ಸನ್ಯಾಸ ಜೀವನಕ್ಕೆ ಕಾಲಿಟ್ಟ ಭಾವನಾ ಚೋಪ್ರಾ
Team Udayavani, May 1, 2018, 4:39 PM IST
ಕಂಪ್ಲಿ: ಪಟ್ಟಣದ ವ್ಯಾಪಾರಸ್ಥ ಜೈನ ಮನೆತನದಲ್ಲಿ ಜನಿಸಿ ಪದವಿ ಶಿಕ್ಷಣ ಪಡೆದು ನಿನ್ನೆಯವರೆಗೂ ಭಾವನಾ ಚೋಪ್ರಾ ಎಂದು ಗುರುತಿಸಲ್ಪಡುತ್ತಿದ್ದ ಜೈನ ಯುವತಿ ಸೋಮವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದಳು.
ಜೈನ ಗುರುಗಳಾದ ಉಪ ಪ್ರವರ್ತ ಉರ್ಜುಪುಂಜ ವೈರಾಗ್ಯರತ್ನ ಸಾಗರ್ಜೀ ಹಾಗೂ ತಪೋನಿಷ್ಠ ಪಾರ್ಶ್ವರತ್ನ ಸಾಗರ್ಜೀ ಅವರು ಸನ್ಯಾಸ ದೀಕ್ಷೆ ನೀಡಿದರು.
ಇದಕ್ಕೂ ಮುನ್ನಾ ಬೆಳಗ್ಗೆಯಿಂದ ಸನ್ಯಾಸ ಸ್ವೀಕಾರ ಕಾರ್ಯಕ್ರಮಗಳು ಜರುಗಿದವು. ನಂತರ ಧಾರ್ಮಿಕ ಪ್ರವಚನ ಹಾಗೂ ಭಕ್ತಿಗೀತೆಗಳ ಗಾಯನ ಜರುಗಿತು. ನಂತರ ಜೈನ ಗುರುಗಳು ಯುವತಿಗೆ ಸನ್ಯಾಸ ದೀಕ್ಷೆ ನೀಡಿ ಪ್ರಿಯ್ ಕೃಪಾಂಜನಶ್ರೀಜಿ ಎಂದು ಪುನರ್ ನಾಮಕರಣ ಮಾಡಿದರು.
ಸನ್ಯಾಸ ಸ್ವೀಕರಿಸಿದ ಪ್ರಿಯ್ ಕೃಪಾಂಜನಶ್ರೀಜಿ ಅವರು ಮುಂದಿನ ದಿನಗಳಲ್ಲಿ ದೀಕ್ಷೆ ನಂತರ ಪಾರ್ಶ್ವಮಣಿ ತೀರ್ಥಪ್ರೇರಿಕ್ ಗಜ್ ಗಣಿನಿ ಶ್ರೀ ಸುಲೋಚನಾ ಶ್ರೀಜಿ ಹಾಗೂ ಏವಂಸುಲಕ್ಷಣಾಶ್ರೀಜಿಗಳ ಪರಮ ಶಿಷ್ಯೆಯಾಗಿ ಸನ್ಯಾಸ ಜೀವನ ಸವೆಸುವ, ಸಂಸ್ಕೃತ, ಪ್ರಾಕೃತ ಕಲಿಯುತ್ತಿದ್ದು, ಜೈನಧರ್ಮದ ಮೂಲ ಗ್ರಂಥಗಳನ್ನು ಅಧ್ಯಯನ ಮಾಡುವ, ಬೋಧಿಸುವ ಆಶಯ ಹೊಂದಿದ್ದಾರೆ.
ಮಂಗಳವಾರ ತನ್ನ ಪೂರ್ವಾಶ್ರಮದ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತನ್ನ ಸನ್ಯಾಸ ಜೀವನ ಸಾಗಿಸುತ್ತಾಳೆ. ಇವರ ಪ್ರಥಮ ಚಾರ್ತುಮಾಸ್ಯ ಜುಲೈ ತಿಂಗಳಲ್ಲಿ ಆರಂಭವಾಗಲಿದೆ.
ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಸನ್ಯಾಸಿಯ ಪೂರ್ವಾಶ್ರಮದ ತಂದೆ ಮಹೇಂದ್ರಕುಮಾರ್, ತಾಯಿ ವಸಂತಾದೇವಿ, ಸಹೋದರರು, ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಜೈನ ಸಮಾಜದ ಬಂಧುಗಳು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari: ಕೊನೆಗೂ ನಟ ದರ್ಶನ್ ಸೆಲ್ಗೆ ಟಿವಿ; ಡಿಡಿ ಚಾನೆಲ್ ಮಾತ್ರ
Online Fraud; 1.21 ಕೋಟಿ ರೂ. ವಶ, ಮಧ್ಯಪ್ರದೇಶದ ಆರೋಪಿ ಬಂಧನ
Bellary; ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ, ನಟ ಧನ್ವೀರ್, ಹೇಮಂತ್
Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್ಗೆ “ಕಾನೂನು ಸಲಹೆ’
Bellary: ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ-ದಿನಕರ್: ಪ್ರಸಾದ,ಡ್ರೈಫ್ರೂಟ್ಸ್ ತಂದ ಪತ್ನಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.