ಬುಶ್ರಾ ಪುತ್ರ, ಇಮ್ರಾನ್‌ ನಾಯಿಯಿಂದಾಗಿ ಸಂಕಷ್ಟಕ್ಕೆ ಗುರಿಯಾದ ಮದುವೆ


Team Udayavani, Apr 25, 2018, 4:21 PM IST

Imran-Khan-3rd-marriage-701.jpg

ಹೊಸದಿಲ್ಲಿ : ಪಾಕ್‌ ಕ್ರಿಕೆಟ್‌ ದಂತಕಥೆ ಹಾಗೂ ಪಾಕಿಸ್ಥಾನದ ತೆಹರೀಕ್‌ ಎ ಇನ್ಸಾಫ್ ಪಕ್ಷದ ಅಧ್ಯಕ್ಷರಾಗಿರುವ ಇಮ್ರಾನ್‌ ಖಾನ್‌ ಅವರ ಮೂರನೇ ಮದುವೆ ಕೂಡ ಈಗ ಸಂಕಷ್ಟಕ್ಕೆ ಗುರಿಯಾಗಿದೆ. 

ಪಾಕ್‌ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇಮ್ರಾನ್‌ ಖಾನ್‌ ಅವರ ಮೂರನೇ ಪತ್ನಿ ಬುಶ್ರಾ ಈಚೆಗೆ ಇಮ್ರಾನ್‌ ಖಾನ್‌ ಮನೆಯನ್ನು ತೊರೆದು ತನ್ನ ಹೆತ್ತವರ ಮನೆ ಸೇರಿದ್ದಾಳೆ. ಇಮ್ರಾನ್‌ – ಬುಶ್ರಾ ನಡುವೆ ತಲೆದೋರಿರುವ ವಿವಾದ, ಭಿನ್ನಮತವೇ ಇದಕ್ಕೆ ಕಾರಣವಾಗಿದೆ.

ಬುಶ್ರಾ ಳ ಮದುವೆಯ ಬಳಿಕವೂ ಆಕೆಯ ಮಗ ತನ್ನ ಮನೆಯಲ್ಲಿ ದೀರ್ಘಾವಧಿಗೆ ಉಳಿದುಕೊಂಡಿರುವುದು  ಇಮ್ರಾನ್‌ ಖಾನ್‌ ಅಸಮಾಧಾನಕ್ಕೆ, ಆಕ್ಷೇಪಕ್ಕೆ ಕಾರಣವಾಗಿದೆ. ಮದುವೆಗೆ ಮೊದಲೇ ಇದನ್ನು ಇಮ್ರಾನ್‌ ಖಾನ್‌ ಇದನ್ನು ಒಂದು ಶರತ್ತಾಗಿ ಇಟ್ಟಿದ್ದರು. ಮದುವೆಯ ಬಳಿಕ ಬುಶ್ರಾಳ ಮನೆಯವರು ಯಾರೂ ದೀರ್ಘಾವಧಿಗೆ ತನ್ನ ಮನೆಯಲ್ಲಿ ವಾಸಿಸಕೂಡದು ಎಂದು ಇಮ್ರಾನ್‌ ಕಟ್ಟಪ್ಪಣೆ ಮಾಡಿದ್ದರು. 

ಇದೇ ರೀತಿ ಬುಶ್ರಾ ಕೂಡ ಒಂದು ಶರತ್ತು ಹಾಕಿದ್ದಳು; ಅದೆಂದರೆ ಇಮ್ರಾನ್‌ ಖಾನ್‌ ಮನೆತುಂಬ ಇರುವ ಆತನ ಪೆಟ್‌ (ಅಚ್ಚುಮೆಚ್ಚಿನ) ನಾಯಿಗಳು ಮನೆಯೊಳಗೆ ಇರಕೂಡದು; ಅವು ಮನೆಯೊಳಗೆ ಇದ್ದರೆ ತನ್ನ ಆಧ್ಯಾತ್ಮಿಕ ಸಾಧನೆಗೆ ತೊಂದರೆ ಆಗುತ್ತದೆ ಎಂದು ! ಮೇಲಾಗಿ ಇಮ್ರಾನ್‌ ಖಾನ್‌ ಸಹೋದರಿಯರು ಕೂಡ ಆತನೊಂದಿಗೆ ಆತನ ಮನೆಯಲ್ಲೇ ವಾಸವಾಗಿರುವುದು ಬುಶ್ರಾಗೆ ಇಷ್ಟವಿಲ್ಲ. 

ಇಬ್ಬರೂ ಉಭಯತರ ಶರತ್ತುಗಳನ್ನು ಮದುವೆಗೆ ಮುನ್ನ ಒಪ್ಪಿಕೊಂಡಿದ್ದರು. ಆದರೆ ಇಬ್ಬರೂ ಮದುವೆಯ ಬಳಿಕ ಉಭಯತರ ಶರತ್ತನ್ನು ಮುರಿದಿದ್ದಾರೆ. ಇವರ ವೈವಾಹಿಕ ಬದುಕಿಗೇ ಈಗ ಇದುವೇ ಕುತ್ತಾಗಿ ಪರಿಣಮಿಸಿದೆ ! ಹೀಗೆಂದು ಪಾಕಿಸ್ಥಾನದ ಉರ್ದು ಸುದ್ದಿ ಪತ್ರಿಕೆ ಡೇಲಿ ಉಮ್ಮತ್‌ ವರದಿ ಮಾಡಿದೆ. 

ಅಂದ ಹಾಗೆ ಬುಶ್ರಾಗೆ ತನ್ನ ಮೊದಲ ಪತಿ ಖವಾರ್‌ ಫ‌ರೀದ್‌ ನಿಂದ ಐವರು ಮಕ್ಕಳಿದ್ದಾರೆ. ಈಕೆ ಲಾಹೋರ್‌ನಿಂದ ಸುಮಾರು 250 ಕಿ.ಮೀ. ದೂರದ ಪಾಕ್‌ಪಟಾನ್‌ ಜಿಲ್ಲೆಯ ನಿವಾಸಿ. ಈಕೆ ಈಗ ತನ್ನ 40ರ ದಶಕದ ಕೊನೆಯಲ್ಲಿದ್ದಾಳೆ. 

ಪಾಕ್‌ ಪಟಾನ್‌ ಜಿಲ್ಲೆಯು ಬಾಬಾ ಫ‌ರೀದ್‌ ಗಂಜ್‌ ಶಕರ್‌ ಮಸೀದಿಯಿಂದಾಗಿ ಪ್ರಸಿದ್ಧವಾಗಿದೆ. 2017ರಲ್ಲಿ ಇಮ್ರಾನ್‌ ಬುಶ್ರಾ ಳನ್ನು ಭೇಟಿಯಾಗಿ ಆಕೆಯಿಂದ ಆಧ್ಯಾತ್ಮಿಕ ಸಲಹೆಗಳನ್ನು ಪಡೆಯುತ್ತಿದ್ದರು. 2018ರ ಜನವರಿಯಲ್ಲಿ ತಾನು ಬುಶ್ರಾಳನ್ನು ಮದುವೆಯಾಗುವುದಾಗಿ ಇಮ್ರಾನ್‌ ಪ್ರಕಟಿಸಿದ್ದರು. 

ಇಮ್ರಾನ್‌ಗೆ ಬುಶ್ರಾ ಮೂರನೇ ಮಡದಿ. 1995ರಲ್ಲಿ ಬ್ರಿಟಿಷ್‌ ಬಿಲಿಯಾಧಿಪತಿಯ ಮಗಳು ಜೆಮೀಮಾ ಗೋಲ್ಡ್‌ಸ್ಮಿತ್‌ಳನ್ನು ಮದುವೆಯಾಗಿದ್ದ ಇಮ್ರಾನ್‌ ಖಾನ್‌ ದಾಂಪತ್ಯ 9 ವರ್ಷಕ್ಕೇ ಕೊನೆಗೊಂಡಿತ್ತು. ಆಕೆಯಿಂದ ಇಮ್ರಾನ್‌ಗೆ ಇಬ್ಬರು ಪುತ್ರರು ಜನಿಸಿದ್ದಾರೆ. ಇಮ್ರಾನ್‌ ಖಾನ್‌ ಎರಡನೇ ಮದುವೆ ನಡೆದದ್ದು 2015ರಲ್ಲಿ – ಟಿವಿ ನಿರೂಪಕಿ ರೆಹಾಮ್‌ ಖಾನ್‌ ಜತೆಗೆ. ಈ ಮದುವೆ ಕೇವಲ 10 ತಿಂಗಳಲ್ಲಿ ಕೊನೆಗೊಂಡಿತ್ತು. 

ಟಾಪ್ ನ್ಯೂಸ್

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.