ಕೃಷ್ಣೆ ಸ್ನಾನಘಟ್ಟ ಕಾಮಗಾರಿ ಅರೆ ಬರೆ!


Team Udayavani, Jun 25, 2018, 11:18 AM IST

ballery-1.jpg

„ಸಿದ್ಧಯ್ಯ ಕುಕನೂರ
ರಾಯಚೂರು: 12 ವರ್ಷಕ್ಕೊಮ್ಮೆ ಬರುವ ಪುಷ್ಕರ ಪುಣ್ಯಸ್ನಾನಕ್ಕಾಗಿ ಕೃಷ್ಣಾ ನದಿಗೆ ನಿರ್ಮಿಸಲು ಮುಂದಾಗಿದ್ದ ಸ್ನಾನಘಟ್ಟ ಕಾಮಗಾರಿ ಅರೆಬರೆಯಾಗಿದ್ದು, ಎರಡು ವರ್ಷ ಕಳೆದರೂ ಅಂತಿಮ ಸ್ವರೂಪ ನೀಡಲಾಗಿಲ್ಲ.

2015ರಲ್ಲಿ ಕೃಷ್ಣಾ ನದಿಗೆ ಪುಷ್ಕರ ಪುಣ್ಯಸ್ನಾನ ಬಂದಿತ್ತು. ಆಗ, ಕರ್ನಾಟಕ ಮತ್ತು ಆಂಧ್ರ, ತೆಲಂಗಾಣ ಸರ್ಕಾರಗಳು ಕೃಷ್ಣಾ ನದಿಗೆ ಸುಸಜ್ಜಿತ ಸ್ನಾನಘಟ್ಟ ನಿರ್ಮಿಸಲು ಮುಂದಾಗಿದ್ದವು. ಸಮೀಪದ ಕೃಷ್ಣಾ ಬಳಿ ಸುಸಜ್ಜಿತ ಸ್ನಾನಘಟ್ಟ ನಿರ್ಮಾಣವಾದರೆ ಕರ್ನಾಟಕ ಭಾಗದಲ್ಲಿರುವ ಶಕ್ತಿನಗರ ಸಮೀಪದ ಸೇತುವೆ ಬಳಿಯೂ ಜಿಲ್ಲಾಡಳಿತ ಸ್ನಾನಘಟ್ಟ ನಿರ್ಮಿಸಲು ಮುಂದಾಗಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ 1.43 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಆದರೆ, ಆಗ ಸಮಯಾವಕಾಶದ ಕೊರತೆಯಿದ್ದ ಕಾರಣ ತಾತ್ಕಾಲಿಕವಾಗಿ ತರಾತುರಿಯಲ್ಲಿ ಕೆಲಸ ನಿರ್ವಹಿಸಲಾಗಿತ್ತು. ಅದಾಗಿ ಎರಡು ವರ್ಷ ಕಳೆದರೂ ಶಾಶ್ವತ ಕಾಮಗಾರಿ ಮಾತ್ರ ಇನ್ನೂ ಆಗಿಲ್ಲ.

ಪುಷ್ಕರ ಪುಣ್ಯಸ್ನಾನಕ್ಕೆ ಇನ್ನು 12 ದಿನ ಬಾಕಿ ಇದ್ದಾಗ ಕ್ಯಾಶುಟೆಕ್‌ ಸಂಸ್ಥೆಗೆ ಕಾಮಗಾರಿ ವಹಿಸಲಾಗಿತ್ತು. ನಿತ್ಯ ಏನಿಲ್ಲವೆಂದರೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿತ್ತು. ಹೀಗಾಗಿ ತಕ್ಷಣಕ್ಕೆ ಮುಖ್ಯವಾಗಿ ಬೇಕಾದ ಸ್ನಾನಘಟ್ಟ, ತಾತ್ಕಾಲಿಕ ಸ್ನಾನಗೃಹ, ಮಹಿಳೆಯರಿಗೆ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೂ ಜಿಟಿಜಿಟಿ ಮಳೆ ಅಡ್ಡಿಯಾದ ಕಾರಣ ಮಾಡಿದ ಕೆಲಸವೂ ಅರೆಬರೆಯಾಗಿತ್ತು.

ಸ್ನಾನಕ್ಕೆ ತಾತ್ಕಾಲಿಕ ಟೆಂಟ್‌ ಗಳನ್ನು ನಿರ್ಮಿಸಲಾಗಿತ್ತು. ಶೌಚಕ್ಕೆ ಮಹಿಳೆಯರಿಗಷ್ಟೇ ತಾತ್ಕಾಲಿಕ ವ್ಯವಸ್ಥೆ
ಮಾಡಿದ್ದರೆ, ಪುರುಷರು ಬಯಲನ್ನೇ ಆಶ್ರಯಿಸಿದ್ದರು. ಅದಾಗಿ ಎರಡು ವರ್ಷ ಕಳೆದರೂ ಇನ್ನೂ ಶಾಶ್ವತ ಕಾಮಗಾರಿ
ನಿರ್ವಹಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾಕಷ್ಟು ಕೆಲಸ ಬಾಕಿ: ಸ್ನಾನಘಟ್ಟದಲ್ಲಿ ಕೇವಲ ಕಟ್ಟೆ ಮಾತ್ರವಲ್ಲದೇ, ಸ್ನಾನದ ಕೋಣೆಗಳು, ಶೌಚಾಲಯಗಳು, ತಂಗುದಾಣ, ವಿದ್ಯುತ್‌ ದೀಪಗಳು, ನೀರಿನ ವ್ಯವಸ್ಥೆ ಸೇರಿ ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸಬೇಕು. ಇಲ್ಲಿ ಅದ್ಯಾವುದು ಇಲ್ಲ. ಆಗ ನಿರ್ಮಿಸಿದ್ದ ತಾತ್ಕಾಲಿಕ ತಂಗುದಾಣವನ್ನು ಕೂಡ ತೆರವುಗೊಳಿಸಿದ್ದಾರೆ. ಅನೈತಿಕ ಚಟುವಟಿಕೆ ನಡೆಯುತ್ತವೆ ಎಂಬ ಕಾರಣವೊಡ್ಡಿ ಟಿನ್‌ ಗಳನ್ನು ತೆಗೆದಿರಿಸಲಾಗಿದೆ. ಇದರಿಂದ ಅಮಾವಾಸ್ಯೆ, ಸಂಕ್ರಾಂತಿ ಸೇರಿ ವಿವಿಧ ವಿಶೇಷ ದಿನಗಳಂದು ನದಿಗೆ ಬರುವ ಜನರಿಗೆ ಉಪಯೋಗವಿಲ್ಲದಂತಾಗಿದೆ. ಶ್ರಾವಣ ಮಾಸ ಸಮೀಪಿಸುತ್ತಿದ್ದು, ಮತ್ತೆ ನದಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಇನ್ನಾದರೂ ಜಿಲ್ಲಾಡಳಿತ ಶಾಶ್ವತ ಕಾಮಗಾರಿಗೆ ಇಚ್ಛಾಶಕ್ತಿ ತೋರಲಿ ಎಂಬುದು ಸ್ಥಳೀಯರ ಒತ್ತಾಯ. 

ಕೃಷ್ಣಾ ನದಿ ಪಾತ್ರದಲ್ಲಿ ಸ್ನಾನಘಟ್ಟ ನಿರ್ಮಿಸಲು ಸರ್ಕಾರ 1.43 ಕೋಟಿ ರೂ. ಮಂಜೂರು ಮಾಡಿತ್ತು. ಅದರಲ್ಲಿ
ಆರಂಭಿಕ ಹಂತವಾಗಿ ಒಂದು ಕೋಟಿ ಮಾತ್ರ ನೀಡಿದ್ದು, ಬಾಕಿ 43 ಲಕ್ಷ ರೂ. ಈಗ ಬಂದಿದೆ. ಇನ್ನೂ ಸಾಕಷ್ಟು ಕೆಲಸ
ಬಾಕಿಯಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು. 

ಶರಣಬಸಪ್ಪ ಪಟ್ಟೇದ,ಕ್ಯಾಶುಟೆಕ್‌ ಅಧಿಕಾರಿ 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

10

Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ

BJP: If given the post of state president, I will unite everyone: B. Sriramulu

BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು

Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ

Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ

10-siruguppa

Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.