ಮೀಸಲು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸುಶೀಲಾಬಾಯಿ
Team Udayavani, Apr 21, 2018, 3:04 PM IST
ಚಿಂಚೋಳಿ: ಪರಿಶಿಷ್ಟ ಜಾತಿ(ಮೀಸಲು) ಚಿಂಚೋಳಿ ವಿಧಾನಸಭೆ ಮತಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸುಶೀಲಾಬಾಯಿ ಬಸವರಾಜ ಕೊರವಿ ಶುಕ್ರವಾರ ತಮ್ಮ ನಾಮಪತ್ರವನ್ನು ತಾಲೂಕು ಚುನಾವಣೆ ಅಧಿ ಕಾರಿ ಸಂತೋಷ ಸಪ್ಪಂಡಿ ಅವರಿಗೆ ಸಲ್ಲಿಸಿದರು.
ಮೀಸಲು ವಿಧಾನಸಭೆ ಮತಕ್ಷೇತ್ರಕ್ಕೆ ಜೆಡಿಎಸ್ ಅಧಿಕೃತ ಅಭ್ಯರ್ಥಿ ಸುಶೀಲಾಬಾಯಿ ಬಸವರಾಜ ಕೊರವಿ ಅವರು ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ನ್ಯಾಯವಾದಿ ಆರ್.ಆರ್. ಪಾಟೀಲ ಮೋಘಾ, ಪುರಸಭೆ ಸದಸ್ಯ ಶಾಮರಾವ ಕೊರವಿ, ವಿಶ್ವನಾಥ ಬೀರನಳ್ಳಿ, ರಾಮಣ್ಣ ಸುಂಕಾ, ಮಹೆಬೂಬ ಶಾ, ಸಿದ್ದಯ್ಯ ಸ್ವಾಮಿ, ಎಸ್.ಕೆ. ಮುಕ್ತಾರ ಅವರೊಂದಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಪರಿಶಿಷ್ಟ ಜಾತಿ (ಮೀಸಲು)ಚಿಂಚೋಳಿ ವಿಧಾನಸಭೆ ಮತಕ್ಷೇತ್ರಕ್ಕೆ ಚುನಾವಣಾ ವೇಳಾಪಟ್ಟಿಯನ್ನು ಏ. 17ರಂದು ಪ್ರಕಟಿಸಲಾಗಿದೆ. ಆದರೆ ಗುರುವಾರದ ವರೆಗೆ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಿಲ್ಲ. ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಸುಶೀಲಾಬಾಯಿ ಬಸವರಾಜ ಕೊರವಿ ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ ಆಗಿದ್ದಾರೆ. ಚುನಾವಣೆ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಪಾಲಾಮೂರ, ರೇವಣಸಿದ್ದಪ್ಪ ದಂಡಿನ್, ವೆಂಕಟೇಶ ದುಗ್ಗನ, ನಾಗೇಶ ಭದ್ರಶೆಟ್ಟಿ ಇದ್ದರು.
ಆಸ್ತಿ ಮೌಲ್ಯ 78.40ಲಕ್ಷ ರೂ.: ಜೆಡಿಎಸ್ ಅಭ್ಯರ್ಥಿ ಸುಶೀಲಾಬಾಯಿ ಬಸವರಾಜ ಕೊರವಿ ಅವರ ಬಳಿ 77.50ಲಕ್ಷ ರೂ. ಬೆಲೆ ಬಾಳುವ 250 ತೊಲೆ ಬಂಗಾರ ಆಭರಣ, ನಗದು 90 ಸಾವಿರ ರೂ. ಸೇರಿದಂತೆ ಒಟ್ಟು ಮೌಲ್ಯ 78.40 ಲಕ್ಷ ರೂ. ಆಗಿದೆ ಎಂದು ತಾಲೂಕು ಚುನಾವಣಾ ಧಿಕಾರಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.