ಬರನಾಡಿನಲ್ಲೂ ನೀರು ಹರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ


Team Udayavani, Jun 22, 2018, 3:19 PM IST

22-june-14.jpg

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಂಗಾರಹಳ್ಳಿ ಕೆರೆ ಪುನಶ್ಚೇತನ ಕಾರ್ಯ ನಡೆಸಿದ್ದು, ಬರ ನಾಡಿನಲ್ಲೂ ಸ್ಥಳೀಯ ಜನತೆಗೆ ಉತ್ತಮ ನೀರು ಲಭಿಸಿದೆ. ಮುಳಬಾಗಿಲು ತಾಲೂಕಿನ ಹನುಮನ ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಂಗಾರಹಳ್ಳಿ ಗ್ರಾಮದ ಕೆರೆಯನ್ನು ಯೋಜನೆ ಮೂಲಕ ಸ್ಥಳೀಯರ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಲಾಗಿದೆ.

ಸುಮಾರು 18 ಎಕ್ರೆ ವಿಸ್ತೀರ್ಣದ ಕೆರೆಯ ಹೂಳನ್ನು 30 ವರ್ಷಗಳ ಬಳಿಕ ತೆಗೆದಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯಿಂದ 18.10 ಲಕ್ಷ ರೂ. ಅನುದಾನ ನೀಡಲಾಗಿದೆ.

15,371 ಲೋಡ್‌ ಹೂಳು
4 ಅಡಿ ಹೂಳು ಎತ್ತಲಾಗಿದ್ದು, ಸುಮಾರು 3 ತಿಂಗಳ ಕಾಲ ಕಾಮಗಾರಿ ನಡೆಸಲಾಗಿದೆ. 15,371 ಲೋಡ್‌ ಹೂಳನ್ನು ತೆಗೆಯಲಾಗಿದ್ದು, 377 ಕುಟುಂಬಗಳ 500 ಎಕ್ರೆ ಜಮೀನಿಗೆ ರೈತರು ಫಲವತ್ತಾದ ಹೂಳನ್ನು ಉಪಯೋಗಿಸಿಕೊಂಡಿದ್ದಾರೆ. 2 ಹಿಟಾಚಿ, 1 ಜೆಸಿಬಿ ಸುಮಾರು 1,494 ಗಂಟೆಗಳ ಕಾಲ ಕೆಲಸ ನಿರ್ವಹಿಸಿದೆ. ಮುಳಬಾಗಿಲು ತಾಲೂಕಿನ ಆಗಿನ ಶಾಸಕ ಕೊತ್ತೂರು ಜಿ. ಮಂಜುನಾಥ್‌ ಅವರೂ ಕೆರೆಯ ಕೆಲಸ ಪೂರ್ತಿಯಾಗುವವರೆಗೆ 1 ಜೆ.ಸಿ.ಬಿ. ನೀಡಿದ್ದು, 400 ಗಂಟೆ ಕೆಲಸ ನಿರ್ವಹಿಸಿದೆ.

ಉತ್ತಮ ಮಳೆಯಾದ ಕಾರಣ ಕೆರೆ ತುಂಬಿದೆ. ಕುಡಿಯುವ ನೀರಿಗೂ ಸಮಸ್ಯೆಯಿದ್ದ ಈ ಸುತ್ತಮುತ್ತಲಿನ 7 ಗ್ರಾಮಗಳಲ್ಲಿ ಬೋರ್‌ಗಳಲ್ಲಿ ನೀರು ದೊರೆಯುತ್ತಿದೆ. ಕುಡಿಯಲು, ಕೃಷಿ, ಜಾನುವಾರುಗಳೀಗೆ ನೀರಿನ ಕೊರತೆ ನೀಗಿಸಿದೆ. ಪ್ರಸ್ತುತ 9 ಅಡಿ ನೀರಿದೆ.

12.06 ಕೋ. ರೂ. ಅನುದಾನ 
2016-17 ಮತ್ತು 2017-18, 2018-19 ಸಾಲಿನಲ್ಲಿ 152 ಕೆರೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 12.06 ಕೋಟಿ ರೂ.ಅನುದಾನ ನೀಡಲಾಗಿದೆ. ಊರಿನವರ ಸಹಭಾಗಿತ್ವದ ಮೂಲಕ 17.93 ಕೋಟಿ ರೂ. ಖರ್ಚು ಮಾಡಿ ಕೆರೆ ಕಾಮಗಾರಿ ಮಾಡಲಾಗಿದೆ. ಕೆರೆ ಹೂಳನ್ನು ಸುಮಾರು 20 ಸಾವಿರಕ್ಕೂ ಮಿಕ್ಕಿ ರೈತರು ಪಡೆದುಕೊಂಡು ಕೃಷಿಗೆ ಬಳಕೆ ಮಾಡಿದ್ದಾರೆ.

ಶ್ರೀಕ್ಷೇತ್ರ ಧ.ಗ್ರಾ.ಯೋ. ಕೇಂದ್ರ ಕಚೇರಿ ಧರ್ಮಸ್ಥಳದ ಕೆರೆ ಅಭಿವೃದ್ಧಿ ವಿಭಾಗದ ನಿರ್ದೇಶಕರು, ಯೋಜನಾಧಿಕಾರಿ, 3 ಮಂದಿ ಎಂಜಿನಿಯರು, ಆಡಿಟರ್‌, ಪ್ರಬಂಧಕರು, ಕಚೇರಿ ಸಿಬಂದಿ, ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ ನಿರ್ದೇಶಕರು, ತಾ| ಯೋಜನಾಧಿಕಾರಿ, ಮೇಲ್ವಿಚಾರಕರು ಪ್ರಯತ್ನದಿಂದ ಯೋಜನೆಗಳು ಫಲಪ್ರದವಾಗುತ್ತಿವೆ.

ಕೆರೆಗಳ ಪುನಶ್ಚೇತನ
28 ಜಿಲ್ಲೆಗಳ 152 ತಾಲೂಕುಗಳಲ್ಲಿ ಕೆರೆ ಪುನಶ್ಚೇತನ ನಡೆದಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಬಯಲುಸೀಮೆ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯ ಸಮಿತಿ ರಚಿಸಿ ಹೂಳೆತ್ತಲಾಗುತ್ತದೆ. ಮುಂದೆ ಈ ಕೆರೆಯ ನಿರ್ವಹಣೆಯನ್ನು ಸಮಿತಿ ಮಾಡುತ್ತದೆ.
– ಲಕ್ಷ್ಮಣ್‌ ಎಂ. ಎ
ಶುದ್ಧಗಂಗಾ, ಕೆರೆ-ಸ್ವಚ್ಛತಾ ವಿಭಾಗದ ನಿರ್ದೇಶಕರು

ಟಾಪ್ ನ್ಯೂಸ್

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Mang-Airport

Mangaluru ವಿಮಾನ ನಿಲ್ದಾಣ:ಅಂತಾರಾಷ್ಟ್ರೀಯ ಕಾರ್ಗೋ ಸೇವೆ ಪ್ರಾರಂಭ

suicide

Chhattisgarh; ಎರಡು ಪ್ರತ್ಯೇಕ ಅವಘಡದಲ್ಲಿ ಬಾವಿಗೆ ಬಿದ್ದು 9 ಮಂದಿ ಮೃತ್ಯು

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.