ಮಂಗಳೂರು ಉತ್ತರ ಶ್ರೀಮಂತ ಕ್ಷೇತ್ರದಲ್ಲಿ ಅಸಮಾಧಾನ!


Team Udayavani, Apr 27, 2018, 8:40 AM IST

MRPL-26-4.jpg

ಮಂಗಳೂರು: ಮಂಗಳೂರು ಉತ್ತರ ನಾಮಾಂಕಿತ ನಿಕಟಪೂರ್ವ ಸುರತ್ಕಲ್‌ ಕ್ಷೇತ್ರ ದೇಶದ ಮಹತ್ವದ ವಿಧಾನಸಭಾ ಕ್ಷೇತ್ರಗಳಲ್ಲೊಂದು ಎಂಬ ಮನ್ನಣೆಗೆ ಪಾತ್ರವಾಗಿದೆ. ಆರ್ಥಿಕ ವ್ಯವಹಾರದ ದೃಷ್ಟಿಕೋನದಲ್ಲಿದು ಅತೀ ಶ್ರೀಮಂತ ಕ್ಷೇತ್ರ ಕೂಡ ಹೌದು!

ಇದಕ್ಕೆ ಕಾರಣ: ದೇಶದ ಅತೀ ಪ್ರಮುಖ ಉದ್ಯಮಗಳಲ್ಲೊಂದಾದ ಎಂಆರ್‌ಪಿಎಲ್‌- ಒಎನ್‌ಜಿಸಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ದೇಶದ ಪ್ರಮುಖ ಬಂದರುಗಳಲ್ಲೊಂದಾದ ನವ ಮಂಗಳೂರು ಬಂದರು ಮಹತ್ವದ ರಸಗೊಬ್ಬರ ಉತ್ಪಾದನಾ ಕೇಂದ್ರವಾದ MCF, ಬೈಕಂಪಾಡಿ ಕೈಗಾರಿಕಾ ಎಸ್ಟೇಟ್‌, ಬಿಎಎಸ್‌ಎಫ್‌, ವಿಶೇಷ ಆರ್ಥಿಕ ವಲಯ, ಭಾಗಶಃ ಮಂಗಳೂರು ಅಂ. ವಿಮಾನ ನಿಲ್ದಾಣ.. ಹೀಗೆ ಎಲ್ಲವೂ ಈ ಕ್ಷೇತ್ರದಲ್ಲಿದೆ. ದೇಶದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕರ್ನಾಟಕ- ಎನ್‌ಐಟಿಕೆ (ಮೊದಲು ಕೆಆರ್‌ಇಸಿ) ಇಲ್ಲಿದೆ. ಇನ್ನು ಧಾರ್ಮಿಕ, ಸಾಂಸ್ಕೃತಿಕ, ಲಲಿತ ಕಲೆ, ಕ್ರೀಡೆ, ಮನೋರಂಜನೆ, ಸಾಮುದ್ರಿಕ ಚಟುವಟಿಕೆ… ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಗಣನೀಯವಾದ ಸಾಧನೆಯ ಪರಂಪರೆ.

ಮಂಗಳೂರು ಉತ್ತರ ಎಂಬ ಹೊಸ ಭೌಗೋಳಿಕ ಸ್ವರೂಪ ಸಹಿತವಾದ ನಾಮಕರಣವನ್ನು 2008ರಲ್ಲಿ ಸುರತ್ಕಲ್‌ ಪಡೆಯಿತು. 1952ರಿಂದ 2004ರ ವರೆಗೆ ಇದು ಸುರತ್ಕಲ್‌ ಕ್ಷೇತ್ರ. ವಿಧಾನಸಭೆಗೆ ಉಪ ಚುನಾವಣೆ ನಡೆದ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಸುರತ್ಕಲ್‌ ಕೂಡ ಒಂದು: 1957ರಲ್ಲಿ ಆಯ್ಕೆಯಾದ ಬಿ.ಆರ್‌. ಕರ್ಕೇರ ಅವರು ನಿಧನರಾದ ಹಿನ್ನೆಲೆಯಲ್ಲಿ 1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೀನುಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ ಕೆ. ದೂಮಪ್ಪ ಅವರು ಸ್ಪರ್ಧಿಸಿ ಜಯಿಸಿದರು. ಮುಂದೆ ಅವರು ವಿ.ಪ. ಸದಸ್ಯರೂ ಆಗಿದ್ದರು.

ಸುರತ್ಕಲ್‌-  ಮಂಗಳೂರು ಉತ್ತರ ಕ್ಷೇತ್ರ ಎಲ್ಲಾ ಚುನಾವಣೆಗಳಲ್ಲಿಯೂ ಸ್ವಾರಸ್ಯಕರವಾದ ಕಣವನ್ನು ಹೊಂದಿರುತ್ತದೆ. ದೇಶದ ಪ್ರಮುಖ ಉದ್ಯಮ- ಸಂಸ್ಥೆಗಳವರು ಕೂಡಾ ಇಲ್ಲಿನ ಫಲಿತಾಂಶಕ್ಕೆ ಕುತೂಹಲದಿಂದ ಕಾದಿರುತ್ತಾರೆ. ಹಾಗಾಗಿ ಆಂಗ್ಲ ಮಾಧ್ಯಮಗಳು – This is the consituency of National importance ಎಂದು ವ್ಯಾಖ್ಯಾನಿಸುತ್ತವೆ. ಈ ಕ್ಷೇತ್ರದಲ್ಲಿ ಮಹಾನ್‌ ಮುಂದಾಳುಗಳು, ಹೊಸ ಚಿಂತನೆಯ ಯುವಕರು ಸ್ಪರ್ಧಿಸಿರುವ ಮತ್ತು ಸ್ಪರ್ಧಿಸುತ್ತಿರುವ ಇತಿಹಾಸವಿದೆ. ಈ ವರೆಗಿನ ಉಪಚುನಾವಣೆ ಸಹಿತ 15 ಚುನಾವಣೆಗಳಲ್ಲಿ ಕಾಂಗ್ರೆಸ್‌- 9, ಬಿಜೆಪಿ- 3, ಪ್ರಜಾ ಸೋಶಲಿಸ್ಟ್‌ ಪಾರ್ಟಿ- 2 ಬಾರಿ; ಜನತಾ ಪಾರ್ಟಿ ಒಂದು ಬಾರಿ ಇಲ್ಲಿ ಜಯಿಸಿದೆ.

ಈ ಬಾರಿ ಬಿಜೆಪಿ ಪಾಳಯದಲ್ಲಿ ಒಂದಷ್ಟು ಅಸಮಾಧಾನ ಬಹಿರಂಗವಾಗಿಯೇ ಭುಗಿಲೆದ್ದಿದೆ. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಯುವ ಮುಖಂಡ ಸತ್ಯಜಿತ್‌ಗೆ ಟಿಕೆಟ್‌ ನೀಡಿಲ್ಲ ಎಂಬುದು ಈ ಅಸಮಾಧಾನದ ಮೂಲ ಕಾರಣ. ಮೊದಲು ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಈ ಕ್ಷೇತ್ರ ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿದೆ.

ಅಂದ ಹಾಗೆ…
ರಾ. ಹೆದ್ದಾರಿ, ವಿಮಾನ ಯಾನ, ಸಮುದ್ರ ಸಂಪರ್ಕ, ಕೊಂಕಣ ರೈಲ್ವೇ ಸಂಪರ್ಕ ಸಹಿತವಾದ ಈ ಕ್ಷೇತ್ರ ಹಲವು ಪ್ರಥಮಗಳನ್ನು ದಾಖಲಿಸಿದೆ: 1959ರಲ್ಲಿ ಉಪ ಚುನಾವಣೆ; ಸ್ವಾತಂತ್ರ್ಯ ಹೋರಾಟಗಾರರಾದ ಬಿ. ಆರ್‌. ಕರ್ಕೇರ, ಡಾ | ಸಂಜೀವನಾಥ ಐಕಳ, ಎಂ. ಲೋಕಯ್ಯ ಶೆಟ್ಟಿ ಗೆಲುವು; ಯಕ್ಷಗಾನ ಕಲಾವಿದರಾದ ಪಿ. ವಿ. ಐತಾಳ್‌, ಕುಂಬ್ಳೆ ಸುಂದರ ರಾವ್‌ ಜಯ; ಕಾರ್ಮಿಕ ನಾಯಕರಾದ ಎನ್‌. ಎಂ. ಅಡ್ಯಂತಾಯ, ಲೋಕಯ್ಯ ಶೆಟ್ಟಿ ಆಯ್ಕೆ; ಸತತ ಎರಡು ಬಾರಿ ಆಯ್ಕೆ ಮತ್ತು ಗರಿಷ್ಠ 70,057 ಮತ ಪಡೆದ ಜೆ. ಕೃಷ್ಣ  ಪಾಲೆಮಾರ್‌; ಸಚಿವರಾದ ಸುಬ್ಬಯ್ಯ ಶೆಟ್ಟಿ , ಪಾಲೆಮಾರ್‌. ಈ ಬಾರಿ ಯಾವ ದಾಖಲೆ? ಕಾದು ನೋಡಬೇಕು!

— ಮನೋಹರ ಪ್ರಸಾದ್‌

ಟಾಪ್ ನ್ಯೂಸ್

MLC-Counting

Council By Election: ವಿಧಾನ ಪರಿಷತ್‌ ಉಪ ಚುನಾವಣೆ; ಇಂದು ಮತ ಎಣಿಕೆ

Kadaba-Rain

Heavy Rain: ಕಡಬ ಪರಿಸರದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ

Manipal Marathon: ಮಾಹೆ ವಿ.ವಿ: ಮಣಿಪಾಲ ಮ್ಯಾರಥಾನ್‌ ನೋಂದಣಿ ಆರಂಭ

Dharmasthala

Dharmasthala: ಇಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ 57ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

KB-Bank

Mangaluru: ಕರ್ಣಾಟಕ ಬ್ಯಾಂಕ್‌: 336.07 ಕೋ.ರೂ. ನಿವ್ವಳ ಲಾಭ

Tourism-MNG

Coastal: ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿಗೂ ಆದ್ಯತೆ: ಎಂಡಿ ಡಾ.ರಾಜೇಂದ್ರ ಕೆ.ವಿ.

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC-Counting

Council By Election: ವಿಧಾನ ಪರಿಷತ್‌ ಉಪ ಚುನಾವಣೆ; ಇಂದು ಮತ ಎಣಿಕೆ

Kadaba-Rain

Heavy Rain: ಕಡಬ ಪರಿಸರದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ

Dharmasthala

Dharmasthala: ಇಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ 57ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

Tourism-MNG

Coastal: ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿಗೂ ಆದ್ಯತೆ: ಎಂಡಿ ಡಾ.ರಾಜೇಂದ್ರ ಕೆ.ವಿ.

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

MLC-Counting

Council By Election: ವಿಧಾನ ಪರಿಷತ್‌ ಉಪ ಚುನಾವಣೆ; ಇಂದು ಮತ ಎಣಿಕೆ

Kadaba-Rain

Heavy Rain: ಕಡಬ ಪರಿಸರದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ

Manipal Marathon: ಮಾಹೆ ವಿ.ವಿ: ಮಣಿಪಾಲ ಮ್ಯಾರಥಾನ್‌ ನೋಂದಣಿ ಆರಂಭ

Dharmasthala

Dharmasthala: ಇಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ 57ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

KB-Bank

Mangaluru: ಕರ್ಣಾಟಕ ಬ್ಯಾಂಕ್‌: 336.07 ಕೋ.ರೂ. ನಿವ್ವಳ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.