ಅನುದಾನಿತ ಪ್ರಾ.ಶಾಲೆಗೆ ಮುಚ್ಚುವ ಭಾಗ್ಯ


Team Udayavani, Jun 3, 2018, 6:00 AM IST

ss-32.jpg

ವಾಮಂಜೂರು: ಈ ಶಾಲೆಯಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಆದರೆ ಮಕ್ಕಳೇ ಇಲ್ಲ. ಈ ಸಾಲಿ ನಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಶೂನ್ಯ ವಾಗಿರು ವುದರಿಂದ ಬಾಗಿಲು ಹಾಕುವುದು ಅನಿವಾರ್ಯ. ಇದು ಗುರುಪುರದ ಅನುದಾನಿತ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.

ಈ ಶಾಲೆಯಲ್ಲಿ 1ರಿಂದ 7ರ ವರೆಗೆ 700ರಿಂದ 800 ವಿದ್ಯಾರ್ಥಿಗಳು ಈ ಹಿಂದೆ ಕಲಿಯುತ್ತಿದ್ದರು. 15ಕ್ಕೂ ಹೆಚ್ಚು ಬೋಧಕ ಸಿಬಂದಿ ಇದ್ದರು. 2016ರಲ್ಲಿ ಶಾಲೆ ದಶಮಾನೋತ್ಸವ ಆಚರಿಸಿತ್ತು.  ಕಳೆದ ಬಾರಿ 27 ವಿದ್ಯಾರ್ಥಿಗಳಿದ್ದು, 7ನೇ ತರಗತಿ ಯಲ್ಲಿ 11 ಮಂದಿ ಇದ್ದರು. ಇಬ್ಬರು ಶಿಕ್ಷಕರು, ಇನ್ನಿಬ್ಬರು ಗೌರವ ಶಿಕ್ಷಕ ರಿದ್ದರು. ಗುರುಪುರದ 3 ಬಾಡಿಗೆ ಮನೆಗಳಿಂದ, ಮಸೀದಿ ಯೊಂದು ನಡೆಸುವ ಆಶ್ರಮದಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. 

ನಾಲ್ವರು ವಿದ್ಯಾರ್ಥಿಗಳು ಗುರುಪುರದಿಂದ ಬರುತ್ತಿದ್ದರು. 7ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾ ಗಿದ್ದು, ಬಾಡಿಗೆಗೆ ಇದ್ದವರು ಮನೆ ಖಾಲಿ ಮಾಡಿದ್ದಾರೆ. ಮಸೀದಿಯ ಆಶ್ರಮ ಸ್ಥಳಾಂತರವಾಗಿದ್ದು, ಮಕ್ಕಳ ಕೊರತೆ ಕಾಣಿಸಿದೆ. ಹೀಗಾಗಿ ಉಳಿದವರನ್ನು ಬೇರೆ ಶಾಲೆಗೆ ಕಳಿಸಲು ತಿಳಿಸಲಾಗಿದೆ.

ಎಲ್ಲ ಸೌಲಭ್ಯ
ಇಲ್ಲಿ ಆಟದ ಮೈದಾನ, ಬಾವಿ, ಕಲಾ ಮಂದಿರ, ಕೊಠಡಿ, ಬಿಸಿ ಯೂಟ, ಸಮವಸ್ತ್ರ, ಶೌಚಾಲಯ ಸೌಲಭ್ಯಗಳಿವೆ. ನುರಿತ ಶಿಕ್ಷಕರೂ ಇದ್ದರು. ಮಹಾಲಿಂಗ ನಾಯಕ್‌ಮುಖ್ಯ ಶಿಕ್ಷಕರಾಗಿದ್ದು, ಮಾರ್ಥಾ ಮೇರಿ ಡಿ’ಸೋಜಾ ಸಹಶಿಕ್ಷಕರಾಗಿದ್ದರು. ಇಬ್ಬರು ಗೌರವ ಶಿಕ್ಷಕರಿದ್ದರು. ಇವರಿಗೂ ಪರ್ಯಾಯ ವ್ಯವಸ್ಥೆಯ ಆತಂಕ ಕಾಡುತ್ತಿದೆ.

ಕನಿಷ್ಠ 20 ಮಕ್ಕಳನ್ನಾದರೂ ದಾಖಲಿಸುವ ವ್ಯವಸ್ಥೆ ಮಾಡಿದರೆ ಶಾಲೆಯನ್ನು ಮುಂದುವರಿಸಬಹುದು. ಇಲ್ಲವಾದರೆ ಮುಚ್ಚುವುದು ಅನಿವಾರ್ಯ ವಾಗುತ್ತದೆ. ಮುಂದಿನ ಬೆಳವಣಿಗೆಗಳನ್ನು ನೋಡಿ ಇಲಾಖೆಯು ತೀರ್ಮಾನ ತೆಗೆದುಕೊಳ್ಳಲಿದೆ.
ಲೋಕೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ

ಮಕ್ಕಳ ಶುಲ್ಕ ಹೇಗೆ ಹೊಂದಿಸಲಿ?
ಈ ಶಾಲೆಯಲ್ಲಿ ನನ್ನ ಇಬ್ಬರು ಮಕ್ಕಳ ಪೈಕಿ ಒಬ್ಬ ಆರನೇ, ಇನ್ನೊಬ್ಬ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದರು. ಈಗ ಮಕ್ಕಳನ್ನು ಬೇರೆ ಖಾಸಗಿ ಶಾಲೆಗೆ ಸೇರಿಸಲು 5 ಸಾವಿರ ರೂ. ಗಳನ್ನು ಹೇಗೆ ಹೊಂದಿಸಲಿ ಎಂಬುದೇ ಬಡವರಾದ ನಮ್ಮ ಸಮಸ್ಯೆ.     
ಶಹೀದಾ, ವಿದ್ಯಾರ್ಥಿನಿಯೊಬ್ಬರ ತಾಯಿ

ನಿರ್ಲಕ್ಷ್ಯ ಸಲ್ಲದು
ಒಂದು ಶಾಲೆ ನಡೆಸಲು ಕನಿಷ್ಠ 20 ವಿದ್ಯಾರ್ಥಿಗಳಾದರೂ ಇರಬೇಕು. ಆದರೆ ಈ ಬಾರಿ ವಿದ್ಯಾರ್ಥಿಗಳು ಸೇರಿಲ್ಲ. ಹೀಗಾಗಿ ಇಲ್ಲಿದ್ದ ವಿದ್ಯಾರ್ಥಿಗಳಿಗೆ ಟಿ.ಸಿ. ನೀಡಲು ಹೇಳಿದ್ದಾರೆ. ಎಲ್ಲ ಸೌಲಭ್ಯಗಳಿದ್ದರೂ ಊರವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ಸಿಗುತ್ತಿದ್ದು, ಹೆತ್ತವರಿಗೆ ತುಂಬಾ ಸಮಸ್ಯೆಯಾಗಿದೆ.     
ಮಹಾಲಿಂಗ ನಾಯಕ್‌, ಮುಖ್ಯ ಶಿಕ್ಷಕರು

– ಗಿರೀಶ್‌ ಮಳಲಿ

ಟಾಪ್ ನ್ಯೂಸ್

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

11

Kulur ಫ್ಲೈ ಓವರ್‌ ಕೆಳಗೆ ಅನಧಿಕೃತ ಅಂಗಡಿ, ದುರ್ನಾತ

10(1)

Mangaluru: ಹಂಪ್ಸ್‌  ಬಣ್ಣ ಮಾಯ, ಕಿತ್ತು ಹೋದ ಡಾಮರು

7

Mangaluru: ಟ್ರಾಫಿಕ್‌ ಸಿಗ್ನಲ್‌ ಕಾರ್ಯಾಚರಣೆ ಯಾವಾಗ?; ಇಲಾಖೆಗೆ ಸಿಕ್ಕಿಲ್ಲ ಕಂಟ್ರೋಲ್‌

3

Kinnigoli: ಅಂಗಡಿಗಳಿಂದ ಆದಾಯ ಬಂದರೂ ದುರಸ್ತಿ ಇಲ್ಲ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

prashanth-Kishore

Prashant Kishore; ನಿವೃತ್ತ ಅಧಿಕಾರಿಗಳಿಂದ ನಿತೀಶ್‌ ಸರಕಾರ ನಿರ್ವಹಣೆ

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

ARMY (2)

Kashmir;ಕಥುವಾದಲ್ಲಿ ಎನ್‌ಕೌಂಟರ್‌: ಉಗ್ರನ ಹತ್ಯೆ

1-addasd

Congress ಪಕ್ಷ ಸಿದ್ಧಾಂತದಲ್ಲಿ ರಾಜಿ ಇಲ್ಲ: ಖರ್ಗೆಗೆ ವಿಕ್ರಮಾದಿತ್ಯ ಸಿಂಗ್‌

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.