ಚುನಾವಣೆಗೆ ಬರ್ತಿದ್ದಾರೆ ಊರು ಬಿಟ್ಟವರು!


Team Udayavani, May 11, 2018, 5:42 PM IST

sp5.jpg

ಶಿರಸಿ: ಕೆಲಸಕ್ಕಾಗಿ ಊರು ಬಿಟ್ಟ ಅನಿವಾಸಿ ಮತದಾರರನ್ನು ಓಟಿಗಾಗಿ ಕರೆಸುವು ಕಸರತ್ತು ನಡೆಯುತ್ತಿದೆ. ಬಹಳಷ್ಟು ಜನ ಬೆಂಗಳೂರಿನಲ್ಲೇ ಇದ್ದು ಅವರನ್ನೆಲ್ಲ ಚುನಾವಣೆಯಲ್ಲಿ ಓಟು ಹಾಕಲು ಬರಲೇಬೇಕೆಂಬ ಒತ್ತಾಯದ ಮೇರೆಗೆ ಕರೆಸಲಾಗುತ್ತಿದೆ. ಅಲ್ಲದೆ, ಆ ಬಗ್ಗೆ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ.

ಇದು ಕೇವಲ ಒಂದೂರಿನ ಕಥೆಯಲ್ಲ, ಇಡೀ ಹಳ್ಳಿಯ ದಾರಿಗಳು ಹಳ್ಳಿಯ ಕಡೆ ಮುಖಮಾಡದೇ ಪೇಟೆ ದಿಕ್ಕಿಗೆ ಮುಖ ಮಾಡಿದ್ದು ಸಮಸ್ಯೆಯ ಮೂಲವಾಗಿದೆ. ಕೆಲವು ಗ್ರಾಪಂಗಳಲ್ಲೇ ಸಾವಿರಾರು ಮತಗಳು ಪರ ಊರಿನಲ್ಲಿವೆ. ಅವರೆಲ್ಲ ಬಂದು ಮತ ಚಲಾಯಿಸಿದಾಗ ಅಭ್ಯರ್ಥಿ ಗೆಲುವು ಯಾರಿಗೆ ಎಂಬುದು ಬದಲಾಗಬಹುದು ಅಥವಾ ಅಧಿಕ ಅಂತರದಲ್ಲೂ ಗೆಲ್ಲಬಹುದು.

ವೃದ್ಧಾಶ್ರಮ, ಉದ್ಯೋಗ ಕೊರತೆ: ಬಹುತೇಕ ಹಳ್ಳಿಗಳಲ್ಲಿ ಯುವ ಶಕ್ತಿ ಮಹಾ ನಗರದಲ್ಲಿ ದುಡಿಯುವ ಕೈಗಳಾಗಿವೆ. ಹಳ್ಳಿಗಳು ಸಹಜವಾಗಿ ವೃದ್ಧಾಶ್ರಮ ಆಗುತ್ತಿದೆ.

ಬೆಂಗಳೂರಲ್ಲೇ ಅಧಿಕ:
ಊರು ಬಿಟ್ಟ ಗಂಡು ಹಾಗೂ ಹೆಣ್ಣು ಮಕ್ಕಳಲ್ಲಿ ಅತಿ ಹೆಚ್ಚು ಸೇರಿದ್ದು ಬೆಂಗಳೂರಿಗೆ. ಮತದಾರರು ಅಲ್ಲಿ ಸಂಸಾರ ಮಾಡುತ್ತಿದ್ದರೂ ಮಕ್ಕಳ ಮತಗಳು ಬೆಂಗಳೂರಿನಲ್ಲಿವೆ, ಅಪ್ಪ ಅಮ್ಮನ ಮತಗಳು ಕ್ಷೇತ್ರದಲ್ಲೇ ಇವೆ. ಓದಿಗಾಗಿ ಪರ ಊರು ಸೇರಿದವರೂ ಇದ್ದಾರೆ. ನೂರಾರು ಕಿಮೀ, ಕೆಲವೊಮ್ಮೆ ಐನೂರಕ್ಕೂ ಅಧಿ ಕ ಕಿಮೀ ದೂರದಿಂದ ಬಂದು ಮತ ಚಲಾಯಿಸಿಬೇಕಿದೆ. ಬೆಂಗಳೂರು ಮಾತ್ರವಲ್ಲದೇ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಹೈದರಾಬಾದ್‌, ಪೂನಾ, ಮುಂಬಯಿ, ಕೇರಳ, ಉಡುಪಿ, ಮಡಿಕೇರಿಗಳಲ್ಲೂ ಇದ್ದಾರೆ. ಪಕ್ಕದ ಗೋವಾದಲ್ಲೂ ಇದ್ದವರು ಕೂಡ ಬಂದು ಮತದಾನ ಮಾಡಲು ವ್ಯವಸ್ಥೆಯಾಗಿದೆ.

ಶನಿವಾರ ನಡೆಯಲಿರುವ ಮತದಾನಕ್ಕೆ ಬಂದರೆ ರವಿವಾರ ಕೂಡ ಊರಲ್ಲಿ ಉಳಿದು ಹೋಗಬಹುದಾಗಿದೆ. ಈ ಕಾರಣದಿಂದ ಊರಿಗೆ ಬರುವ ಬಸ್‌ಗಳು ರಶ್‌ ಆಗಿವೆ. ಈ ಎರಡು ದಿನ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಕೂಡ ಉಲ್ಬಣ ಆಗುವ ಸಾಧ್ಯತೆ ಇದೆ. ಅಭ್ಯರ್ಥಿಗಳೂ ದೂರದ ಮತಗಳನ್ನು ಕರೆಸಿ ಮತದಾನ ಮಾಡಿಸುವಂತೆ ಮನವೊಲಿಸುವ ಕಸರತ್ತನ್ನೂ ಮಾಡುತ್ತಿದ್ದಾರೆ.

ಮುಂದಿನ ತಲೆಮಾರಿಗಾದರೂ ಶಿರಸಿ. ಸಾಗರದಂತಹ ಪಟ್ಟಣಗಳಲ್ಲಿ ಉದ್ಯೋಗ ಸೃಷ್ಟಿಯ ಜೊತೆ ಓದಿಗೆ ತಕ್ಕ ಉದ್ಯೋಗ ನೀಡುವ ಅವಕಾಶ ಸೃಷ್ಟಿಸಿದರೆ ಪರ ಊರಿನಲ್ಲಿ ನಮ್ಮೂರಿನ ಮತಗಳು
ಹೋಗದೇ ಉಳಿಯಬಹುದು ಎಂದೂ ಯುವಕರು ಹೇಳುತ್ತಿದ್ದಾರೆ.

ಊರಿಗೆ ಬಂದಾಗ ಹಳ್ಳಿಯ, ನಗರದ ಸಮಸ್ಯೆ ನಮ್ಮ ಬಳಿ ಹೇಳುತ್ತಾರೆ. ರೈತರ ಬವಣೆ ಗೊತ್ತಾಗುತ್ತದೆ. ಆದರೆ, ನಮ್ಮ ಶಾಸಕರಾಗುವರಲ್ಲಿ ಇದನ್ನು ಹೇಳ್ಳೋಣ ಎಂದರೆ ಅವರು ಸಿಗುವುದಿಲ್ಲ. ಯಾರೇ ಗೆಲ್ಲಲಿ, ಗೆದ್ದವರು ಬೆಂಗಳೂರಿನಲ್ಲೂ ನಮ್ಮಂಥವರ ಸಮಸ್ಯೆ ಕೇಳುವ ಸಮಯ ಕೊಡಬೇಕು.
ಚಂದ್ರಕಾಂತ ಎಸ್‌. ಹೆಗಡೆ
ಬೆಂಗಳೂರು

ಮದ್ವೆಗೆ ಬರಕಾಗಿತ್ತು. ಆದರೆ, ಓಟೇ ಮಾಡನ ಹೇಳಿ ಮಾಡಿದ್ದಿ. ಅದಕೆ 11ಕ್ಕೆ ಹೊರಡ್ತ್ಯ. ಓಟ್‌ ಮಾಡದೇ.
ಸುವರ್ಣ, ಮುಂಬಯಿ

„ರಾಘವೇಂದ್ರ ಬೆಟ್ಟಕೊಪ್ಪ 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.