ಬಸವನಬಾಗೇವಾಡಿಯಲ್ಲಿ ಸಂಭ್ರಮದ ಕಾರಹುಣ್ಣಿಮೆ
Team Udayavani, Jun 29, 2018, 11:47 AM IST
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಕಾರಹುಣ್ಣಿಮೆಯನ್ನು ರೈತರು ಸಡಗರ
ಸಂಭ್ರಮದಿಂದ ಆಚರಿಸಿದರು. ರೈತರು ಬೆಳಗ್ಗೆ ಎತ್ತುಗಳು ಸೇರಿದಂತೆ ದನಕರುಗಳ ಮೈತೊಳೆದು ವಿವಿಧ ಬಣ್ಣ
ಹಚ್ಚಿ, ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಸಂಜೆ ಪಟ್ಟಣದ ಗಣಪತಿ ವೃತ್ತ, ಸಂಗೊಳ್ಳಿ
ರಾಯಣ್ಣ ವೃತ್ತ, ತೆಗಲಿ ರಸ್ತೆ, ವಿಜಯಪುರ ರಸ್ತೆ, ಗೌರಿ ಶಂಕರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ
ರೈತರು ತಮ್ಮ ಎತ್ತುಗಳನ್ನು ಓಡಿಸಿ ಕರಿ ಹರಿದರು. ಎರಡು ಬದಿಗಳಲ್ಲಿ ನಿಂತ ಜನರು ಕೂಗಾಟದ ಮಧ್ಯೆ ಎತ್ತುಗಳು
ರಭಸವಾಗಿ ಇನ್ನೊಂದು ತುದಿಗೆ ತಲುಪಿದವು.
ತೆಲಗಿ ರಸ್ತೆಯಲ್ಲಿನ ಗಣಪತಿ ವೃತ್ತದಲ್ಲಿ ರೈತರು ಭಾರವಾದ ಕಲ್ಲುಗುಂಡು ಎತ್ತುವ ಮೂಲಕ ಈ ವರ್ಷದ ಮಳೆ ಬೆಳೆಯ ಕುರಿತು ಭವಿಷ್ಯ ತಿಳಿದರು. ಅಶೋಕ ಮುಳವಾಡ, ಮಹಾಂತೇಶ ಹಂಜಗಿ, ಗುರಪ್ಪ ತುಂಬಗಿ, ಶಿವಪ್ಪ ದಂಡಿನ, ಮಲ್ಲಪ್ಪ ನಾಗೋಡ, ಚನಬಸು ಮುಳವಾಡ, ಶಿವಪ್ಪ ತುಂಬಗಿ, ಅರುಣ ಬಸರಕೋಡ, ಮಲ್ಲಿಕಾರ್ಜುನ ಹಡಪದ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ, ಮಹಾದೇವಪ್ಪ ಹಡಪದ, ದೊಡ್ಡಪ್ಪ ಅವಟಿ ಸೇರಿದಂತೆ ಅನೇಕರು
ಪಾಲ್ಗೊಂಡಿದ್ದರು. ವಿಜಯಪುರ ರಸ್ತೆಯಲ್ಲಿ ಜರುಗಿದ ಕರಿಹರಿಯುವ ಕಾರ್ಯಕ್ರಮದಲ್ಲಿ ಶಿವಪ್ಪ ಈರಕಾರ ಮುತ್ಯಾ, ಈರಯ್ಯ ಹಿರೇಮಠ, ಸತ್ಯಪ್ಪ ಕ್ಯಾಡದ, ರಾಷಪ್ಪ ಖ್ಯಾಡದ, ವಿಜಯ ಗೊಳಸಂಗಿ, ಸೋಮು ಶೆಂಡೆ, ಬಸವರಾಜ ಶೆಂಡೆ, ರಾಜು ಹೆಬ್ಟಾಳ, ಬಸವರಾಜ ಗಬ್ಬೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ
Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ
Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವಕ್ಕಾಗಿ ಶೋಧ
Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ
Congress: ನೂರು ಕಾನೂನು ಮಾಡಿ,ನಾನು ಅಂಜಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.