ಮುಂದಿನ ವರ್ಷದ ಐಪಿಎಲ್ ಮಾ. 29ರಿಂದ?
Team Udayavani, Jun 2, 2018, 6:00 AM IST
ಮುಂಬಯಿ: ಲೋಕಸಭಾ ಚುನಾವಣೆ, ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ 2019ರಲ್ಲಿ ಬೆನ್ನು ಬೆನ್ನಲ್ಲೇ ನಡೆಯುವುದರಿಂದ 12ನೇ ಆವೃತ್ತಿ ಐಪಿಎಲ್ ಮಾ. 29ರಿಂದ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಧಾ ಶಿಫಾರಸು ಪಾಲನೆ
ಪ್ರತಿ ವರ್ಷ ಐಪಿಎಲ್ ವೇಳಾಪಟ್ಟಿ ಎ. 7ರ ಬಳಿಕ ಅಥವಾ ಎ. 5ರೊಳಗೆ ನಿಗದಿಯಾಗುತ್ತಿತ್ತು. ಆದರೆ ವಿಶ್ವಕಪ್ ಮೇ 30ಕ್ಕೆ ಆರಂಭವಾಗಲಿದೆ. ಜತೆಗೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳ ನಡುವೆ 15 ದಿನದ ಅಂತರವಿರಬೇಕು ಎನ್ನುವ ಲೋಧಾ ಸಮಿತಿ ಶಿಫಾರಸನ್ನು ಕೂಡ ಬಿಸಿಸಿಐ ಪಾಲಿಸಬೇಕಿದೆ. ಅಲ್ಲದೆ ಲೋಕಸಭಾ ಚುನಾವಣೆ ದಿನಾಂಕ ಕೂಡ ಪ್ರಕಟವಾಗುವ ಸಾಧ್ಯತೆ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮಾರ್ಚ್ನಲ್ಲೇ ಐಪಿಎಲ್ ಆರಂಭಿಸಿ ಮೇ ಮಧ್ಯ ಭಾಗದಲ್ಲಿ ಫೈನಲ್ ಆಯೋಜಿಸುವ ಸಾಧ್ಯತೆ ಇದೆ.
ಷೇರುದಾರರ ಒತ್ತಾಯ
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೂಟ ಆಯೋಜಿಸಿದ್ದಾಗ ಷೇರುದಾರರು ಸಾಕಷ್ಟು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದಾಗಿ ವಿದೇಶದಲ್ಲಿ ಬೇಡ, ಭಾರತದಲ್ಲೇ ಐಪಿಎಲ್ ಪಂದ್ಯ ನಡೆಸಲು ಷೇರುದಾರರು ಒತ್ತಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿದೇಶಕ್ಕೆ ಶಿಫ್ಟ್ ಆಗದು
ಕಳೆದ 3 ಲೋಕಸಭಾ ಚುನಾವಣೆಗಳು ಎಪ್ರಿಲ್, ಮೇನಲ್ಲಿ ನಡೆದಿದ್ದವು. ಇದೇ ವೇಳೆ ಐಪಿಎಲ್ ವೇಳಾಪಟ್ಟಿಗಳೂ ನಿಗದಿ ಯಾಗಿದ್ದವು. 2009ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಕೂಟವನ್ನೇ ಬಿಸಿಸಿಐ ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಿತ್ತು. 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗ 19 ಐಪಿಎಲ್ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ಸಲವೂ ಇಂಥದೊಂದು ಸಾಧ್ಯತೆ ಕಂಡು ಬರುತ್ತಿದೆ ಯಾದರೂ ಬಿಸಿಸಿಐ ಇದನ್ನು ತಪ್ಪಿಸಿ ಪೂರ್ತಿ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸಲು ಚಿಂತಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.