ಚಿನ್ನಾಭರಣ ವಹಿವಾಟು ಶೇ.20ರಷ್ಟು ಹೆಚ್ಚಳ


Team Udayavani, Apr 20, 2018, 4:26 PM IST

20-April-17.jpg

ಹುಬ್ಬಳ್ಳಿ: ಅಕ್ಷಯ ತೃತಿಯಾ ನಿಮಿತ್ತ ನಗರದಲ್ಲಿ ಚಿನ್ನಾಭರಣದ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಕಳೆದ ಬಾರಿಗಿಂತ ಶೇ.20ರಷ್ಟು ಮಾರಾಟ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ನಗರದಲ್ಲಿನ ಚಿನ್ನಾಭರಣಗಳ ಕಾರ್ಪೋರೇಟ್‌ ಶೋರೂಮ್‌ಗಳಲ್ಲಿ ಕೂಡ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಶೋರೂಮ್‌ ಗಳು ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಿದ್ದರಿಂದ ಚಿನ್ನದ ದರ ಹೆಚ್ಚಾಗುವ ಆತಂಕದಿಂದ ಮುಂಗಡವಾಗಿ ಬುಕ್ಕಿಂಗ್‌ ಮಾಡಿ ಆಭರಣ ಖರೀದಿಸಿದರು. ಕೆಲವು ಶೋರೂಮ್‌ ಗಳಲ್ಲಿ ಕಾಯ್ನಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಕೆಲ ಶೋರೂಮ್‌ಗಳು ಯಾವುದೇ ಮೇಕಿಂಗ್‌ ಚಾರ್ಜ್‌ ಇಲ್ಲದೇ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿದವು. 1 ತೊಲಿ ಬಂಗಾರದ ಆಭರಣ ಖರೀದಿಸಿದರೆ 1 ತೊಲಿ ಬೆಳ್ಳಿ ಆಭರಣ ಉಚಿತ, ಮೇಕಿಂಗ್‌ ಚಾರ್ಜ್‌ನಲ್ಲಿ ಕಡಿತ ಸೇರಿದಂತೆ ಚಿನ್ನಾಭರಣ ಶೋರೂಮ್‌ಗಳು ಗ್ರಾಹಕರನ್ನು ಆಕರ್ಷಿಸಲು ಹಲವಾರು ಕೊಡುಗೆಗಳನ್ನು ನೀಡಿದ್ದವು.

ಮದುವೆ ಸೀಜನ್‌ನಿಂದಾಗಿ ವಜ್ರದ ಉಂಗುರ, ತಾಳಿಚೈನ್‌, ಎರಡು ಸುತ್ತುಂಗುರಗಳು, ನೆಕ್‌ಲೇಸ್‌ ಹೀಗೆ ಮ್ಯಾರೇಜ್‌ ಪ್ಯಾಕೇಜ್‌ ಆರ್ನಾಮೆಂಟ್ಸ್‌ ಬುಕ್ಕಿಂಗ್‌ ಮಾಡಿದವರು ಅಕ್ಷಯ ತೃತಿಯಾದಂದು ಡಿಲೆವರಿ ಪಡೆದರು.

ನಗರದಲ್ಲಿ ಜೋಯಾಲುಕ್ಕಾಸ್‌, ಕಲ್ಯಾಣ್‌, ಲಕ್ಷ್ಮೀ ಗೋಲ್ಡ್‌ ಪ್ಯಾಲೇಸ್‌, ಕೆಜಿಪಿ ಜ್ಯುವೆಲರ್, ಮಲಬಾರ್‌, ಚೆಮ್ಮನೂರ್‌ ಶೋರೂಮ್‌ಗಳಲ್ಲಿ ವ್ಯಾಪಾರ ಜೋರಾಗಿತ್ತು. ಅಲ್ಲದೇ ಸಾಂಪ್ರದಾಯಿಕ ಆಭರಣ ಮಾರಾಟಗಾರರಾದ ಸರಾಫ‌ ಅಂಗಡಿಗಳಲ್ಲೂ ವಹಿವಾಟು ಉತ್ತಮವಾಗಿ ನಡೆದಿದೆ.

ಮೇಕಿಂಗ್‌ ಚಾರ್ಜ್‌ ಹೊರೆ ಹಾಗೂ ರಿಸೇಲ್‌ ಸಂದರ್ಭದಲ್ಲಿ ವೇಸ್ಟೇಜ್‌ ಶುಲ್ಕದಿಂದ ತಪ್ಪಿಸಿಕೊಳ್ಳುವ ದಿಸೆಯಲ್ಲಿ ಹಲವರು ಅಂಚೆ ಕಚೇರಿಯಿಂದ ಚಿನ್ನದ ನಾಣ್ಯಗಳನ್ನು ಕೂಡ ಖರೀದಿಸಿದ್ದಾರೆ.

ಹುಬ್ಬಳ್ಳಿಯ ಸರಾಫ‌ ಸಂಘದಲ್ಲಿ ಅಧಿಕೃತವಾಗಿ 160 ಜನ ಸದಸ್ಯರಿದ್ದು, ಸಣ್ಣ ಪುಟ್ಟ ವ್ಯಾಪಾರಿಗಳು ಸೇರಿ ಒಟ್ಟು ಸುಮಾರು 1000 ಚಿನ್ನಾಭರಣ ಮಾರಾಟಗಾರರಿದ್ದಾರೆ. ಮದುವೆಗಳ ಕಾರಣದಿಂದಾಗಿ ಚಿನ್ನಾಭರಣಗಳ ಖರೀದಿ ಪ್ರಮಾಣ ಹೆಚ್ಚಾಗಿದೆ. ಸರಾಫ‌ ಅಂಗಡಿಗಳಲ್ಲಿ ಖರೀದಿ ಮಾಡಿದವರಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಜನರ ಪ್ರಮಾಣ ಹೆಚ್ಚಾಗಿದೆ ಎಂದು ಸರಾಫ‌ ಸಂಘದವರು ಅಭಿಪ್ರಾಯಪಡುತ್ತಾರೆ.

ಕಳೆದ ವರ್ಷ ಅಕ್ಷಯ ತೃತಿಯ 2 ದಿನ ಇದ್ದುದರಿಂದ ಗ್ರಾಹಕರಲ್ಲಿ ಗೊಂದಲವಾಗಿತ್ತು. ಅಲ್ಲದೇ ಖರೀದಿ ಮಾಡಿದರೆ ಶುಭವಲ್ಲ ಎಂದು ಕೆಲವರು ಅಪಪ್ರಚಾರ ಮಾಡಿದ್ದರು. ಆದರೆ ಈ ಬಾರಿ ಅಕ್ಷಯ ತೃತಿಯಾದಂದು ಉತ್ತಮ ವ್ಯಾಪಾರ ನಡೆದಿದೆ. ಕಳೆದ ಬಾರಿಗಿಂತ ಶೇ.15ರಿಂದ ಶೇ.20ರಷ್ಟು ಹೆಚ್ಚಿನ ಮಾರಾಟ ನಡೆದಿರುವುದು ಸಂತಸದ ಸಂಗತಿ. ಯುವ ವರ್ಗದವರು ವಜ್ರಾಭರಣಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಆಭರಣಗಳನ್ನು ಮೊದಲೇ ಬುಕ್ಕಿಂಗ್‌ ಮಾಡಿ ಅಕ್ಷಯ ತೃತಿಯಾದಂದು ತೆಗೆದುಕೊಂಡು ಹೋದವರ ಸಂಖ್ಯೆ ಹೆಚ್ಚು. ನಮ್ಮ ಶೋರೂಮ್‌ನಲ್ಲಿ ನಾಣ್ಯಗಳಿಗಾಗಿ
ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಮೇಕಿಂಗ್‌ ಶುಲ್ಕ ಪಡೆಯದೇ ಬುಧವಾರ ನಾಣ್ಯಗಳನ್ನು ಮಾರಾಟ ಮಾಡಲಾಗಿದೆ.
ಶಶಾಂಕ ಏಕಬೋಟೆ, ಪ್ರಧಾನ ವ್ಯವಸ್ಥಾಪಕ ಮಲಬಾರ್‌ ಗೋಲ್ಡ್‌ ಹುಬ್ಬಳ್ಳಿ.

ಕಳೆದ ಬಾರಿಗಿಂತ ಈ ಸಾರಿ ಚಿನ್ನಾಭರಣಗಳ ಮಾರಾಟ ಶೇ.20ರಷ್ಟು ವೃದ್ಧಿಯಾಗಿದೆ. ಕಳೆದ 3 ವರ್ಷಗಳಲ್ಲಿ ಈ ಬಾರಿ ವ್ಯಾಪಾರ ಹೆಚ್ಚಾಗಿದೆ. ಕನಿಷ್ಟ 2 ಗ್ರಾಂಗಳಿಂದ 5 ಗ್ರಾಂಗಳವರೆಗೆ ಖರೀದಿ ಮಾಡಿದವರ ಸಂಖ್ಯೆ ಅಧಿಕ. ಬೆಳಗ್ಗೆ 9ರಿಂದ ರಾತ್ರಿ 10ರವರೆಗೂ ಚಿನ್ನಾಭರಣಗಳ ಮಾರಾಟ ನಡೆದಿದೆ. ಶೇ.80ರಷ್ಟು ಜನರು ಆಭರಣ ಖರೀದಿಸಿದರೆ, ಶೇ.20ರಷ್ಟು ಜನರು ಗಟ್ಟಿ ಬಂಗಾರ ಖರೀದಿ ಮಾಡಿದ್ದಾರೆ.
ಗೋವಿಂದ ನಿರಂಜನ, ಉತ್ತರ ಕರ್ನಾಟಕ ಸರಾಫ್ ಸಂಘಗಳ ಮಹಾಸಭಾ ಅಧ್ಯಕ್ಷ 

ವಿಶ್ವನಾಥ ಕೋಟಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

P.-Joshi

Bengaluru Jail: ಸರಕಾರದಿಂದಲೇ ದರ್ಶನ್‌ ಕೇಸ್‌ ಫೋಟೋ ವೈರಲ್‌: ಪ್ರಹ್ಲಾದ್‌ ಜೋಶಿ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad: ಮಹದಾಯಿ ಬಗ್ಗೆ ವನ್ಯಜೀವಿ ಮಂಡಳಿ ನಿರ್ಲಕ್ಷ್ಯ: ಸಚವ‌ ಲಾಡ್ ಕಿಡಿ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubli; ಬ್ಯಾಂಕ್‌ ದೋಚಲು ಯತ್ನಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

Hubballi: ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.