ಸೂಳೆಕೆರೆ ಸಂರಕಣೆಗೆ ಸುಶಿಕ್ಷೀತರ ಪಡೆ


Team Udayavani, Jun 3, 2018, 4:35 PM IST

yad-1.jpg

ದಾವಣಗೆರೆ: ಸೂಳೆಕೆರೆ ಸಂರಕ್ಷಣೆಗೆ ಹಮ್ಮಿಕೊಂಡಿರುವ ಹೋರಾಟಕ್ಕೆ ಜಿಲ್ಲೆಯ ಜನರು ಕೈ ಜೋಡಿಸಬೇಕು ಎಂದು
ಖಡ್ಗ ಸಂಘದ ನಿರ್ದೇಶಕರು ಮನವಿ ಮಾಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿರ್ದೇಶಕ, ಸಾಫ್ಟ್‌ವೇರ್‌ ಇಂಜಿನಿಯರ್‌ ಬಿ. ರಘು, ಸೂಳೆಕೆರೆ(ಶಾಂತಿಸಾಗರ) ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುತ್ತಿದೆ. ಜೊತೆಗೆ ನೀರಾವರಿಗೂ ಸಹ ಸಹಕಾರಿಯಾಗಿದೆ.

ಅಂತಹ ಕೆರೆ ಇದೀಗ ಅಳಿವಿನಂಚಿಗೆ ಸಾಗುತ್ತಿದೆ. ದಿನದಿಂದ ದಿನಕ್ಕೆ ಕೆರೆಯ ಗಾತ್ರ ಕ್ಷೀಣಿಸುತ್ತಿದೆ. ನಮ್ಮ ಸಂಸ್ಥೆ ಇದೀಗ ಕೆರೆಯ ಉಳಿವಿಗೆ ಹೋರಾಟ ರೂಪಿಸಿದ್ದು, ಜನರು ನಮ್ಮೊಂದಿಗೆ ಕೈ ಜೋಡಿಸಬೇಕೆಂದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
 
ಇದರ ಜೊತೆಗೆ ಸಿರಿಗೆರೆ ಮಠದಲ್ಲಿನ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನ್ಯಾಯಪೀಠದಲ್ಲೂ ಸಹ
ಅರ್ಜಿ ಹಾಕಲಾಗಿದೆ. ಜುಲೈ 2ರಂದು ಸ್ವಾಮೀಜಿಗಳು ಈ ಕುರಿತು ಸಭೆ ಕರೆದಿದ್ದಾರೆ. 

ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು. ಕೆಲವೇ ಕೆಲವರ ಹಿತಕ್ಕಾಗಿ ಒಂದು ಐತಿಹಾಸಿಕ ಕೆರೆ ನಾಶವಾಗಬಾರದು. ಇದನ್ನು ಉಳಿಸಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಇದು ಏಷಿಯಾದ 2ನೇ ಅತಿದೊಡ್ಡ ಕೆರೆಯಾಗಿದೆ. ಇಲ್ಲಿ ಶೇಖರಣೆಯಾಗುವ ನೀರು ಕುಡಿಯಲು ಯೋಗ್ಯವಾದುದಾಗಿದೆ. ಈ ಕೆರೆಯ ಒಟ್ಟು ವಿಸೀ¤ರ್ಣ 6650 ಎಕರೆ ಪ್ರದೇಶವಾಗಿದೆ. ಆದರೆ, ಇದೀಗ ಇದರ ವಿಸ್ತೀರ್ಣ 5000 ಎಕರೆಗೆ ಇಳಿದಿದೆ.

ಅಂದಾಜಿನ ಪ್ರಕಾರ 1650 ಎಕರೆ ಪ್ರದೇಶ ಒತ್ತುವರಿಯಾಗಿದೆ. ಹಿರೇಹಳ್ಳ ಅಂತಲೂ ಗುರುತಿಸಲ್ಪಡುವ ಈ ಕೆರೆ ನಿರ್ಮಾಣ ಆಗಿದ್ದು 12ನೇ ಶತಮಾನ ಎಂದು ಹೇಳಲಾಗುತ್ತಿದೆ. ಬಸವನತೂಬು, ಸಿದ್ದನತೂಬು ಮೂಲಕ
ನೀರಿನ ಹೊರಹರಿವು ಆಗುತ್ತಿದೆ ಎಂದು ಅವರು ತಿಳಿಸಿದರು.
 
ಇದೀಗ ಕೆರೆ ಹೂಳು ತುಂಬಿಕೊಂಡಿದೆ. 2015ರಲ್ಲಿ ಕೆರೆ ಸಂಪೂರ್ಣ ಬತ್ತಿಹೋಗಿತ್ತು. ಈ ಹಿಂದಿನ ವರ್ಷ ಮಳೆ ಕೈಗೊಟ್ಟಾಗ ಸೂಳೆಕೆರೆಯ ನೀರನ್ನೇ ಅಡಕೆ, ತೆಂಗು ಮುಂತಾದ ತೋಟಗಳಿಗೆ ಹರಿಸಲಾಗಿದೆ. ಈ ಕೆರೆಯಿಂದ 4700 ಎಕರೆ ಪ್ರದೇಶ ನೀರಾವರಿಗೊಂಡಿದೆ. ಇಂತಹ ಕೆರೆಯ ಬಗ್ಗೆ ನಮ್ಮವರಿಗೆ ಕಾಳಜಿ ಇಲ್ಲದಂತಾಗಿದೆ. ನಮ್ಮ ಸಂಪತ್ತನ್ನು ನಾವೇ ರಕ್ಷಿಸಿಕೊಳ್ಳಬೇಕು. ಇದಕ್ಕೆ ಜಿಲ್ಲೆಯ ಜನರು ಬೆಂಬಲ ನೀಡಬೇಕೆಂದು ಅವರು ಕೋರಿದರು.
 
ನಮ್ಮ ಸಂಘಟನೆಯಲ್ಲಿರುವವರ ಪೈಕಿ ಬಹುತೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು, ಉನ್ನತ ಶಿಕ್ಷಣ ಪಡೆದವರಾಗಿದ್ದೇವೆ. ಸಮಾಜದ ಒಳಿತಿಗಾಗಿ ಏನನ್ನಾದರೂ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯ ಆರಂಭಿಸಿದ್ದೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಸೂಳೆಕೆರೆ ಉಳಿಸುವುದಾಗಿದೆ. ಜಿಲ್ಲೆಯಲ್ಲಿರುವ ಪ್ರಾಚೀನ, ಪ್ರವಾಸ ಯೋಗ್ಯ ಕೆರೆ ಉಳಿಸಬೇಕಾದುದು ಜಿಲ್ಲಾಡಳಿತದ ಕರ್ತವ್ಯ ಸಹ ಆಗಿದೆ ಎಂದು ಅವರು ಹೇಳಿದರು. 

ಸಂಘದ ನಿರ್ದೇಶಕರಾದ ಕುಬೇಂದ್ರಸ್ವಾಮಿ, ಚಂದ್ರಹಾಸ, ಕೆ.ಸಿ. ಬಸವರಾಜ, ಸೈಯದ್‌ ನಯಾಜ್‌, ಪ್ರಶಾಂತ,
ಷಣ್ಮುಖಸ್ವಾಮಿ, ಪ್ರಕಾಶ್‌, ಹರೀಶ್‌ ಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು. 

ಟಾಪ್ ನ್ಯೂಸ್

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿಎಂ ರಾಜೀನಾಮೆ ಕೊಡಲ್ಲ, ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್. ಮಲ್ಲಿಕಾರ್ಜುನ್

Davanagere; ಸಿಎಂ ರಾಜೀನಾಮೆ ಕೊಡಲ್ಲ,ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್.ಮಲ್ಲಿಕಾರ್ಜುನ್

Davanagere City Corporation: new Mayor-Deputy Mayor elected

Davanagere City Corporation: ನೂತನ ಮೇಯರ್-ಉಪ ಮೇಯರ್‌ ಆಯ್ಕೆ

Shamanuru Shivashankarappa

Raj Bhavan ದುರ್ಬಳಕೆ ಮಾಡಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ: ಶಾಮನೂರು ಶಿವಶಂಕರಪ್ಪ

Davanagere; ಬಿಜೆಪಿ ವಿರುದ್ದ ಶೋಷಿತ ಸಮುದಾಯದ ಒಕ್ಕೂಟದಿಂದ ಮೌನ ಪ್ರತಿಭಟನೆ

Davanagere; ಬಿಜೆಪಿ ವಿರುದ್ದ ಶೋಷಿತ ಸಮುದಾಯದ ಒಕ್ಕೂಟದಿಂದ ಮೌನ ಪ್ರತಿಭಟನೆ

Basvaraj

CM Aspirant: ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ: ಶಾಸಕ ಶಿವಗಂಗಾ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.