ಕಾಸರಗೋಡು: ಜನಸೇವಾ ಕೇಂದ್ರದಲ್ಲಿ ನೌಕರರಿಲ್ಲ


Team Udayavani, May 28, 2018, 6:05 AM IST

27-kbl-3a.jpg

ಕುಂಬಳೆ: ಕಾಸರಗೋಡು ಹೊಸ ಬಸ್‌ನಿಲ್ದಾಣದ ನಗರಸಭೆಯ ಕಟ್ಟಡದ ಪ್ರಥಮ ಮಹಡಿಯಲ್ಲಿ ಫ್ರೆಂಡ್ಸ್‌ ಜನಸೇವಾ ಕೇಂದ್ರ ಕಾರ್ಯಾಚರಿಸುತ್ತಿದೆ.ಈ ಕೇಂದ್ರದಲ್ಲಿ ವಿದ್ಯುತ್‌ ಬಿಲ್‌,ದೂರವಾಣಿ,ನೀರಿನ ಕರ ಇತ್ಯಾದಿಗಳನ್ನು ಪಾವತಿಸಬಹುದಾಗಿದೆ.ಸಾರ್ವಜನಿಕರಿಗೆ ಬಿಲ್‌ ಪಾವತಿಸಲು ಕಚೇರಿಯೊಳಗೆ ಸಾಲಾಗಿ ಒಂಭತ್ತು ಕೌಂಟರ್‌ಗಳಿವೆ. ಆದರೆ ಇದರಲ್ಲಿ ಕೇವಲ ಎರಡು ಸೀಟಿನಲ್ಲಿ ಮಾತ್ರ ನಿತ್ಯ ನೌಕರರನ್ನು ಕಾಣಬಹುದು.ಅದರಲ್ಲೂ ಓರ್ವರು ತಡವಾಗಿ ಆಗಮಿಸುವುದು ಸಾಮಾನ್ಯವಾಗಿದೆ.

ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಜನಸೇವಾ ಕೇಂದ್ರದೊಳಗೆ ಸಾಕಷ್ಟು ಜನರು ಸಮಯಕ್ಕೆ ಮುಂಚಿತವಾಗಿ ಹಣ ಪಾವತಿಸಲು ಆಗಮಿಸುವರು.ಬಂದವರಿಗೆ ಸೆಕ್ಯೂರಿಟಿಯೋರ್ವರು ಟೋಕನ್‌ ನೀಡಿ ಆಸನದಲ್ಲಿ ಕುಳ್ಳಿರಿಸುವರು.ನೌಕರರು ಆಗಮಿಸಿದ ಬಳಿಕ ಟೋಕನ್‌ ನಂಬ್ರ ಕರೆದು ಹಣ ಸಂಗ್ರಹಿಸಲಾಗುವುದು.ಈ ಮಧ್ಯೆ ಕಂಪ್ಯೂಟರ್‌ ಕೈಕೊಡುವುದೂ ಇದೆ.ಆ ತನಕ ತಾಳ್ಮೆಯಿಂದ ಕಾಯಬೇಕಾಗುವುದು.

ವಿವಿಧ ಸರಕಾರಿ ಇಲಾಖೆಯ ಕಚೇರಿಗಳಿಗೆ ತೆರಳಿ ಗಂಟೆ ಗಟ್ಟಲೆ ಕಾಯುವುದನ್ನು ತಪ್ಪಿಸುವ ಸದುದ್ದೇಶದಿಂದ ಈ ಜನಸೇವಾ ಕೇಂದ್ರವನ್ನು ತೆರೆಯಲಾಗಿದೆ.ಈ ಕಚೇರಿಗೆ ಆಯಾ ಇಲಾಖೆಯ ವತಿಯಿಂದ ನೌಕರರನ್ನು ಡೆಪ್ಯೂಟೇಶನ್‌ ಆಧಾರದಲ್ಲಿ ಜಿಲ್ಲಾಧಿಕಾರಿಗಳು ನೌಕರರನ್ನು ನೇಮಕಗೊಳಿಸುವರು.ಆದರೆ  ಈ ನೌಕರರು ಕೆಲ ದಿನಗಳ ಬಳಿಕ ಉನ್ನತ ರಾಜಕೀಯ ನಾಯಕರ ಒತ್ತಡದ ಮೂಲಕ ಮೇಲಾಧಿಕಾರಿಗಳ ಮನ ಒಲಿಸಿ ತಮ್ಮ ಊರಿಗೆ ವರ್ಗವಾಗಿ ತೆರಳುವುದರಿಂದ ಈ ಕೇಂದ್ರದಲ್ಲಿ ನೌಕಕರ ಕೊರತೆ ಉಂಟಾಗುವುದು.

ಕಾಸರಗೋಡು ಜಿಲ್ಲೆಯ ದೂರದೂರಿನಿಂದ ಹಣ ಪಾವತಿಸಲು ಆಗಮಿಸುವ ಜನರ ಈ ಸಮಸ್ಯೆಯನ್ನು ಮಾನ್ಯ ಜಿಲ್ಲಾಧಿಕಾರಿಯವರು ಪರಿಹರಿಸಬೇಕಾಗಿದೆ.ಮಿತ್ರ ಜನಸೇವಾ ಕೇಂದ್ರದ ಒಂಭತ್ತು ಕೌಂಟರಿನಲ್ಲಿ ಕನಿಷ್ಟ ಐದು ಮಂದಿಯನ್ನಾದರೂ ನೇಮಕ ಮಾಡಿ ಜನರ ಸಂಕಷ್ಟ ವನ್ನು ಪರಿಹರಿಸಬೇಕಾಗಿದೆ.

ಬಹಿರ್ದೆಸೆಗೆ ನಿರ್ಬಂಧ
ಸುಸಜ್ಜಿತ ಹವಾನಿಯಂತ್ರಿತ ಕಚೇರಿ ಯೊಳಗಿರುವ ಇಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಬಹಿರ್ದೆಸೆಗೆ ನಿರ್ಬಂಧ ವಿರುವುದರಿಂದ ಸಂಕಷ್ಟ ಅನುಭವಿಸ ಬೇಕಾಗಿದೆ. ಕಚೇರಿ ನೌಕರರಲ್ಲಿ ವಿಚಾರಿಸಿ ದರೆ ಇಲ್ಲಿ  ಸಾರ್ವಜನಿಕ ಶೌಚಾ ಲಯವಿಲ್ಲ ಕೆಳಗೆ ಬಸ್‌ ನಿಲ್ದಾಣ ಕಟ್ಟಡದ ಲ್ಲಿದೆ .ಅಲ್ಲಿಗೆ ತೆರಳಿ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

5

Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.