ ಹಣ್ಣನ್ನು ಯಾವುದಕ್ಕೆಲ್ಲಾ ಬಳಸುತ್ತೇವೆ ಎಂದು ಯೋಚಿಸಿದರೆ ಅಚ್ಚರಿಯಾಗುತ್ತೆ. ಬಾಯಾರಿಕೆ ನೀಗಿಸಲು ಬೇಕು, ಚಿತ್ರಾನ್ನಕ್ಕೂ ಬೇಕು, ವಾಹನ ಪೂಜೆ ಮಾಡುವಾಗಲೂ ಬೇಕು. ಆದರೆ ಇಲ್ಲೊಂದು ನಗರದಲ್ಲಿ ನಿಂಬೆ ಹಣ್ಣಿನ ಕಲಾಕೃತಿಗಳನ್ನು ನೋಡಬಹುದು. ಅಲ್ಲಿ ನಿಂಬೆ ಹಣ್ಣಿನ ಹಬ್ಬವನ್ನೇ ಆಚರಿಸಲಾಗುತ್ತದೆ.

ಫ್ರಾನ್ಸ್‌ನ ಮೆಂಟನ್‌ ನಗರದಲ್ಲಿ ನಿಂಬೆ ಹಣ್ಣಿನ ಹಬ್ಬ ನಡೆಯುತ್ತದೆ. ಆ ಸಂದರ್ಭದಲ್ಲಿ  ಇಡೀ ನಗರ ನಿಂಬೆ ಹಣ್ಣುಗಳಿಂದ ಕಂಗೊಳಿಸುತ್ತದೆ. ಆ ಹಬ್ಬದ ಹೆಸರು “ಫೆಟೆ ಡು ಸಿ ಸಿಟ್ರೊನ್‌’. ನಗರವಾಸಿಗಳು ಈ ಹಬ್ಬದ ಆಚರಣೆಯಲ್ಲಿ ಸಂಭ್ರಮದಿಂದ ತೊಡಗಿಕೊಳ್ಳುತ್ತಾರೆ. ಈ ನಗರದ ಪ್ರತಿಯೊಂದು ಕಡೆಗಳಲ್ಲಿ ನಿಂಬೆ ಹಣ್ಣಿನಿಂದ ನಿರ್ಮಿತಗೊಂಡ ಸುಂದರ ಕಲಾಕೃತಿಗಳು ಕಂಗೊಳಿಸುತ್ತವೆ. ಅದರ ಜೊತೆಗೆ ರಾತ್ರಿಯಲ್ಲಿ ನಿಂಬೆ ಬಣ್ಣವಾದ ಹಳದಿಯ ದೀಪಾಲಂಕಾರದ ರಂಗು ನೋಡುಗರ ಕಣ್ಮನ ಸೆಳೆಯುತ್ತದೆ.

ಏನೇನ್‌ ಮಾಡ್ತಾರೆ?
ಫ್ರೆಂಚರು ಬಹಳ ಸಡಗರ ಸಂಭ್ರಮದಿಂದ ಆಚರಿಸುವ  ಫೆಟೆ ಡು ಸಿ ಸಿಟ್ರೊನ್‌ ಎಂಬ ಹಬ್ಬವು ಇಂದು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಬ್ಬದಲ್ಲಿ ಜಗತ್ತಿನ ಪ್ರಸಿದ್ದ ಸ್ಮಾರಕಗಳು, ಕಟ್ಟಡಗಳು, ವಿವಿಧ ಪ್ರಾಣಿಪಕ್ಷಿಗಳು, ಗೊಂಬೆಗಳು, ವಾದ್ಯ ಪರಿಕರಗಳು… ಹೀಗೆ ಬಗೆ ಬಗೆಯ ವಿನ್ಯಾಸದ ಕಲಾಕೃತಿಗಳು ನಿಂಬೆ ಹಣ್ಣುಗಳಿಂದ ನಿರ್ಮಾಣಗೊಂಡು ಜನರಲ್ಲಿ ಅಚ್ಚರಿ ಮೂಡಿಸುತ್ತವೆ. ಕಲಾಕೃತಿಗಳ ರಚನೆಯಲ್ಲಿ ನಿಂಬೆ ಹಣ್ಣುಗಳ ಜೊತೆಗೆ ಕಿತ್ತಳೆ ಹಣ್ಣನ್ನೂ ಬಳಸಲಾಗುತ್ತದೆ. ಪ್ರತಿ ವರ್ಷ ವಿಷಯವೊಂದನ್ನು ಆರಿಸಿಕೊಂಡು ಆ ವಿಷಯಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಮೂಡಿಸಲಾಗುತ್ತದೆ. 2015ರಲ್ಲಿ  ನಿಂಬೆ ಹಬ್ಬದ ವಿಷಯ “ಭಾರತ’ ಆಗಿತ್ತು. ಆ ವರ್ಷ ಭಾರತದ ಸ್ಮಾರಕಗಳನ್ನು ನಿಂಬೆಹಣ್ಣಿನಲ್ಲಿ ತಯಾರಿಸಿ ಸಂಭ್ರಮಿಸಿದ್ದರು. 

ನಿಂಬೆ ಹಣ್ಣಿನ ಮೆರವಣಿಗೆ
ಈ ನಿಂಬೆ ಹಬ್ಬ ಮೊದಲು ಶುರುವಾಗಿದ್ದು 1935ರಲ್ಲಿ. ಚಿಕ್ಕದಾಗಿ ಪ್ರಾರಂಭಗೊಂಡ ಈ ಹಬ್ಬಕ್ಕೆ ಈಗ ಪ್ರತಿ ವರ್ಷ ವಿಶ್ವದ ಹಲವೆಡೆಗಳಿಂದ ಸುಮಾರು ಒಂದೂವರೆ ಲಕ್ಷದಷ್ಟು ಪ್ರವಾಸಿಗರು ಬರುತ್ತಾರೆ. ಮೂರು ವಾರಗಳ ನಡೆಯುವ ಈ ಹಬ್ಬದಲ್ಲಿ ನಿಂಬೆಯ ಕಲಾಕೃತಿ ಪ್ರದರ್ಶನ ಮಾತ್ರವಲ್ಲ, ಮೆರವಣಿಗೆಯೂ ನಡೆಯುತ್ತೆ. ಈ ನಿಂಬೆ ಉತ್ಸವದಲ್ಲಿ ಹಲವು ಜಾನಪದ ಕಲೆಗಳ ಪ್ರದರ್ಶನವನ್ನೂ ನೋಡಬಹುದು. ಇಡೀ ಮೆಂಟನ್‌ ನಗರದ ರಸ್ತೆಗಳು, ಉದ್ಯಾನವನಗಳು, ಕಟ್ಟಡಗಳು ಬರೀ ನಿಂಬೆ ಹಣ್ಣುಗಳಿಂದಲೇ ಅಲಂಕಾರಗೊಂಡು, ಹಳದಿ ಮತ್ತು ಕೇಸರಿ ಬಣ್ಣದ ದೀಪಗಳಿಂದ ನೋಡುಗರ ಮನಸೂರೆಗೊಳ್ಳುತ್ತವೆ. ಕಲಾಕೃತಿಗಳ ತಯಾರಿಕೆಗೆ ಬಳಕೆಯಾಗುವ ನಿಂಬೆ ಹಣ್ಣುಗಳ ತೂಕ ಸುಮಾರು 145 ಟನ್‌ಗಳು! 300ಕ್ಕೂ ಹೆಚ್ಚು ಪರಿಣತರು ಈ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗುತ್ತಾರೆ.

ದಂಡಿನಶಿವರ ಮಂಜುನಾಥ್‌

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.