ಜಾಲತಾಣ ತುಂಬಾ ಬಸವಣ್ಣನ ಧ್ಯಾನ, ಕನ್ನಡ ವಚನಗಳದ್ದೇ ಜಪ


Team Udayavani, Apr 19, 2018, 6:30 AM IST

Basava-Jayanti,-State-Elect.jpg

ಬೆಂಗಳೂರು: ಇವ ನಮ್ಮವ.. ಇವ ನಮ್ಮವ… ಅಂದು ಬಸವಣ್ಣ ಹೇಳಿದ ಮಾತನ್ನು ಇಂದು ರಾಜಕೀಯ ಪಕ್ಷಗಳು ಜಪಿಸುತ್ತಿವೆ. ಸಿದಾಟಛಿಂತ ಎಡವೇ ಇರಲಿ, ಬಲವೇ ಇರಲಿ ಪ್ರತಿಯೊಬ್ಬರಿಗೂ ಬಸವಣ್ಣ ಬೇಕು.

ರಾಜ್ಯ ಚುನಾವಣೆಯ ಹೊಸ್ತಿಲಲ್ಲೇ ಬಸವಣ್ಣನ ಹೆಸರಲ್ಲಿ ಧರ್ಮಯುದಟಛಿವೇ ನಡೆದು ಹೋಯ್ತು.ಇದೀಗ ಚುನಾವಣೆಯೂ ಅದೇ ಧರ್ಮ ಜಿಜ್ಞಾಸೆಯ ನೆರಳಲ್ಲೇ ನಡೆಯುತ್ತಿದೆ.

ಚುನಾವಣೆ ಪ್ರಚಾರ ತಾರಕಕ್ಕೇರಿರುವ ಮಧ್ಯೆಯೇ ಬಸವ ಜಯಂತಿಯೂ ಬಂದಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ನಾಯಕರು ಇದನ್ನು ತಮ್ಮ ಮೈಲೇಜ್‌ಗೆ ಬಳಸಿಕೊಂಡಿವೆ. ಟ್ವಿಟರ್‌ನಲ್ಲಿ ಬಸವ ಜಯಂತಿ ಹ್ಯಾಶ್‌ಟ್ಯಾಗ್‌ ದಿನದ ಟ್ರೆಂಡ್‌ ಆಗಿದ್ದು, 15.5 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳು ಹರಿದಾಡಿವೆ. ಬಸವೇಶ್ವರರ ಆದರ್ಶ ವಿಶ್ವಾದ್ಯಂತ ಮನುಕುಲಕ್ಕೆ ಪ್ರೇರೇಪಣೆ ಎಂದು ಪ್ರಧಾನಿ ಮೋದಿ ಲಂಡನ್‌ನಿಂದ ಕನ್ನಡದಲ್ಲಿ ಟ್ವೀಟ್‌ ಮಾಡಿದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಹಾ ಕಾಯಕಯೋಗಿಗೆ ನನ್ನ ನಮನಗಳು ಎಂದು ಕನ್ನಡದಲ್ಲಿ ಹೇಳಿದ್ದಾರೆ.

ಬಸವಣ್ಣನ ಕಾಯಕವೇ ಕೈಲಾಸ ಎಂಬ ಮಾತನ್ನು ಉಪಯೋಗಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ,
ತಮ್ಮ ಸರ್ಕಾರದ ಸಾಧನೆಯನ್ನು ಇಂಗ್ಲಿಷ್‌ನಲ್ಲಿ 5 ಟ್ವೀಟ್‌ಗಳಲ್ಲಿ ಸುದೀರ್ಘ‌ವಾಗಿ ವಿವರಿಸಿದ್ದಾರೆ. ನನಗೆ ವಿಶ್ವಮಾನವರಾಗಿ ಬಸವಣ್ಣ ಕಂಡಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಂಡು ಅವರ ಹಾದಿಯಲ್ಲಿ ನಡೆಯೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಮಿತ್‌ ಶಾ ಬೆಂಗಳೂರು ಪ್ರವಾಸ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಸರ್ಕಾರ ಬಂದ ಮೇಲಿಂದ ಕರ್ನಾಟಕದಲ್ಲಿ ಅಭಿವೃದಿಟಛಿ ಮತ್ತು ಉತ್ತಮ ಆಡಳಿತ ದೂರವಾಗಿದೆ ಎಂದು ಯಡಿಯೂರಪ್ಪ ಟ್ವೀಟಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಪ್ರತಿ ಟ್ವೀಟ್‌ ಮಾಡಿ, ಕನಿಷ್ಠಪಕ್ಷ ಬಸವ ಜಯಂತಿಯಂದಾದರೂ ಹುಸಿಯ ನುಡಿಯಲು ಬೇಡ ಎಂದು ಕಾಲೆಳೆದರು.

ಕಾಂಗ್ರೆಸ್‌ ಸರ್ಕಾರದ ಪ್ರತ್ಯೇಕ ಧರ್ಮ ಸ್ಥಾಪನೆಯ ನಿಲುವನ್ನು ಟೀಕಿಸಿ ಬಿಜೆಪಿ ಸರಣಿ ಕಾಟೂìನ್‌ಗಳನ್ನು ಹರಿಬಿಟ್ಟಿದೆ. ಅಮಿತ್‌ ಶಾ ಹಾಕಿದ ಹಾರ ಬಸವೇಶ್ವರರ ಪ್ರತಿಮೆಯಿಂದ ಜಾರಿ ಕೆಳಕ್ಕೆ ಬಿದ್ದುದನ್ನೇ ಗುರಿಯಾಗಿಸಿ ಕಾಂಗ್ರೆಸ್‌, ಗುರು ಬಸವಣ್ಣ ಅವರು ಅಮಿತ್‌ ಶಾರನ್ನು ತಿರಸ್ಕರಿಸಿದ್ದಾರೆ ಎಂದು ಟ್ವೀಟ್‌ ಮಾಡಿದೆ.

ಮತದಾನ- ಬಸವ ತತ್ವ
ಇದೆಲ್ಲದರ ಮಧ್ಯೆ,ಬಸವ ಜಯಂತಿಯಂದು ರಾಜ್ಯದ ಹಿತದೃಷ್ಟಿಯಿಂದ ನಾವು ಮತದಾನ ಮಾಡುತ್ತೇವೆ ಎಂಬ ನಿರ್ಣಯ ಮಾಡೋಣ, ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಬಸವಣ್ಣನವರ ಸಾಮಾಜಿಕ ನ್ಯಾಯದ ಚಿಂತನೆಯನ್ನು ವಾಸ್ತವವಾಗಿ ಸೋಣ ಎಂಬುದಾಗಿ ಬೆಂಗಳೂರಿನ ಮತದಾನ ಜಾಗೃತಿ ವೇದಿಕೆ ವೋಟ್‌ಮಾಡಿ2018 ಮಾಡಿರುವ ಮತಜಾಗೃತಿ ಟ್ವೀಟ್‌ ಗಮನ ಸೆಳೆದಿದೆ.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.