![Jammu–Fire-LOC](https://www.udayavani.com/wp-content/uploads/2025/02/Jammu-Fire-LOC-415x249.jpg)
![Jammu–Fire-LOC](https://www.udayavani.com/wp-content/uploads/2025/02/Jammu-Fire-LOC-415x249.jpg)
Team Udayavani, Apr 27, 2018, 6:45 AM IST
ಮರವಂತೆ: ಮರವಂತೆಯಲ್ಲಿ ಕಡಲ್ಕೊರೆತಕ್ಕೆ ತಡೆ ಹಾಕುವ ಕಲ್ಲುಗಳು ಜೋಡಣೆ ಕಾರ್ಯ ದಶಕದಿಂದ ಚಾಲ್ತಿಯಲ್ಲಿದೆ. ಆದರೆ ಇದಕ್ಕೆ ನಿರೀಕ್ಷಿತ ಯಶಸ್ಸು ಸಿಗದೇ ಇರುವುದರಿಂದ ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಮತ್ತು ನಿರ್ವಹಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಶಾಶ್ವತ ಪರಿಹಾರವಾಗಿ ಮರವಂತೆ- ತ್ರಾಸಿಯಲ್ಲಿ ಹಾದುಹೋಗುವ ಹೆದ್ದಾರಿಯ ರಕ್ಷಣೆಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ನೆರವಿನಿಂದ 3.50 ಕಿ.ಮೀ. ಉದ್ದ ಕಡಲ ತೀರದಲ್ಲಿ 88 ಕೋ.ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಒಟ್ಟು 24 ಗ್ರೋಯಿನ್
ಮರವಂತೆ-ತ್ರಾಸಿಯಲ್ಲಿ ಒಟ್ಟು 24 ಗ್ರೋಯಿನ್ಗಳು ನಿರ್ಮಾಣವಾಗುತ್ತಿವೆ. 85-90 ಮೀ. ಅಂತರದಲ್ಲಿ ಸಮುದ್ರಕ್ಕೆ ಚಾಚಿಕೊಂಡಂತೆ ನಿರ್ಮಾಣವಾಗಲಿವೆ. ಇವು ಅಲೆಗಳ ಶಕ್ತಿಗುಂದಿಸುವ ಮೂಲಕ ದಂಡೆಯನ್ನು ರಕ್ಷಿಸುತ್ತವೆ. ಜತೆಗೆ ದಂಡೆಗುಂಟ ಮರಳು ಶೇಖರಣೆಯಾಗುವಂತೆ ಮಾಡುತ್ತವೆ.
ಕಲ್ಲುಗಳಿಂದ ಪರಿಹಾರವಿಲ್ಲ!
ಕರಾವಳಿಯಲ್ಲಿ ಕಡಲ್ಕೊರೆತ ಸಾಮಾನ್ಯ ವೆಂಬಂತೆ ಇದೆ. ತ್ರಾಸಿ- ಮರವಂತೆ ಕಡಲ ತೀರ ಹೊರತಾಗಿಲ್ಲ. ಇದಕ್ಕಾಗಿ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಿ ಕಡಲ್ಕೊರೆತ ತಡೆಗೆ ಯತ್ನಿಸಲಾಗುತ್ತಿತ್ತು. ಆದರೆ ಇದು ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಕಡಲಿನ ಅಬ್ಬರಕ್ಕೆ ಕಲ್ಲುಗಳು ಪ್ರತಿ ವರ್ಷವೂ ಸಮುದ್ರ ಪಾಲಾಗುತ್ತಿರುವುದು ಮುಂದುವರಿದಿದೆ.
ಗ್ರೋಯಿನ್ (ತಡೆಗೋಡೆ) ವಿಧಾನ
ಇಲ್ಲಿ ಸಮುದ್ರದುದ್ದಕ್ಕೂ ಕಲ್ಲುಗಳನ್ನು ಹಾಕುವ ಬದಲಾಗಿ, ಸಮುದ್ರಕ್ಕೆದುರಾಗಿ ಲಂಬವಾಗಿ ಕಲ್ಲುಗಳನ್ನು ಅಥವಾ ಗೋಡೆಗಳನ್ನು/ವಿಶೇಷವಾದ ಕಾಂಕ್ರೀಟ್ ಸಂರಚನೆಗಳನ್ನು ಹಾಕಲಾಗುತ್ತದೆ. ಇದು ತೀರ ಪ್ರದೇಶಗಳಲ್ಲಿ ಸವಕಳಿ ತಡೆಯುತ್ತದೆ. ಈ ವಿಧಾನ ಮುಂದುವರಿದ ದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದರಿಂದ ಮರಳಿನ ದಂಡೆ ವಿಸ್ತಾರಗೊಳ್ಳುತ್ತವೆ ಇದು ಬೀಚ್ ಸೌಂದರ್ಯವನ್ನೂ ವೃದ್ಧಿಸುತ್ತದೆ. ಇಲ್ಲೀಗ ಈ ಮಾದರಿಯ ಕಾಮಗಾರಿ ಶೇ. 30 ಮುಗಿದಿದ್ದು, ಡಿಸೆಂಬರ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಲಿದೆ.
ಕಾಮಗಾರಿಗೆ ತೊಂದರೆ
ಮರವಂತೆಯ ಕಾಮಗಾರಿ ಕರಾರು ಪ್ರಕಾರ ಮಾರ್ಚ್ ಅಂತ್ಯಕ್ಕೆ ಮುಗಿÓ ಬೇಕಿತ್ತು. ಆದರೆ ಮಳೆಗಾಲದಲ್ಲಿ ಹಾಗೂ ನಂತರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯಿದೆ.
– ಕಿಶೋರ್ ಕುಮಾರ್,
ಪೈಲಟ್ ಕಾಮಗಾರಿಯ ಡಿಜಿಎಂ
– ಕೃಷ್ಣ ಬಿಜೂರು
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Line of Control: ಭಾರತ, ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ: ಯಾವುದೇ ಅಪಾಯವಿಲ್ಲ
Inter Faith: ಅಂತರ್ಧರ್ಮೀಯ ವಿವಾಹಗಳು ತಪ್ಪಲ್ಲ: ಮಹಾರಾಷ್ಟ್ರ ಸಿಎಂ ಫಡ್ನವೀಸ್
Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
You seem to have an Ad Blocker on.
To continue reading, please turn it off or whitelist Udayavani.