ಗುಡಿಸಿ ಗುಂಡಾಂತರ; ಅಖೀಲೇಶ್ ಅವಾಂತರ
Team Udayavani, Jun 10, 2018, 6:00 AM IST
ಲಕ್ನೋ: ಉ. ಪ್ರ. ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಅಧಿಕಾರ ನಡೆಸಿ, ಸಕಲ ಸರಕಾರಿ ಸೌಲಭ್ಯಗಳನ್ನು ಬಳಸಿ ಕೊಂಡ ಅಖೀಲೇಶ್ ಯಾದವ್ಗೆ “ಉಂಡೂ ಹೋದ, ಕೊಂಡೂ ಹೋದ’ ಎಂಬ ಗಾದೆ ಮಾತು ಈಗ ಅನ್ವರ್ಥವಾಗಿದೆ.
ಹೇಗೆ ಗೊತ್ತೆ? ಕೊನೆಗೂ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿ ಸರಕಾರಿ ಬಂಗಲೆ ತೆರವು ಗೊಳಿಸಿರುವ ಅಖೀಲೇಶ್, ನೆಲಕ್ಕೆ ಅಳವಡಿಸಲಾಗಿದ್ದ ಟೈಲ್ಸ್ಗಳನ್ನೂ ಬಿಡದೆ ಬೆಲೆ ಬಾಳುವ ವಸ್ತುಗಳನ್ನೆಲ್ಲ ಕೊಂಡೊಯ್ದಿದ್ದಾರೆ. ಈ “ಮಹಾನ್’ ಕಾರ್ಯಕ್ಕಾಗಿ ಇಡೀ ಬಂಗಲೆಯನ್ನೇ ವಿರೂಪ ಗೊಳಿಸಿದ್ದಾರೆ. ಘಟನೆ ಬಿಜೆಪಿ ಮತ್ತು ಎಸ್ಪಿ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.
ಅಧಿಕಾರಿಗಳಿಗೆ ಶಾಕ್
ಜೂ. 2ರಂದೇ ಬಂಗಲೆ ತೆರವು ಗೊಳಿಸಿದ್ದ ಅಖೀಲೇಶ್, ಅದರ ಕೀಲಿಕೈಗಳನ್ನು ಹಸ್ತಾಂತರಿಸಿದ್ದು ಶುಕ್ರವಾರ ರಾತ್ರಿ. ಶನಿವಾರ ಬೆಳಗ್ಗೆ ಬಂಗಲೆ ಪ್ರವೇಶಿಸಿದ ಅಧಿಕಾರಿ ಗಳಿಗೆ ಶಾಕ್ ಕಾದಿತ್ತು. 2016ರಲ್ಲಿ ಯಾದವ್ ಕುಟುಂಬದ ಅಭಿ ರುಚಿಗೆ ತಕ್ಕಂತೆ ಬರೋಬ್ಬರಿ 45 ಕೋ. ರೂ. ವೆಚ್ಚ ಮಾಡಿ ನವೀಕರಿಸಿದ್ದ ಬಂಗಲೆ ವಿರೂಪ ಗೊಂಡಿತ್ತು. ಒಳಗಿರುವ ವಸ್ತು ಗಳೆಲ್ಲ ಮಾಯವಾಗಿದ್ದವು. ಸ್ವಿಮ್ಮಿಂಗ್ ಪೂಲ್, ಮನೆಯೊಳಗಿನ ನೆಲ ಅಗೆದು ಟೈಲ್ಸ್, ಮಾರ್ಬಲ್ಗಳನ್ನು ಹೊತ್ತೂಯ್ಯಲಾಗಿತ್ತು.
ಮುಂದೇನು?
ಕಣ್ಮರೆಯಾಗಿರುವ ಎಲ್ಲ ವಸ್ತುಗಳನ್ನೂ ಆದ ಹಾನಿಯನ್ನು ಪಟ್ಟಿ ಮಾಡಿ, ಮೌಲ್ಯವನ್ನು ಲೆಕ್ಕ ಮಾಡುತ್ತೇವೆ. ಕಾನೂನು ಸಲಹೆ ಪಡೆದು, ಮನೆ ಮಾಲಕರಿಗೆ ನೋಟಿಸ್ ಜಾರಿ ಮಾಡುತ್ತೇವೆ. ನಾಪತ್ತೆಯಾದ ಎಲ್ಲ ವಸ್ತುಗಳನ್ನೂ ವಶಪಡಿಸಿಕೊಳ್ಳುವ ಮತ್ತು ಸರಕಾರಿ ಬಂಗಲೆಗಾದ ಹಾನಿ ಭರಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಯಾವತಿ, ರಾಜನಾಥ್ ಸಿಂಗ್, ಕಲ್ಯಾಣ್ಸಿಂಗ್, ಮುಲಾಯಂ ಸೇರಿದಂತೆ ಯಾವ ಮಾಜಿ ಸಿಎಂಗಳೂ ಬಂಗಲೆ ತೆರವು ಗೊಳಿಸುವಾಗ ಹೀಗೆ ಮಾಡಿರಲಿಲ್ಲ ಎಂದೂ ಹೇಳಿದ್ದಾರೆ.
ಏನೆಲ್ಲ ನಾಪತ್ತೆ?
ಸ್ವಿಮ್ಮಿಂಗ್ ಪೂಲ್ಗೆ ಅಳವಡಿಸಲಾಗಿದ್ದ ಟರ್ಕಿ ಆಮದಿತ ಟೈಲ್ಸ್
ಇಟಾಲಿಯನ್ ಮಾರ್ಬಲ್ಗಳು
ಎಸಿ, ಆಮದಿತ ಛಾವಣಿ
ಉದ್ಯಾನದ ಲೈಟ್,
ಬಾತ್ರೂಂ ಫಿಟ್ಟಿಂಗ್
ಅಪರೂಪದ ಗಿಡಗಳು
ಆಮದಿತ ಆಲಂಕಾರಿಕ ವಸ್ತುಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ
UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್
ESI Hospital: ಬೆಳ್ಳಂಬೆಳಗ್ಗೆ ಇಎಸ್ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್
Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ
UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು
Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್ ಪೋರ್ಟಲ್ನಲ್ಲಿ ದಾಖಲಾತಿ
Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.