ಆಚಾರ್ಯರ ಸಹಜ ಶೈಲಿಯ ಕಲಾಕೃತಿಗಳು 


Team Udayavani, Apr 20, 2018, 6:51 PM IST

5.jpg

ದೇವಾನುದೇವತೆಗಳನ್ನು, ಪೌರಾಣಿಕ ಕಥಾ ಚಿತ್ರಗಳನ್ನು ಮತ್ತು ಭಾವಚಿತ್ರಗಳನ್ನು ಸಹಜ ಶೈಲಿಗಳಲ್ಲಿ ರಚಿಸಿ ಕ್ಯಾಲೆಂಡರ್‌ ರೂಪದಲ್ಲಿ ಭಾರತೀಯರ ಮನೆಗಳ ಗೋಡೆಯಲ್ಲಿ ರಾರಾಜಿಸುವಂತೆ ಮಾಡಿದವರು ಕೇರಳದ ತಿರುವಾಂಕೂರು ರಾಜ ಮನೆತನದ ಕಲಾವಿದ ರಾಜಾ ರವಿವರ್ಮ. ಅನಂತರದ ದಿನಗಳಲ್ಲಿ ಗುಲ್ಬರ್ಗದ ಎಸ್‌. ಎಂ. ಪಂಡಿತ್‌, ಬಿ.ಕೆ.ಎಸ್‌. ವರ್ಮಾ ಮತ್ತು ಅನೇಕ ಕಲಾವಿದರು ಈ ಪ್ರಯತ್ನ ಮಾಡಿದ್ದಾರೆ. ಈಗ ಮನೆಯ ಗೋಡೆಗಳಿಂದಲೂ, ಮನದ ಗೋಡೆಗಳಿಂದಲೂ ಇಂತಹ ಚಿತ್ರಗಳು ಮರೆಯಾಗಿವೆ. 

ಬ್ರಿಟಿಷರ ಸಂಸ್ಕೃತಿಯ ಪ್ರಭಾವದಿಂದ ಈ ಸಹಜ ಶೈಲಿಯು ರವಿವರ್ಮನೊಂದಿಗೆ ನಮ್ಮಲ್ಲಿ ರೂಢಿಗೆ ಬಂತು. ಭಾರತೀಯ ಚಿತ್ರ ರಚನಾ ಪದ್ಧತಿ ಮತ್ತು ಶೈಲಿ ಇದಕ್ಕಿಂತ ಭಿನ್ನವಾದರೂ ಸಹಜ ಶೈಲಿಯೂ ನಮ್ಮವೇ ಆಗಿ ಹೋಗಿದೆ. ಇಂತಹ ಕಲಾಕೃತಿಗಳನ್ನು ಇಂದು ದೇವಾಲಯದ ಗೋಡೆಗಳಲ್ಲಿ ಮಾತ್ರ ಕಾಣಬಹುದಾದರೂ ಇವುಗಳು ಡಿಜಿಟಲ್‌ ತಂತ್ರಜ್ಞಾನದ ಪ್ರತಿಗಳು. ಈ ಶೈಲಿಯ ಕಲಾಕೃತಿಗಳ ಪ್ರದರ್ಶನಗಳು ಕಾಣಸಿಗುವುದು ವಿರಳ. ಸಹಜ ಶೈಲಿಗಳ ರಚನೆಗೆ ಖ್ಯಾತರಾದ ಉಡುಪಿಯ ಕಲಾವಿದ ದಾಮೋದರ. ಎಲ್‌. ಆಚಾರ್ಯ ಅವರು ಉಡುಪಿಯ ರಾಮಕೃಷ್ಣ ಹೋಟೆಲ್‌ನ ಸಂಕೀರ್ಣದಲ್ಲಿ “ಶರನ್‌ ಆರ್ಟ್‌ ಗ್ಯಾಲರಿ’ಯನ್ನು ಆರಂಭಿಸಿ ಪ್ರಥಮವಾಗಿ ತನ್ನ ಆಯ್ದ ಸಹಜ ಶೈಲಿಯ ಕಲಾಕೃತಿಗಳ ಜೊತೆಗೆ ಇತರ ಶೈಲಿಯ ಪ್ರದರ್ಶನವನ್ನು ಏರ್ಪಡಿಸಿದ್ದರು.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಲಾಕೃತಿಗಳಿದ್ದಿದ್ದು, ಅದರಲ್ಲಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾದವರ ಭಾವಚಿತ್ರಗಳು ಭಾವಾಭಿವ್ಯಕ್ತಿಯೊಂದಿಗೆ ಜೀವಂತಿಕೆ ತುಂಬಿಕೊಂಡಿದ್ದವು. ಯಕ್ಷಗಾನ , ಕಥಕ್ಕಳಿ , ಭರತನಾಟ್ಯ , ಭೂತಕೋಲ , ಮಣಿಪುರಿ ನೃತ್ಯ , ಹುಲಿಯ ಗಾಂಭೀರ್ಯ ಮುಂತಾದ ಕೃತಿಗಳಲ್ಲಿನ ನೆರಳು- ಬೆಳಕು,ಸೂಕ್ಷ್ಮ ವಿಷಯ ಮತ್ತು ವರ್ಣ ಛಾಯೆಗಳು ಛಾಯಾಚಿತ್ರಗಳಷ್ಟೇ ಸ್ಪುಟವಾಗಿ ಮೂಡಿ ಬಂದಿತ್ತು. ಸೂಕ್ಷ್ಮ ಕಲೆಯಾದ ಮಿನಿಯೇಚರ್‌ ಚಿತ್ರಗಳನ್ನು ರಚಿಸುವಲ್ಲಿಯೂ ಹಿಡಿತವನ್ನು ಹೊಂದಿರುವ ಆಚಾರ್ಯರು ಈ ಕೃತಿಗಳಲ್ಲಿ ಕೃಷ್ಣನ ಬಾಲ್ಯ ಲೀಲೆಗಳನ್ನು ಅನಾವರಣಗೊಳಿಸಿದ್ದರು. ಅರೆ ಅಮೂರ್ತ ಶೈಲಿಯ ತಾಯಿ ಮಮತೆ, ರಾಧೆಯ ವಿರಹ, ನಾಗಾರಾಧನೆ, ಮೀನುಗಾರ ಮಹಿಳೆಯರು ಮುಂತಾದುವುಗಳಲ್ಲಿ ಆಚಾರ್ಯರ ಸೃಜನಶೀಲತೆ ಎದ್ದು ಕಾಣುತ್ತಿತ್ತು. ಪ್ರೋ ತಂತ್ರದಲ್ಲಿ ಮೂಡಿಬಂದ ವರ್ಣ ಜಲಪಾತ ಕೃತಿಯಲ್ಲಿನ ಇವರ ಜಾಣ್ಮೆ ಮೆಚ್ಚುವಂತಹುದು. ಉತ್ತಮ ಚೌಕಟ್ಟು ಹೊಂದಿದ ಹಾಗೂ ತೈಲ ವರ್ಣ, ಆಕ್ರಲಿಕ್‌ ಮತ್ತು ಜಲವರ್ಣ ಮಾಧ್ಯಮದ ಈ ಕೃತಿಗಳು ಆಚಾರ್ಯರಲ್ಲಿರುವ ಅಪಾರ ತಾಳ್ಮೆ, ನೆರಳು- ಬೆಳಕಿನ ಸಂಯೋಜನೆಯ ಜೊತೆಗೆ ಸಹಜತೆಗೆ ಹೊಂದಿಕೆಯಾಗುವ ವರ್ಣಗಳ ಮಿಶ್ರಣದಲ್ಲಿ ಅವರಿಗಿರುವ ಹಿಡಿತವನ್ನು ಎತ್ತಿ ತೋರಿಸುತ್ತಿತ್ತು. ಎರಡು ದಿನ ಕಲಾಪ್ರೇಮಿಗಳನ್ನೂ, ಜನಸಾಮಾನ್ಯರನ್ನೂ ಸೆಳೆಯುವಲ್ಲಿ ಈ ಕಲಾಪ್ರದರ್ಶನ ಯಶಸ್ವಿಯಾಯಿತು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.