ಬ್ರೇಕ್ ಹಾಕಿದ್ರೆ ಹಿಂದಿದ್ದವರ ಕಥೆ ಕೈಲಾಸ
Team Udayavani, Apr 26, 2018, 6:10 AM IST
ಕುಂದಾಪುರ: ಮರವಂತೆ ಕಡಲ್ಕೊರೆತ ಕಾಮಗಾರಿಗೆ ಹೆದ್ದಾರಿಯಲ್ಲಿ ತೆರೆದ ಟಿಪ್ಪರ್ನಲ್ಲೇ ದೊಡ್ಡ ಗಾತ್ರದ ಕಲ್ಲುಗಳನ್ನು ಯಾವುದೇ ಸುರಕ್ಷತಾ ಕ್ರಮ ಇಲ್ಲದೇ ಹೇರಿಕೊಂಡು ಕೊಂಡೊಯ್ಯಲಾಗುತ್ತಿದ್ದು ಇದು ಇತರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಂಟಕಪ್ರಾಯವಾಗಿದೆ.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿ
ಸರಾಗ ಸಂಚಾರ ಕಷ್ಟಕರವಾದ ರಸ್ತೆ ಯಲ್ಲಿ ಅಚಾನಕ್ ತಿರುವುಗಳು, ಉಬ್ಬು ತಗ್ಗು ಗಳು ಇರುವ ಕಾರಣ ವಾಹನದಲ್ಲಿ ಕುಲುಕಾಟ ಸಾಮಾನ್ಯ. ಒಂದೊಮ್ಮೆ ಎದುರಿನಿಂದ ಬರುವ ಅಪಾಯ ತಪ್ಪಿಸಲು ಟಿಪ್ಪರ್ ಚಾಲಕ ಬ್ರೇಕ್ ಅದುಮಿದರೆ ವಾಹನದಲ್ಲಿ ಹೋಗುವವರು, ಅದರಲ್ಲೂ ಬೈಕ್ ಸವಾರರು ದೇವರಿಗೆ “ಪ್ರಾರ್ಥನೆ’ ಸಲ್ಲಿಸುವುದಷ್ಟೇ ಬಾಕಿ. ಈ ರೀತಿ ಕಲ್ಲುಗಳನ್ನು ಕೊಂಡೊಯ್ಯುವವರ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸುರಕ್ಷಾ ಕ್ರಮಗಳನ್ನು ಅಳವಡಿಸಿಯೇ ಕಲ್ಲುಗಳನ್ನು ಕೊಂಡೊಯ್ಯುವಂತೆ ಸೂಚಿಸುವ ಅಗತ್ಯವಿದೆ.
ಸಂಚಾರಿ ನಿಯಮ ಪಾಲನೆಯಾಗುತ್ತಿಲ್ಲ
ಕಲ್ಲು ಹೇರಿದ ಲಾರಿಗಳ ಹಿಂದೆ ಚಲಿಸುವುದು, ವಾಹನ ಸವಾರರ ಪಾಲಿಗೆ ಯಮದೂತನಂತೆ ಭಾಸವಾಗುತ್ತಿದೆ. ನಂಬರ್ ಪ್ಲೇಟ್ನಲ್ಲಿ ನೋಂದಣಿ ಸಂಖ್ಯೆ ಸರಿ ಕಾಣದ, ಬ್ರೇಕ್ ಲೈಟ್ ಇಲ್ಲದ, ಕಲ್ಲು ಲಾರಿಯಿಂದ ರಸ್ತೆಗೆ ಬೀಳದಂತೆ ಯಾವುದೇ ಸುರಕ್ಷೆ ಅಳವಡಿಸದ ವಾಹನ ಚಲಿಸುವಾಗ ಹಿಂಬದಿ ವಾಹನ ಸವಾರರು ಅಪಾಯ ತಪ್ಪಿಸಿಕೊಂಡರೆ ಸಾಕು ಎಂದುಕೊಳ್ಳುತ್ತಾರೆ. ಕಲ್ಲುಗಳು ಉರುಳದಂತೆ ಲಾರಿಯಲ್ಲಿ ತಡೆಯಿಲ್ಲದಿರುವುದು ಅಪಾಯವಾಗಿದೆ. ಜತೆಗೆ ಟಿಪ್ಪರ್ಗಳ ಚಾಲಕರೂ ತೀರಾ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದಾರೆ. ಹೆದ್ದಾರಿಯೂ ದುರಸ್ತಿಯಾಗುತ್ತಿರುವುದರಿಂದ ಅಲ್ಲಲ್ಲಿ ಅನೇಕ ಅಡೆತಡೆಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
ಪೋಕ್ಸೋ ಪ್ರಕರಣ: “ಬಿ’ ವರದಿ ತಿರಸ್ಕರಿಸಿ ಪ್ರಕರಣಕ್ಕೆ ಮರುಜೀವ ನೀಡಿದ ನ್ಯಾಯಾಲಯ
Udupi: ಕೆಲಸಕ್ಕೆ ಸೇರಿದ ವ್ಯಕ್ತಿಯಿಂದ ಚಿನ್ನ ಕಳವು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ: ಲೋಕಾಯುಕ್ತದಿಂದ ಬಿಎಸ್ವೈ ವಿಚಾರಣೆ
Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ
Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್ ಸೀಮಿತ: ಆರ್. ಅಶೋಕ್
Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ
Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.