ಜನಪ್ರತಿನಿಧಿಗಳಿಗೆ ನೀರು ಮರುಬಳಕೆಯ ಚಾಲೆಂಜ್‌


Team Udayavani, Jun 21, 2018, 12:02 PM IST

21-june-5.jpg

ಮಹಾನಗರ: ಬುಕ್‌ ಚಾಲೆಂಜ್‌,ಫಿಟ್‌ನೆಸ್‌ ಚಾಲೆಂಜ್‌, ಫೋಟೋ ಹಾಕುವ ಚಾಲೆಂಜ್‌ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹತ್ತುಹಲವು ಚಾಲೆಂಜ್‌ಗಳ ನಡುವೆಯೇ ನಗರದ ಸಾಮಾಜಿಕ ಹೋರಾಟಗಾರರೊಬ್ಬರು ನೀರು ಮರು ಬಳಕೆ ಮಾಡುವ ಸಾಮಾಜಿಕ ಬದ್ಧತೆಯ ಚಾಲೆಂಜ್‌ ಪ್ರಾರಂಭಿಸಿದ್ದಾರೆ.

ಮಾತ್ರವಲ್ಲದೆ ತಮ್ಮ ಮನೆಯಲ್ಲಿ ಸ್ನಾನ ಹಾಗೂ ಬಟ್ಟೆ ಒಗೆದ ನೀರನ್ನು ಪೋಲಾಗಲು ಬಿಡದೆ ಅದನ್ನು ಮರು ಬಳಕೆ ಮಾಡುವ ತಂತ್ರಜ್ಞಾನ ಅಳವಡಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ ತಮ್ಮ ಮನೆಗಳಲ್ಲೂ ನೀರು ಮರುಬಳಕೆ ಮಾಡುವ ತಂತ್ರಜ್ಞಾನ ಅಳವಡಿಸಿ ಇತರರಿಗೂ ಸ್ಫೂರ್ತಿಯಾಗಿ ಎಂದು ಸವಾಲು ಹಾಕಿದ್ದಾರೆ.

ಸಾಮಾಜಿಕ ಹೋರಾಟಗಾರರು ಹಾಗೂ ನಗರದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನೂ ನಡೆಸುತ್ತಿರುವ ಎಂ.ಜಿ. ಹೆಗಡೆ ಅವರೇ
ಈ ರೀತಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನೀರು ಮರುಬಳಕೆಯ ಕುರಿತಂತೆ ಚಾಲೆಂಜ್‌ ಹಾಕಿದವರು. 

ದೇಶದ ಪ್ರಗತಿಗೆ ಸವಾಲು
ಸಾಮಾಜಿಕ ಸ್ವಾಸ್ತ್ಯ ವೃದ್ಧಿಸುವ ಸವಾಲು ಹಾಕಿ, ಆ ಮೂಲಕ ದೇಶದ ಪ್ರಗತಿಗೆ ಒಳಿತಾಗುವ ಚಾಲೆಂಜ್‌ ಹಾಕುವುದು ಉತ್ತಮ ಎಂಬುದು ಅವರ ಅಭಿಪ್ರಾಯ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮನೆಯಲ್ಲಿ ನೀರನ್ನು ಪೋಲಾಗದಂತೆ 2 ಟ್ಯಾಂಕ್‌ಗಳಲ್ಲಿ ಹರಿಸಿ ಅದನ್ನು ಸರಳ ವಿಧಾನದ ಮೂಲಕ ಶುದ್ಧೀಕರಿಸಿ ಬಳಿಕ ಆ ನೀರನ್ನು ಮನೆಯ ಟಾಯ್ಲೆಟ್‌ಗೆ ಫ್ಲಶ್‌ ಮಾಡಲು, ಗಾರ್ಡನ್‌ಗೆ ನೀರುಣಿಸಲು, ವಾಹನ ತೊಳೆಯಲು ಹಾಗೂ ಅಂಗಳ ತೊಳೆಯಲು ಬಳಸಿಕೊಂಡಿದ್ದೇನೆ ಎಂದರು. 

ನೀರು ಮರು ಬಳಕೆ ಮಾಡುವ ಈ ಸರಳ ವಿಧಾನದ ಫೂಟೋಗಳನ್ನು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲೆಯ ಎಲ್ಲ ಶಾಸಕರಿಗೆ ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಟ್ಯಾಗ್‌ ಮಾಡಿ, ಸರಕಾರದ ಹಣ ಬಳಸದೆ, ಅವರವರ ಮನೆಗಳಲ್ಲಿ ತಮ್ಮ ಸ್ವಂತ ಹಣದಲ್ಲಿ ಹೀಗೆ ನೀರು ಮರುಬಳಕೆ ಮಾಡುವ ವಿಧಾನವನ್ನು ಅಳವಡಿಸುವಂತೆ ಅವರಿಗೆ ಸವಾಲು ಹಾಕುತ್ತೇನೆ. ಆ ಮೂಲಕ ಅವರು ಇತರರಿಗೂ ಅವರು ಪ್ರೇರೇಪಣೆ ನೀಡಬೇಕು ಎಂದು ಹೇಳಿದರು.

ಸಬ್ಸಿಡಿ ನೀಡಿ
ಬೇಸಗೆ ಕಾಲದಲ್ಲಿ ನೀರಿನ ಆವಶ್ಯಕತೆ ಹೆಚ್ಚಾಗಿದ್ದು ನೀರಿನ ಮರುಬಳಕೆ ಹೆಚ್ಚಾಗಿರುತ್ತದೆ. ಹೀಗಾಗಿ ನೀರು ಮರುಬಳಕೆ ಮಾಡಲು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಇಂತಹ ತಂತ್ರಜ್ಞಾನ ಅಳವಡಿಸಲು ಸರಕಾರದಿಂದ ಸಬ್ಸಿಡಿ ನೀಡಬೇಕು ಎಂದು ಅವರು ಆಗ್ರಹಿಸಿದರು. ಸ್ವರ್ಣ ಸುಂದರ್‌, ರಾಘವೇಂದ್ರ ರಾವ್‌ ಹಾಗೂ ಸುಧೀರ್‌ ಹೆಗ್ಡೆ ಉಪಸ್ಥಿತರಿದ್ದರು. 

ಸರಳ ತಂತ್ರಜ್ಞಾನ ಹೇಗೆ? 
ಬಟ್ಟೆ ಒಗೆದ ಹಾಗೂ ಸ್ನಾನ ಮಾಡಿದ ನೀರನ್ನು ಟ್ಯಾಂಕಿಗೆ ಹರಿಯುವಂತೆ ಪೈಪ್‌ಲೈನ್‌ ಜೋಡಿಸಬೇಕು. ನೀರು ತಿಳಿಯಾಗಲು ಸಹಕರಿಸುವ ಮರಳು, ತೆಂಗಿನ ಸಿಪ್ಪೆಯ ನಾರು ಹಾಗೂ ಇದ್ದಿಲನ್ನು ಟ್ಯಾಂಕ್‌ನ ತಳಭಾಗದಲ್ಲಿ ಅಳವಡಿಸಿದ ಅನಂತರ ಈ ನೀರು ಇನ್ನೊಂದು ಟ್ಯಾಂಕ್‌ಗೆ ಬೀಳುವಂತೆ ಪಂಪ್‌ ಮಾಡಬೇಕು. ಈ ನೀರು ಮರುಬಳಕೆಗೆ ಯೋಗ್ಯವಾಗಿರುತ್ತದೆ. ಸುಮಾರು 35,000 ರೂ. ವೆಚ್ಚದಲ್ಲಿ ಈ ವಿಧಾನವನ್ನು ಮಾಡಿದ್ದೇನೆ. ಕಡಿಮೆ ವೆತ್ಛದಲ್ಲೂ ನಿರ್ಮಾಣ ಸಾಧ್ಯ.

ಟಾಪ್ ನ್ಯೂಸ್

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.