ಉಚಿತ ಅಕ್ಕಿಗೆ ದುಪ್ಪಟ್ಟು ಖರ್ಚು


Team Udayavani, Apr 30, 2018, 8:10 AM IST

Rice-13-10.jpg

ಸುಳ್ಯ: ಬಯೋಮೆಟ್ರಿಕ್‌ ಇಲ್ಲದ ಪಡಿತರ ಅಂಗಡಿಗಳಲ್ಲಿ ಕೂಪನ್‌ ಕಡ್ಡಾಯ. ಖಾಲಿ ಕೈಯಲ್ಲಿ ಬಂದರೆ ಫ‌ಲಾನುಭವಿಗಳಿಗೆ ಪಡಿತರ ಸಾಮಗ್ರಿ ಸಿಗದು! ಇಂತಹ ನಿಯಮದಿಂದ ಫಲಾನುಭವಿಗಳು ಹೈರಾಣಾಗಿದ್ದಾರೆ. ತಿಂಗಳಿಗೊಮ್ಮೆ ಪಂಚಾಯತ್‌ಗೆ ತೆರಳಿ ಕೂಪನ್‌ ಪಡೆಯಲು ಸರತಿ ಸಾಲಿನಲ್ಲಿ ಕಾಯುವ ಪ್ರಮೇಯ ಇನ್ನೂ ತಪ್ಪಿಲ್ಲ. ಕೂಪನ್‌ ಕಡ್ಡಾಯ ಕ್ರಮದಿಂದ ಉಚಿತ ಅಕ್ಕಿ, ಸಾಮಗ್ರಿ ಪಡೆಯುವ ಫಲಾನುಭವಿಗೆ ದುಪ್ಪಟ್ಟು ಖರ್ಚಿನ ಹೊರೆ ಬೀಳುತ್ತಿದೆ. ಪುತ್ತೂರು ಮತ್ತು ಸುಳ್ಯ ತಾಲೂಕಿನ 30 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಜೋಡಣೆ ವ್ಯವಸ್ಥೆ ಆಗಿಲ್ಲ. ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಅನ್ನುತ್ತಾರೆ ಅಧಿಕಾರಿಗಳು.

ಪಾಯಿಂಟ್‌ ಆಫ್‌ ಸೇಲ್‌
ಕುಟುಂಬಗಳಿಗೆ ಸಮರ್ಪಕ ಸೌಲಭ್ಯ ಒದಗಿಸುವ ಸಲುವಾಗಿ ಕೂಪನ್‌ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಬಳಿಕ ಅದನ್ನು ರದ್ದುಗೊಳಿಸಿ, ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಬಳಸಿ, ವಿತರಿಸಲು ನಿರ್ಧರಿಸಲಾಗಿತ್ತು. ಇದು ಇಂಟರ್‌ನೆಟ್‌ ವ್ಯವಸ್ಥೆ., ಬಯೋಮೆಟ್ರಿಕ್‌ ಆಧಾರಿತ ಯಂತ್ರ. ಇಲ್ಲಿ ಫಲಾನುಭವಿ ಸಾಮಗ್ರಿ ಪಡೆಯುವ ಮೊದಲು ಬೆರಳಚ್ಚು ದಾಖಲಿಸಬೇಕು. ರೇಷನ್‌ ಕಾರ್ಡ್‌ ಸಂಖ್ಯೆ ದಾಖಲಿಸಿದ ಸಂದರ್ಭ, ಆ ಕುಟುಂಬದ ಪೂರ್ತಿ ವಿವರ ಆನ್‌ಲೈನ್‌ ಮೂಲಕ ಪ್ರಕಟಗೊಳ್ಳುತ್ತದೆ. ಅದರಂತೆ ನಿಗದಿತ ಪ್ರಮಾಣದ ಪಡಿತರ ಸಾಮಗ್ರಿ ಪಡೆಯಲು ಅರ್ಹತೆ ಸಿಗುತ್ತದೆ.

ಬೆರಳಚ್ಚು ಇಲ್ಲದಿದ್ದರೆ ಕೂಪನ್‌
ಪಡಿತರ ಸೌಲಭ್ಯ ವಿತರಣೆಗೆ ಸಂಬಂಧಿಸಿ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಕೂಪನ್‌ ಮೂಲಕ ಸಾಮಗ್ರಿ ವಿತರಿಸುತ್ತಾರೆ. ಯಂತ್ರ ಸ್ಥಾಪನೆಗೆ ಇಂಟರ್‌ನೆಟ್‌ ಸೌಲಭ್ಯ ಅಗತ್ಯ. ಇಂಟರ್‌ನೆಟ್‌, ಕಂಪ್ಯೂಟರ್‌ ಸೌಲಭ್ಯ ಇಲ್ಲದ ಪಡಿತರ ಅಂಗಡಿಯಲ್ಲಿ ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಅಳವಡಿಸುವಂತಿಲ್ಲ. ಫಲಾನುಭವಿಗಳು ಗ್ರಾ.ಪಂ. ನಿಂದ ಕೂಪನ್‌ ಪಡೆದುಕೊಂಡರೆ ಮಾತ್ರ ಪಡಿತರ ಸಾಮಗ್ರಿ ದೊರೆಯುತ್ತದೆ. ಈ ನಿಯಮವೇ ಫಲಾನುಭವಿಗೆ ಹೊರೆ ಎನಿಸಿದೆ. ಪಂ.ಗೆ ತೆರಳಿ, ಅಲ್ಲಿ ಕೂಪನ್‌ಗೆ ಕಾಯಬೇಕು. ಫಲಾನುಭವಿ ಕೂಪನ್‌ಗೆ ಬಂದಾಗ ಇಂಟರ್‌ನೆಟ್‌ ಕೈಕೊಟ್ಟರೆ ಮರುದಿನ ಬರಬೇಕು. ಕೂಪನ್‌ ಬಗ್ಗೆ ಮಾಹಿತಿ ಇಲ್ಲದ ಫಲಾನುಭವಿಗೆ ನೇರವಾಗಿ ಪಡಿತರ ಅಂಗಡಿಗೆ ಹೋದರೆ ಬರಿಗೈಯಲ್ಲಿ ಮರಳಬೇಕಾಗುತ್ತದೆ.

ಖರ್ಚು ಅಧಿಕ
ಪಡಿತರ ಅಂಗಡಿಯಲ್ಲಿ ಉಚಿತ ಸಾಮಗ್ರಿ ಸಿಗುವುದಾದರೂ ಫಲಾನುಭವಿಗಳು ಗ್ರಾ.ಪಂ.ಗೆ ತೆರಳಲು ವ್ಯಯಿಸುವ ಖರ್ಚು ಹೋಲಿಸಿದರೆ, ಉಚಿತಕ್ಕೆ ಕೈ ಒಡ್ಡುವುದಕ್ಕಿಂತಲೂ ಅಂಗಡಿಗಳಲ್ಲಿ ದುಡ್ಡು ಕೊಟ್ಟು ಖರೀದಿಸುವುದೇ ಒಳಿತು ಎನ್ನಿ ಸೀತು. ಸಂಚಾರ ವ್ಯವಸ್ಥೆ ಸರಿ ಇಲ್ಲದ ಕಡೆಗಳಲ್ಲಿ ಬಾಡಿಗೆ ವಾಹನ ಬಳಸಿ ಪಂಚಾಯತ್‌ಗೆ ಹೋಗಬೇಕು. ಅಲ್ಲಿ ಇಂಟರ್‌ ನೆಟ್‌ ಕೈ ಕೊಟ್ಟರೆ ಮತ್ತೂಂದು ದಿನ ಹೋಗಬೇಕು. ಪಡಿತರ ವ್ಯವಸ್ಥೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿದ್ದು, ಕೂಲಿ ಮಾಡಿ ಜೀವನ ನಿರ್ವಹಿಸುತ್ತಿವೆ. ಹೀಗಾಗಿ ಈ ಕೂಪನ್‌ ಅಲೆದಾಟ ಅವರಿಗೆ ಹೊರೆಯಾಗಿ ಪರಿಣಮಿಸಿದೆ. ಜಿಲ್ಲಾಧಿಕಾರಿ ಆದೇಶದ ಅನುಸಾರ ಈ ವ್ಯವಸ್ಥೆ ಜಾರಿಗೊಳಿಸಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆಯ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಇಲ್ಲ?
ಪುತ್ತೂರು ತಾ|ನ 76 ಪಡಿತರ ಅಂಗಡಿಗಳ ಪೈಕಿ 11ರಲ್ಲಿ ಮತ್ತು ಸುಳ್ಯ ತಾ| ನಲ್ಲಿ 58ರಲ್ಲಿ 19 ಕಡೆ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲ. ಪುತ್ತೂರು ತಾ|ನ ಶಾಂತಿಗೋಡು, ನೇರೋಳ್ತಡ್ಕ, ಇಚ್ಲಂಪಾಡಿ, ಕೊಂಬಾರು, ಬೊಳುನಡ್ಕ, ಪಾಲ್ತಾಡಿ, ದೋಳ್ಪಾಡಿ, ಕೈಕಾರ, ಐತ್ತೂರು, ಕೈಕಾರ, ಸುಳ್ಯಪದವು ಹಾಗೂ ಸುಳ್ಯ ತಾ|ನ ಮುಕ್ಕೂರು, ದುಗಲಡ್ಕ, ಮಿತ್ತಡ್ಕ, ಬಡ್ಡಡ್ಕ, ಚೊಕ್ಕಾಡಿ, ಬೊಳ್ಳಾಜೆ, ಅರಂಬೂರು, ಕೋಲ್ಚಾರು, ಗೂನಡ್ಕ, ಐನೆಕಿದು, ಶಾಂತಿನಗರ, ಬಳ್ಳಕ್ಕ, ತಳೂರು, ನಡುಗಲ್ಲು, ತೊಡಿಕಾನದಲ್ಲಿ  ಕೂಪನ್‌ ವ್ಯವಸ್ಥೆಯಿದೆ. ಎಣ್ಮೂರು, ಶಾಂತಿಗೋಡಿನ ಫಲಾನುಭವಿಗಳಿಗೆ ಅಲೆಕ್ಕಾಡಿಯಲ್ಲಿ , ತೊಡಿಕಾನದವರಿಗೆ ಅರಂತೋಡಿನಲ್ಲಿ, ಕೊಡಿಯಾಲದ ಫಲಾನುಭವಿಗಳಿಗೆ ಕೊಡಿಯಾಲ ಗ್ರಾ.ಪಂ.ನಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸಲಾಗಿದೆ. 

ಮ್ಯಾನುವೆಲ್‌ನಲ್ಲೇ ನೀಡಿ
ಈ ಹಿಂದೆ ಕೂಪನ್‌ ವ್ಯವಸ್ಥೆಯ ಬಗ್ಗೆ ವಿರೋಧ ವ್ಯಕ್ತವಾದಾಗ, ಬಯೋಮೆಟ್ರಿಕ್‌ ಇಲ್ಲದ ಕಡೆಗಳಲ್ಲಿ ಮ್ಯಾನುವೆಲ್‌ ನಡಿ ಸಾಮಗ್ರಿ ವಿತರಿಸುವಂತೆ ಸೂಚಿಸಿದ್ದರೂ, ಅದು ಪಾಲನೆಗೆ ಬಂದಿಲ್ಲ. ಕೂಪನ್‌ ವ್ಯವಸ್ಥೆ ಬದಲಾಗಿ, ಬಯೋಮೆಟ್ರಿಕ್‌ ಅಳವಡಿಕೆ ತನಕ ಮ್ಯಾನುವೆಲ್‌ನಲ್ಲಿ ಸಾಮಗ್ರಿ ನೀಡಬೇಕು. ಇಲ್ಲದಿದ್ದರೆ ನಮಗೆ ಹೊರೆ ಆಗುತ್ತದೆ.
– ಸುಶೀಲಾ, ಫಲಾನುಭವಿ, ಸುಳ್ಯ

— ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪುತ್ತೂರು: ಮುಚ್ಚಿಹೋದ ಶಾಲೆಯಿಂದ ಮುಚ್ಚಲಿದ್ದ ಶಾಲೆಗೆ ಜೀವದಾನ!

ಪುತ್ತೂರು: ಮುಚ್ಚಿಹೋದ ಶಾಲೆಯಿಂದ ಮುಚ್ಚಲಿದ್ದ ಶಾಲೆಗೆ ಜೀವದಾನ!

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

6-belthangady

Belthangady: ಉತ್ತಮ ಮಳೆ; ತೆಂಕಾರಂದೂರು ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ

3-holiday

Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

Sullia ಜಾಲ್ಸೂರು: ಐರಾವತ ಬಸ್‌ – ರಿಕ್ಷಾ ಢಿಕ್ಕಿ

Sullia ಜಾಲ್ಸೂರು: ಐರಾವತ ಬಸ್‌ – ರಿಕ್ಷಾ ಢಿಕ್ಕಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.