ಪಾರಂಪಳ್ಳಿಯಲ್ಲಿ ಮಾರಿ ಓಡಿಸುವಂತಿಲ್ಲ


Team Udayavani, Apr 20, 2018, 7:35 AM IST

Maripooja-19-4.jpg

ಕುಂದಾಪುರ: ತುಳುನಾಡಿನಲ್ಲಿ ಗೋಂದೋಲು (ಗೋಂದಲ) ಪೂಜೆ ನಡೆಯುತ್ತದೆ. ಅದರಲ್ಲಿ ಮಾರಿ ಓಡಿಸುವ ಆಚರಣೆಯೂ ಇದೆ. ಆದರೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಗೋಂದೋಲು ಪೂಜೆ ವಿಶಿಷ್ಟವಾದದ್ದು.

ಗೋಂದೋಲು ಪೂಜೆ
ಮರಾಠಿ ನಾಯ್ಕ ಜನಾಂಗದ ಸಂಸ್ಕೃತಿ ಪರಂಪರೆಯ ಮುಖ್ಯ ಧಾರ್ಮಿಕ ವಿಧಿ. ಶಕ್ತಿ ಸ್ವರೂಪಿಣಿ ದೇವಿಗೆ ಗೀತ ನೃತ್ಯಗಳ ಪೂಜೆಯೇ ಗೋಂದೋಲು. ತುಳುನಾಡಿನಲ್ಲಿ ಇದನ್ನು ವರ್ಷಾನುಗಟ್ಟಲೆಯಿಂದ ಆಚರಿಸಲಾಗುತ್ತಿದೆ. ಕಾಲಭೈರವನ ಪೂಜೆಗಾಗಿಯೂ ಈ ಆರಾಧನಾ ವಿಧಾನವನ್ನು ಅನುಸರಿಸಲಾಗುತ್ತದೆ. ಮಲೆನಾಡು ಮತ್ತು ಮಹಾರಾಷ್ಟ್ರ ಭಾಗದಲ್ಲಿ ಈ ಆಚರಣೆಯನ್ನು ಧಾರ್ಮಿಕ ಕೇಂದ್ರಗಳಲ್ಲಿ ನಡೆಸುವುದು ವಾಡಿಕೆ. ಆದರೆ ತುಳುನಾಡಿನಲ್ಲಿ ಮನೆಗಳಲ್ಲೇ ಶುಭ ಕಾರ್ಯದ ಹರಕೆ ರೂಪದಲ್ಲಿ ನಡೆಸುತ್ತಾರೆ. ಪೂಜಾ ವಿಧಾನಗಳನ್ನು ನಡೆಸಲು ಮರಾಠಿ ಜನಾಂಗದವರೇ ಆಗಬೇಕೆಂಬ ನಂಬಿಕೆ ಇದೆ.

ಹೀಗಿದೆ ಆಚರಣೆ
ಗುಂಪುಗೂಡಿದ ಭಕ್ತರು ಗೀತ ನೃತ್ಯಗಳ ಮೂಲಕ ಪಂಚ ದೀವಟಿಗೆ ಹಿಡಿದು ಭಜನೆಗಳನ್ನು ಜಪಿಸಿಕೊಂಡು ದೇವಿಯ ಸ್ಮರಣೆ ಮಾಡುತ್ತಾರೆ. ದೇವಿ ಪಾತ್ರಿಗೆ ದೇವಿಯ ಆವಾಹನೆಯಾಗಿ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಪೂಜೆ ಕೊನೆಗೊಳುತ್ತದೆ. ಹರಕೆಯ ರೂಪದಲ್ಲಿ ಕುರಿ, ಕೋಳಿ ಒಪ್ಪಿಸುತ್ತಾರೆ.

ಪಾರಂಪಳ್ಳಿಯ ಗೋಂದೋಲು
ಬ್ರಹ್ಮಾವರದ ಪೇತ್ರಿವರೆಗೆ ತುಳುನಾಡಿನ ಗೋಂದೋಲು ನಡೆಯುತ್ತಿದೆ. ಆದರೆ ಅನಂತರ ಕುಂದಾಪುರ, ಬೈಂದೂರುವರೆಗೂ ಗೋಂದೋಲು ಪೂಜೆ ಇಲ್ಲ ಪಾರಂಪಳ್ಳಿಯಲ್ಲಿ ಮಾತ್ರ ನೂರಾರು ವರ್ಷಗಳಿಂದ ಹರಕೆ ರೂಪದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಗುಂಡು ಪೂಜಾರಿ ಮೇಸ್ತ್ರಿ. ಈ ಭಾಗದಲ್ಲಿ ಹೆಚ್ಚಾಗಿರುವ ದೇವಾಡಿಗ, ಮೊಗವೀರ, ಪೂಜಾರಿ ಹಾಗೂ ಇತರ ಸಮುದಾಯದವರು ಜತೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮದ ಸುಮಾರು 600 ಮನೆಯವರು ಸಭೆ ಸೇರಿ ಮಾರ್ಚ್‌-ಎಪ್ರಿಲ್‌ನ ಮಂಗಳವಾರ/ ಶುಕ್ರವಾರದ ದಿನ ಪೂಜೆ ನಡೆಸುತ್ತೇವೆ ಎನ್ನುತ್ತಾರೆ ಅಧ್ಯಾಪಕ ಕೃಷ್ಣಪ್ಪ ಪೂಜಾರಿ. 

ನೀಲಾವರದವರು
ಈ ಪ್ರಾಂತ್ಯದಲ್ಲಿ ಗೋಂದೋಲು ಪೂಜೆ ನಡೆಸುವುದು ನೀಲಾವರದ ತಂಡದವರು ಮಾತ್ರ. ಊರವರು ಪೂಜೆ ನಡೆಸಿಕೊಡಬೇಕೆಂದು ನೀಲಾವರ ಮಟಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ತಂಡದ ಬಳಿ ವೀಳ್ಯ ಕೊಡುತ್ತಾರೆ. ಅಂತೆಯೇ ತಂಡದ ಎಂಟತ್ತು ಮಂದಿ ಬಂದು ಪೂಜೆ ನಡೆಸುತ್ತಾರೆ. ಕೊನೆಗೆ ದರ್ಶನ ಪಾತ್ರಿಯಿಂದ ದರ್ಶನ, ಭಕ್ತರ ಪ್ರಶ್ನೆಗಳಿಗೆ ಪರಿಹಾರ ದೊರೆಯುತ್ತದೆ. ದೊಂದಿ ಸೇವೆ, ಕುರಿ, ಕೋಳಿ ನೈವೇದ್ಯ ಮೂಲಕ ಪೂಜೆ ಮುಕ್ತಾಯವಾಗುತ್ತದೆ.

ಪಾರಂಪಳ್ಳಿಯಲ್ಲಿ ಯಾಕೆ ವಿಶೇಷ?
ಈ ಪ್ರಾಂತ್ಯದಲ್ಲಿ ಮಾರಿ ಓಡಿಸುವ ಆಚರಣೆ ಇಲ್ಲ. ಇದಕ್ಕೆ ಕಾರಣ ಸಾಲಿಗ್ರಾಮದಲ್ಲಿ ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಾಲಯ ಮುಖಾಮುಖೀಯಾಗಿದೆ. ಆಂಜನೇಯ ಹಾಗೂ ಗುರುನರಸಿಂಹ ದೇವಾಲಯಗಳ ಮಧ್ಯೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಮಾರಿ ಓಡಿಸುವಂತಿಲ್ಲ. ಆದ್ದರಿಂದ ಇಲ್ಲಿ ಗೋಂದೋಲು ಆಚರಣೆ ಮಾತ್ರ ಇದೆ. 

ನೂರಾರು ವರ್ಷಗಳಿಂದ ಇದೆ
ಪಾರಂಪಳ್ಳಿಯ ಚಿತ್ರಪಾಡಿಯಿಂದ ಕಾರ್ಕಡವರೆಗೆ ಮಾರಿ ಓಡಿಸಬಾರದು ಎಂಬ ನಿಯಮ ಇರುವ ಕಾರಣ ಎರಡು ವರ್ಷಕ್ಕೊಮ್ಮೆ ಆಚರಿಸುವ ಈ ಗೋಂದೋಲು ಪೂಜೆ ಭಕ್ತಿ ಭಾವದ ಆಚರಣೆಯಾಗಿದೆ. ಆರೋಗ್ಯ, ಮಳೆ, ಬೆಳೆ, ಸಮೃದ್ಧಿ, ನೆಮ್ಮದಿಗಾಗಿ ನಾವು ಸಾಮೂಹಿಕವಾಗಿ ಇಲ್ಲಿ ಪ್ರಾರ್ಥಿಸುತ್ತೇವೆ.
– ಶೇಖರ್‌ ಪೂಜಾರಿ, ಗಿಳಿಯಾರು ಶಾಲಾ ಶಿಕ್ಷಕರು

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

1-mahe

MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್‌ಗಳ ಗಾಮಾ ವಿಕಿರಣ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.