600 ಜ್ಯೋತಿರ್ವರ್ಷ ದೂರದ ಗŠಹ ಕಂಡುಹಿಡಿದ ಭಾರತೀಯರು
Team Udayavani, Jun 9, 2018, 6:00 AM IST
ಚೆನ್ನೈ: ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ತಂಡವು ಭೂಮಿಗಿಂತ 27 ಪಟ್ಟು ಹೆಚ್ಚು ದೊಡ್ಡದಾಗಿರುವ ಹಾಗೂ 600 ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹವೊಂದನ್ನು ಕಂಡುಹಿಡಿದಿ ದ್ದಾರೆ. ಸೂರ್ಯನ ರೀತಿಯ ನಕ್ಷತ್ರದ ಸುತ್ತಲೂ ಈ ಗ್ರಹವು ಪರಿಭ್ರಮಿಸುತ್ತದೆ. ಈ ಸಂಶೋಧನೆಯನ್ನು ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್ಎಲ್) ಮಾಡಿದೆ.
ಮೌಂಟ್ ಅಬು ಪರ್ವತದಲ್ಲಿರುವ ಪಿಆರ್ಎಲ್ ಗುರುಶಿಖರ ಪರಿವೀಕ್ಷಣಾ ಕೇಂದ್ರದಲ್ಲಿ ಸ್ಥಾಪಿಸಲಾಗಿ ರುವ ದೇಶೀಯ ನಿರ್ಮಿತ ಸ್ಪೆಕ್ಟೋಗ್ರಾಫ್ ಅನ್ನು ವಿಜ್ಞಾನಿಗಳು ಬಳಸಿದ್ದಾರೆ. ಈ ಶೋಧದಿಂದಾಗಿ ವಿಶ್ವದಲ್ಲಿ ಗ್ರಹವನ್ನು ಕಂಡುಹಿಡಿದ ಕೆಲವೇ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಇಸ್ರೋ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಒಂದು ಪೋಸ್ಟ್ನಲ್ಲಿ ಈ ಗ್ರಹವನ್ನು ಎಪಿಕ್ 211945201ಬಿ ಅಥವಾ ಕೆ2-236ಬಿ ಎಂದು ಹೆಸರಿಸಲಾಗಿದೆ. ಸುಮಾರು 19.5 ದಿನಗಳಲ್ಲಿ ಗ್ರಹವು ಒಂದು ಸುತ್ತುಹಾಕುತ್ತದೆ ಎಂದು ನಂಬಲಾಗಿದೆ.
ಈ ಗ್ರಹದ ಮೇಲ್ಮೆ„ ತಾಪಮಾನವು ಸುಮಾರು 600 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಭೂಮಿ ಮತ್ತು ಸೂರ್ಯನ ಅಂತರಕ್ಕೆ ಹೋಲಿಸಿದರೆ ಏಳು ಪಟ್ಟು ಹತ್ತಿರವಾಗಿದೆ. ಹೀಗಾಗಿ ಈ ಗ್ರಹದಲ್ಲಿ ಜೀವಿ ಇರುವ ಸಾಧ್ಯತೆಯಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ತನ್ನ ನಕ್ಷತ್ರದಿಂದ ಅತ್ಯಂತ ಸಮೀಪದಲ್ಲಿರುವ ಗ್ರಹಗಳ ಅಧ್ಯಯನದ ದೃಷ್ಟಿಯಲ್ಲಿ ಇದು ಅತ್ಯಂತ ಮಹತ್ವವಾದ ಶೋಧ ಎಂದು ಹೇಳಲಾಗಿದೆ.
ನಾಸಾದ ಕೆಪ್ಲರ್2 ಫೋಟೋಮೆಟ್ರಿ ಮೂಲಕ ಗ್ರಹ ವಿವರ ತಿಳಿಯುವುದು ಕಷ್ಟಸಾಧ್ಯವಾದ್ದರಿಂದ ಸಂಶೋಧಕರ ತಂಡವೇ ಪಾರಸ್ ಸ್ಪೆಕ್ಟ್ರೋಗ್ರಾಫ್ ಅನ್ನು ರೂಪಿಸಿದೆ. ಆರಂಭದಲ್ಲಿ ಕೆಪ್ಲರ್2 ಬಳಸಿಯೇ ಕಂಡುಕೊಳ್ಳಲಾಯಿತಾದರೂ, ಹೆಚ್ಚಿನ ಅಧ್ಯಯನವನ್ನು ಪಾರಸ್ ಮೂಲಕ ಮಾಡಲಾಗಿದೆ. ಇದು ತನ್ನ ನಕ್ಷತ್ರದ ಸುತ್ತಲೂ ಪರಿಭ್ರಮಿಸುವುದರಿಂದ ನಿರ್ದಿಷ್ಟ ಪ್ರಮಾಣದ ಬೆಳಕನ್ನು ತಡೆಯುತ್ತದೆ. ಈ ಬೆಳಕು ತಡೆಯುವ ಪ್ರಮಾಣವನ್ನು ಆಧರಿಸಿ ಗ್ರಹದ ವ್ಯಾಸವನ್ನು ಕಂಡುಕೊಳ್ಳಲಾಗಿದೆ. ಆದರೆ ಇದು ಹೆಚ್ಚಿನ ಅಧ್ಯಯನಕ್ಕೆ ಸಾಲದಾಗಿದೆ.
ವಿಶೇಷ ಪಿಆರ್ಎಲ್ ಪಾರಸ್ ಸ್ಪೆಕ್ಟ್ರೋಗ್ರಾಫ್ ಮೂಲಕ ಅಧ್ಯಯನ
ನಕ್ಷತ್ರವನ್ನು 19.5 ದಿನಗಳಲ್ಲಿ ಒಂದು ಸುತ್ತು ಹಾಕುವ ಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
West Bengal ಕೋರ್ಟ್ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
Supreme court ಯೂಟ್ಯೂಬ್ ಲೈವ್ ಸ್ಟ್ರೀಮ್ ಚಾನೆಲ್ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Flipkart Big Billion Day ಸೆ. 27 ರಿಂದ ಆರಂಭ
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.