ನೆನಪಿನಲ್ಲುಳಿಯುವ ಗಾರ್ಗಿ ಶಬರಾಯ ಕಛೇರಿ 


Team Udayavani, Apr 27, 2018, 6:00 AM IST

309.jpg

ಶಿವಮೊಗ್ಗದ ಸೌರಭ ಮತ್ತು ಐಸಿರಿ ಭಕ್ತಿವಾಹಿನಿ ಆಯೋಜಿಸಿದ ರಾಜ್ಯ ಮಟ್ಟದ ” ನನ್ನ ಹಾಡು ….ದಾಸರ ಹಾಡು’ ದಾಸರ ಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಡುಪಿಯ ಕು| ಗಾರ್ಗಿ ಶಬರಾಯ ಅವರನ್ನು ರಾಗಧನ, ಉಡುಪಿ ವತಿಯಿಂದ ಮಾ.24ರಂದು ಎಮ್‌ಜಿಎಮ್‌ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅಭಿನಂದಿಸ ಲಾಯಿತು.ಈ ಸಂದರ್ಭದಲ್ಲಿ ಗಾರ್ಗಿ ಸುಗಮ ಸಂಗೀತ ಕಛೇರಿ ನೀಡಿದರು. ಸಾಂಪ್ರದಾಯಿಕವಾದ ಕೇದಾರ ರಾಗದಲ್ಲಿ ರ‌ಂಗನಾಥನ ನೋಡುವ ಬನ್ನಿರೀ (ಶ್ರೀಪಾದ ರಾಯರ ರಚನೆ) ಪದದಿಂದ ಹಿತಮಿತವಾದ ಸ್ವರಕಲ್ಪನೆಗಳೊಂದಿಗೆ ಹಾಡುಗಾರಿಕೆ ಶುರುವಾಯಿತು. ಬೃಂದಾವನೀ ಸಾರಂಗದಲ್ಲಿ ಸದಾ ಎನ್ನ ಹೃದಯದಲ್ಲಿ (ವಿಜಯದಾಸರ ಕೀರ್ತನೆ) ಇಂಪಾಗಿ ಮೂಡಿ ಬಂದಿತು. ಬಳಿಕ ತೋಡಿ ರಾಗದ ಜೀವ ಸ್ವರಗಳ ಸಂಚಾರಗಳನ್ನು ಹರಹರವಾಗಿ ಬಿಡಿಸಿಟ್ಟ ಉಗಾಭೋಗದ ಮುಖೇನ ರಾಗಾಲಾಪನೆ, ಪುರಂದರ ದಾಸರ ತಾ ತಕಧಿಮಿತ ಭಕ್ತಿ ಗೀತೆಯ ಪ್ರಸ್ತುತಿ, ರಾಗಕ್ಕೆ ಮೆರುಗು ತರುವಂತಹ ಕಲ್ಪನಾ ಸ್ವರಗಳೊಂದಿಗೆ ನಡೆಯಿತು. ಅನಂತರ ದ್ವಿಜಾವಂತಿಯ ರಾಗಾಲಾಪನೆಯನ್ನು ಮಾಡಿದ ಕಲಾವಿದೆ ಹಾಡಿದ್ದು ಕುವೆಂಪು ಅವರ ಸೂತ್ರಧಾರಿಯು ನೀನು ಪಾತ್ರಧಾರಿಯು ನಾನು ಎನ್ನುವ ಕವ‌ನವನ್ನು. 

ಇಲ್ಲಿ ಗಾಯಕಿಯು ಪದ್ಯದ ಅರ್ಥವನ್ನು ಶೃತಿ ಹಾಗೂ ಹಿಮ್ಮೇಳದೊಂದಿಗೆ ಮಾತಿನಲ್ಲಿ ವಿವರಿಸಿದಾಗ ಅದು ಬೇರೆಯೇ ತೆರನಾದ ಒಂದು ವಿಶೇಷವಾದ ಮಾಹೋಲ್‌ನ್ನು ಸೃಷ್ಟಿಸಿತು. ಖಂಡ ಛಾಪು ತಾಳದಲ್ಲಿ ಹಾಡಿದ ಈ ಪ್ರಸ್ತುತಿ ತುಂಬಾ ಪರಿಣಾಮಕಾರಿಯಾಗಿದ್ದು ಬಹಳ ಕಾಲ ಕೇಳುಗರ ಮನದಲ್ಲಿ ನಿಲ್ಲುವಂತದ್ದು. ಮುಂದೆ ದಾರಿಯ ತೋರೋ ಗೋಪಾಲ… ವಾದಿರಾಜರ ರಚನೆಯನ್ನು ವಿಭಿನ್ನವಾಗಿ ಹಾಡಿದರು. 

ಅದೇನೆಂದರೆ ಬಿಲಹರಿ ಮತ್ತು ಚಂದ್ರಕೌಂಸ್‌ ಎರಡೂ ರಾಗಗಳಲ್ಲಿ ಹಾಡಿದ್ದು ಆದರೆ ಇದು ಮಾಮೂಲಿ ರಾಗ ಮಾಲಿಕಿಕೆಗಳಂತಿರದೆ ಪ್ರತಿ ಸಾಲುಗಳಗೆ ಎರಡೆರಡು ರಾಗಗಳನ್ನು ಬಳಸಿಕೊಂಡು ಹಾಡಲಾಯಿತು. ಒಂದೊಂದು ನಿಮಿಷಕ್ಕೂ ರಾಗಗಳನ್ನು ಬದಲಿಸಿಕೊಂಡು ಹಾಡಿದ ಈ ರಚನೆ ಗಾಯಕಿಗೆ ರಾಗಗಳ ಮೇಲಿರುವ‌ ಹಿಡಿತವನ್ನು ತೋರಿಸುತ್ತಿತ್ತು. ಕೊನೆಯಲ್ಲಿ ಎನ್ನ ಪಾಲಿಸೋ ಕರುಣಾಕರ- ಸೋಹನಿ, ಗಿಳಿಯು ಪಂಜರದೊಳಿಲ್ಲ – ಹಿಂದುಸ್ಥಾನಿ ಜಂಜೂಟಿ, ಹೀರನ್ನ ಸಮಜ್‌ – ಕಬೀರ್‌ ದಾಸ್‌ ಭಜನ್‌ನೊಂದಿಗೆ ಹಾಡಿಗಾರಿಕೆ ಸಮಾಪನಗೊ‌ಂಡಿತು.

ಈ ಕಾರ್ಯಕ್ರಮವನ್ನು ಸುಗಮ ಸಂಗೀತ ಕಛೇರಿ ಎನ್ನುವುದು ಹೆಚ್ಚು ಸೂಕ್ತವಾದೀತು. ಏಕೆಂದರೆ ಶಾಸ್ತ್ರೀಯತೆಗೆ ಚ್ಯುತಿ ಬಾರದಂತೆ ಭಕ್ತಿ ಗೀತೆಗಳಿಗೆ ರಾಗ ವಿಸ್ತಾರ, ಸ್ವರ ಪ್ರಸ್ತಾರಗಳನ್ನು ಅಳವಡಿಸಿಕೊಂಡಿರುವುದು ಹಾಗೆಯೇ ಸುಗಮತೆಗೆ ಕುಂದು ಬಾರದಂತೆ ಸುಗಮ ಸಂಗೀತದ ಜಾಡಿನಲ್ಲಿಯೇ ಹಾಡಿರುವಂತದ್ದು. 

ಒಟ್ಟಿನಲ್ಲಿ ಗಾರ್ಗಿ ಶಬರಾಯ ಸಂಗೀತ ಕಛೇರಿಯನ್ನು ನೀಡುವಾಗ ಅದು ಶಾಸ್ತ್ರೀಯತೆಯ ಚೌಕಟ್ಟಿನಲ್ಲಿಯೇ ಇರುತ್ತದೆ. ಅಂತೆಯೇ ಲಘು ಸಂಗೀತದ ಕಾರ್ಯಕ್ರಮದಲ್ಲಿ ಸುಗಮ ಸಂಗೀತಕ್ಕೆ ಬೇಕಾದಂತೆಯೇ ಇರುತ್ತದೆ. ಪಕ್ಕವಾದ್ಯದಲ್ಲಿ, ವೇಣುಗೋಪಾಲ್‌ ಶರ್ಮ, ವಯೊಲಿನ್‌ನಲ್ಲಿ ಸುಮುಖ ಕಾರಂತ, ಮೃದಂಗದಲ್ಲಿ ಮಾಧವ ಆಚಾರ್ಯಸಹಕರಿಸಿದರು. 

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.