ದಿಗ್ಗಜರ ಆಸ್ತಿಯಲ್ಲಿ ಏರಿಳಿತ


Team Udayavani, Apr 21, 2018, 6:40 AM IST

ssembly-election.jpg

ಘಟಾನುಘಟಿ ನಾಯಕರು ಶುಕ್ರವಾರವೂ ನಾಮಪತ್ರ ಸಲ್ಲಿಸಿದ್ದು, ಆಸ್ತಿವಿವರವನ್ನೂ ಸಲ್ಲಿಸಿದ್ದಾರೆ. ಹಲವು ನಾಯಕರ ಆಸ್ತಿಯಲ್ಲಿ ಏರಿಳಿತ ಕಂಡಿದೆ. ಹಾಲಾಡಿ ಶ್ರೀನಿವಾಸ ಶೆಟ್ಟರ ಬಳಿ ಚಿನ್ನ, ಬೆಳ್ಳಿ ಸೇರಿ ಬೆಲೆಬಾಳುವ ವಸ್ತುಗಳೇ ಇಲ್ಲ. ಸಚಿವ ರುದ್ರಪ್ಪ ಲಮಾಣಿ ಅವರಿಗಿಂತ ಅವರ ಪತ್ನಿಯೇ ಶ್ರೀಮಂತೆ. ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ವಿ.ಎಸ್‌. ಪಾಟೀಲ ಅವರ ಆಸ್ತಿ 5 ವರ್ಷಗಳಲ್ಲಿ 90 ಲಕ್ಷ ರೂ.ನಷ್ಟು ಇಳಿಕೆಯಾಗಿದೆ.

ಸಚಿವ ಲಮಾಣಿಗಿಂತ ಪತ್ನಿಯ ಆಸ್ತಿಯೇ ಹೆಚ್ಚು
ಹಾವೇರಿ:
ಸಚಿವ ರುದ್ರಪ್ಪ ಲಮಾಣಿ ತಮ್ಮ ನಾಮಪತ್ರದ ಜತೆಗೆ ಆಸ್ತಿ ವಿವರ ಸಲ್ಲಿಸಿದ್ದು, ತಮ್ಮ ಬಳಿ ಒಟ್ಟು 3,51,20,769 ರೂ. ಹಾಗೂ ಪತ್ನಿ ಬಳಿ 4,33,09,555 ರೂ. ಸೇರಿ ಒಟ್ಟು 7,84,30,324 ರೂ. ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಸಚಿವರಿಗಿಂತ ಸಚಿವರ ಪತ್ನಿಯೇ ಶ್ರೀಮಂತೆಯಾಗಿದ್ದಾರೆ. ಲಮಾಣಿ ತಮ್ಮ ಹೆಸರಲ್ಲಿ 1,61,92,704 ರೂ., ಪತ್ನಿ ಮಂಜುಳಾ ಹೆಸರಲ್ಲಿ 57,26,555 ರೂ., ಪುತ್ರಿ ಭಾನುಪ್ರಿಯಾ ಹೆಸರಲ್ಲಿ 20,02,523 ರೂ. ಹಾಗೂ ಪುತ್ರ ದರ್ಶನ್‌ ಹೆಸರಲ್ಲಿ 9,48,201 ರೂ. ಮೌಲ್ಯದ ಚರಾಸ್ತಿ ಇದೆ. ಹಾಗೆಯೇ ತಮ್ಮ ಹೆಸರಲ್ಲಿ 1,89,28,065 ರೂ., ಪತ್ನಿ ಹೆಸರಲ್ಲಿ 3,75,83,000 ರೂ. ಸ್ಥಿರಾಸ್ತಿ ಇರುವುದಾಗಿ ಎಂದು ಘೋಷಿಸಿದ್ದಾರೆ. ತಮ್ಮ ಬಳಿ ಎಂಟು ಕೆಜಿ ಬೆಳ್ಳಿ, 180 ಗ್ರಾಂ ಚಿನ್ನ ಇದೆ. ಪತ್ನಿ ಬಳಿ 700 ಗ್ರಾಂ ಚಿನ್ನ, ಎಂಟು ಕೆಜಿ ಬೆಳ್ಳಿ, ಪುತ್ರಿ ಬಳಿ 70 ಗ್ರಾಂ ಚಿನ್ನ, ಪುತ್ರನ ಬಳಿ 30 ಗ್ರಾಂ ಚಿನ್ನ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಕೋಟ್ಯಧಿಪತಿ ಪಾಟೀಲ್‌ 47 ಲಕ್ಷ ರೂ. ಸಾಲಗಾರ
ಬೀಳಗಿ:
ಕಾಂಗ್ರೆಸ್‌ ಶಾಸಕ ಜೆ.ಟಿ. ಪಾಟೀಲ ಒಟ್ಟು ಚರಾಸ್ತಿ 1,52,76,035 ರೂ., ಅವರ ಅವಲಂಬಿತರ ಒಟ್ಟು ಚರಾಸ್ತಿ 37,89,524 ರೂ. ಸೇರಿ ಒಟ್ಟು ಚರಾಸ್ತಿ ಮೌಲ್ಯ 1,90,65,559. ಇನ್ನು ಶಾಸಕರ ಸ್ಥಿರಾಸ್ತಿ 61,10,000 ರೂ. ಅವರ ಪತ್ನಿಯ ಸ್ಥಿರಾಸ್ತಿ 51,00,000 ರೂ. ಕುಟುಂಬದ ಒಟ್ಟು ಸ್ಥಿರಾಸ್ತಿ-ಚರಾಸ್ತಿ ಮೌಲ್ಯ 2,01,86,559 ರೂ. ಶಾಸಕರಲ್ಲಿರುವ ನಗದು ಹಣ 1,32,027 ರೂ., ಪತ್ನಿಯಲ್ಲಿರುವ ನಗದು 1,23,762 ರೂ. ಶಾಸಕರ ಹೆಸರಲ್ಲಿ ವಿವಿಧ ಬಾಂಕ್‌ಗಳಲ್ಲಿರುವ ಸಾಲ 47,83,483 ರೂ., ಪತ್ನಿಯ ಹೆಸರಲ್ಲಿ ಬ್ಯಾಂಕ್‌ ಸಾಲ 21,70,202 ರೂ. ಇದೆ.

ದೇಶಪಾಂಡೆಗಿಂತ ಪತ್ನಿಯೇ ಸಿರಿವಂತೆ
ಹಳಿಯಾಳ:
ಹಳಿಯಾಳ-ಜೋಯಿಡಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಆರ್‌.ವಿ. ದೇಶಪಾಂಡೆ ತಮ್ಮ ಆಸ್ತಿ ವಿವರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದು ಅವರಿಗಿಂತ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ. 

ದೇಶಪಾಂಡೆ ಹೆಸರಿನಲ್ಲಿ ಚರಾಸ್ತಿ ಒಟ್ಟು 22,69,96,666 ರೂ.ನಷ್ಟಿದ್ದು ಅವರ ಪತ್ನಿ ರಾಧಾ ಹೆಸರಿನಲ್ಲಿ 112,26,97,153 ಇದೆ. ದೇಶಪಾಂಡೆ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 18,30,514 ರೂ.ಠೇವಣಿ ಇದ್ದು, ರಾಧಾ ಅವರ ಹೆಸರಿನಲ್ಲಿ 7,45,76,000 ರೂ. ಇದೆ. ದೇಶಪಾಂಡೆ ಬಳಿ 3.56 ಲಕ್ಷ ನಗದು ಇದ್ದರೆ, ಪತ್ನಿ ರಾಧಾ ಬಳಿ 2.69 ಲಕ್ಷ ಇದೆ. ದೇಶಪಾಂಡೆ ಹೆಸರಿನಲ್ಲಿ ಒಟ್ಟು 21 ಕೋಟಿ 74 ಲಕ್ಷ 61 ಸಾವಿರ ರೂ. ಬೆಲೆಯ ಭೂಮಿ ಇದ್ದರೆ,ರಾಧಾ ಹೆಸರಿನಲ್ಲಿ 8,40,52,506 ರೂ. ಬೆಲೆಯ ಭೂಮಿ ಇದೆ. ವಿವಿಧ ಖಾಸಗಿ ಕಂಪನಿಗಳಲ್ಲಿ ರಾಧಾ ಅವರ ಹೆಸರಿನಲ್ಲಿ 1,35,20,080 ಬೆಲೆಯ ಷೇರುಗಳಿವೆ. ಇದರ ಹೊರತಾಗಿ ಇಬ್ಬರ ಹೆಸರಿನಲ್ಲಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ ಕೂಡ ಇವೆ ಎಂದು ಘೋಷಿಸಲಾಗಿದೆ.

ಕಾರಜೋಳ ಸ್ವಂತ ವಾಹನ ಹೊಂದಿಲ್ಲ!
ಮುಧೋಳ:
ಶಾಸಕ ಗೋವಿಂದ ಕಾರಜೋಳ 52,52,533 ಮೌಲ್ಯದ ಚರಾಸ್ತಿ ಮತ್ತು 96,00,000 ಮೊತ್ತದ ಸ್ಥಿರಾಸ್ತಿ 
ಹೊಂದಿದ್ದಾರೆ. ಪತ್ನಿ ಶಾಂತಾದೇವಿ 41,82,689 ಮೌಲ್ಯದ ಚರಾಸ್ತಿ, 18 ಲಕ್ಷ ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ 101 ತೊಲಿ ಬಂಗಾರದ ಆಭರಣಗಳು, 5 ಕೆಜಿ ಬೆಳ್ಳಿ ಸಾಮಾನುಗಳನ್ನು ಹೊಂದಿದ್ದಾರೆ. ಅಲ್ಲದೆ, ಸ್ವಂತ ವಾಹನಗಳಿಲ್ಲ,ಯಾವುದೇ ಸಾಲವಿಲ್ಲವೆಂದು ಘೋಷಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

7

Bengaluru: ನಗರದಲ್ಲಿ ಏಕಕಾಲಕ್ಕೆ  200 ಗಣೇಶ ಮೂರ್ತಿಗಳ ಮೆರವಣಿಗೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

5

Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.