ಕದಿಕೆ ರಸ್ತೆಗೆ ಎಚ್ಚರಿಕೆ ಫಲಕ ಅಳವಡಿಕೆ
Team Udayavani, Jun 21, 2018, 12:38 PM IST
ಪಡುಪಣಂಬೂರು: ಮೀನುಗಾರಿಕಾ ಇಲಾಖೆಯಿಂದ 2 ಕೋ. ರೂ. ವೆಚ್ಚದಲ್ಲಿ ಪಡುಪಣಂಬೂರು ಗ್ರಾ. ಪಂ. ಮತ್ತು ಹಳೆಯಂಗಡಿ ಗ್ರಾ. ಪಂ.ನ ಗಡಿ ಪ್ರದೇಶವಾಗಿರುವ ಕದಿಕೆ-ಹೊಗೆಗುಡ್ಡೆ ನೂತನ ರಸ್ತೆಯಲ್ಲಿ ಸುರಕ್ಷತಾ ಕ್ರಮಕ್ಕೆ ಮೀನುಗಾರಿಕಾ ಇಲಾಖೆ ಮುಂದಾಗಿದೆ.
ಹೊಸ ರಸ್ತೆಯು ನಿರ್ಮಾಣವಾಗಿ ವರ್ಷ ಕಳೆದಿದ್ದರೂ ಯಾವುದೇ ರೀತಿಯ ಸೂಚನಾ ಫಲಕವನ್ನು ಅಳವಡಿಸಿದೇ ಇದ್ದುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಇದೆ ಹಾಗೂ ಇಲ್ಲಿನ ಮೂಲಸೌಕರ್ಯದ ಬಗ್ಗೆ ’ಉದಯವಾಣಿಯ’ ಸುದಿನದಲ್ಲಿ ಎ. 5ರಂದು ವಿಶೇಷ ವರದಿಯ ಮೂಲಕ ಗಮನ ಸೆಳೆದಿತ್ತು.
ಇದೀಗ ರಸ್ತೆಯ ತಿರುವಿನಲ್ಲಿ ಸಂಚಾರಿ ನಿಯಮಗಳ ಎಚ್ಚರಿಕೆಯ ಫಲಕ, ಶಾಲಾ ಮಕ್ಕಳು ಸಂಚರಿಸುವಲ್ಲಿ ಎಚ್ಚರಿಕೆಯ ಫಲಕ, ನದಿಯ ತೀರದಲ್ಲಿ ಇರುವ ಕಲ್ಲಿಗೆ ಹಾಗೂ ಮೋರಿಗಳಿಗೆ ಬಿಳಿ ಸುಣ್ಣವನ್ನು ಬಳಿದು ವಾಹನ ಸವಾರರಿಗೆ ಮುಂಜಾಗ್ರತ ಎಚ್ಚರಿಗೆಳನ್ನು ಸೂಚಿಸುವ ಜತೆಗೆ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಇಂತಹ ಫಲಕವನ್ನು ಅಳವಡಿಸಲಾಗಿದೆ.
ದಾರಿದೀಪ ಇನ್ನೂ ಆಗಿಲ್ಲ
ಪಡುಪಣಂಬೂರು ಹಾಗೂ ಚಿತ್ರಾಪುವಿನ ಮೂಲಕ ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕಿಸುವ ಈ ನೂತನ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನ ಸವಾರರು ಆಯಾ ತಪ್ಪಿದರೇ ನೇರವಾಗಿ ನದಿಗೆ ಬೀಳುವ ಸಾಧ್ಯತೆ ಇದೆ. ತಿರುವು ರಸ್ತೆಗಳಿರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಸಹ ಅಪಾಯ ತಪ್ಪಿದ್ದಲ್ಲ. ರಾತ್ರಿ ಸಮಯದಲ್ಲಿ ಸೂಕ್ತವಾದ ಬೆಳಕಿನ ಆವಶ್ಯಕತೆ ಇರುವುದರಿಂದ ದಾರಿ ದೀಪವನ್ನು ಅಳವಡಿಸುವ ಬಗ್ಗೆ ಪಡುಪಣಂಬೂರು ಗ್ರಾ. ಪಂ. ಕ್ರಮ ಕೈಗೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಕೋರ್ಟ್ ತರಾಟೆ
Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್ ತಯಾರಿ
Bengaluru: ಉದ್ಯಮಿಗೆ ಹನಿಟ್ರ್ಯಾಪ್ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್
Bengaluru: ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಸಿಬ್ಬಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.