ಶಿಥಿಲಗೊಂಡ ಗುರುಪುರ ಸೇತುವೆ:ತಂತ್ರಜ್ಞರ ತಂಡದಿಂದ ಗುಣಮಟ್ಟ ಪರಿಶೀಲನೆ


Team Udayavani, Jun 29, 2018, 6:11 PM IST

gurupura-28-6.jpg

ಗುರುಪುರ: ಬ್ರಿಟಿಷರ ಕಾಲದಲ್ಲಿ ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 98 ವರ್ಷ ಪೂರೈಸಿದ ಗುರುಪುರದ ಸೇತುವೆಯ ಗುಣಮಟ್ಟ ಸಮಗ್ರ ಪರಿಶೀಲನೆ ಕಾರ್ಯವನ್ನು ಜೂನ್‌ 28ರಂದು PWDಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರುಗಳು ಹಾಗೂ ಸೇತುವೆ ಪರಿಣತರು ವಿಶೇಷ ಉಪಕರಣ ಅಳವಡಿಸಿ ನಡೆಸಿದರು.

ವ್ಯಾಪಾರ ಉದ್ದೇಶಕ್ಕಾಗಿ ಬ್ರಿಟಿಷರು ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಕುದುರೆಗಾಡಿ ಹೋಗಲು ತಕ್ಕುದಾದ ಸೇತುವೆಯನ್ನು ನಿರ್ಮಿಸಿದ್ದರು. ಆದರೆ ಇದೇ ಸೇತುವೆಯು ಮಂಗಳೂರಿನಿಂದ ಕಾರ್ಕಳಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-169ಕ್ಕೂ ಬಳಕೆಗೊಂಡು ಇಂದು ಶಿಥಿಲಾವಸ್ಥೆಯನ್ನು ತಲುಪಿದೆ. ಇತ್ತೀಚೆಗೆ ಮೂಲರಪಟ್ಣ ಸೇತುವೆ ಕುಸಿದ ಕಾರಣ ಇದೇ ಗತಿ ಗುರುಪುರ ಸೇತುವೆಗೂ ಬರಬಹುದು ಎಂಬ ಆತಂಕದಲ್ಲಿ ತಂತ್ರಜ್ಞರು ಆಧುನಿಕ ಉಪಕರಣಗಳನ್ನು ಬಳಸಿ ಸಮಗ್ರ ಪರಿಶೀಲನೆ ನಡೆಸಿದ್ದು ವರದಿ ತಯಾರಿಸಲಿದೆ.

ಬೆಳಗ್ಗೆ 6 ಗಂಟೆಗೆ PWD, ಬಂದರು, ಒಳನಾಡು ಮತ್ತು ಜಲಸಾರಿಗೆಗೆ ಸೇರಿದ ತಂತ್ರಜ್ಞರ ತಂಡವು ಬೃಹತ್‌ ಕ್ರೇನ್‌ ಹಾಗೂ ಇತರ ಯಂತ್ರೋಪಕರಣಗಳೊಂದಿಗೆ ಗುರುಪುರ ಸೇತುವೆಗೆ ಆಗಮಿಸಿ ಪರೀಕ್ಷೆ ಆರಂಭಿಸಿತು. ಈ ವೇಳೆ ಮಂಗಳೂರು ಲೋಕೋಪಯೋಗಿ ಇಲಾಖೆಯ (PWD) ‘ಗುಣಮಟ್ಟ ಭರವಸೆ’ ಉಪ-ವಿಭಾಗದ ತಂತ್ರಜ್ಞರ ತಂಡವು ಸೇತುವೆಯ ಮೇಲ್ಭಾಗದಲ್ಲಿ ನಾಲ್ಕು ಕಂಬಗಳ ಸಮಾನಾಂತರದಲ್ಲಿ ರಂಧ್ರ ಕೊರೆದು ಸ್ಯಾಂಪಲ್‌ ಸಂಗ್ರಹಿಸಿತು.


ಸಮಗ್ರ ಪರೀಕ್ಷೆ, ಪರಿಶೀಲನೆ

ಇದೇ ಸಮಯದಲ್ಲಿ ಬೆಂಗಳೂರಿನ ಸೇತುವೆ ಪರಿಶೀಲನೆ ಏಜೆನ್ಸಿಯ ಸೇತುವೆ ತಜ್ಞರಾಗಿರುವ ಜೈಪ್ರಸಾದ್‌ ಅವರನ್ನೊಳಗೊಂಡ ವಿಶೇಷ ತಂಡವು ಕ್ರೇನ್‌ ಬಳಸಿಕೊಂಡು ಸೇತುವೆಯ ಅಡಿಭಾಗ, ಮೇಲ್ಭಾಗ ಸೇರಿ ಸೇತುವೆಯ ಎಲ್ಲ ಭಾಗಗಳನ್ನು ಪರಿಶೀಲನೆ ನಡೆಸಿತು. ಕಬ್ಬಿಣದ ಸ್ಲಾéಬುಗಳಿಗೆ ತುಕ್ಕು ಹಿಡಿದ ಭಾಗಗಳ ಹಲವು ಫೊಟೊಗಳನ್ನು ಸೆರೆಹಿಡಿಯಲಾಗಿದೆ. ಇದಾದ ಅನಂತರ ತಂತ್ರಜ್ಞರ ತಂಡವು ನದಿ ಭಾಗಕ್ಕಿಳಿದು ಕ್ರೇನ್‌ ಮೂಲಕ ಒಟ್ಟು ಮೂರು ಕಂಬಗಳ ಸಮಾನಾಂತರದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿತು. ಬೆಳಗ್ಗೆ ಆರಕ್ಕೆ ಆರಂಭವಾದ ಪರೀಕ್ಷೆಯು 9.30ಕ್ಕೆ ಮುಕ್ತಾಯಗೊಂಡಿತು. ಪರೀಕ್ಷೆಯ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಗುರುಪುರ ಸೇತುವೆಯಲ್ಲಿ ಸಂಚಾರವನ್ನು ನಿರ್ಬಂಧಿಸಿ, ಹತ್ತರ ಅನಂತರ ಮತ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಾಹನಗಳೆಲ್ಲ ಪರ್ಯಾಯ ರಸ್ತೆಯಲ್ಲಿ ಸಂಚರಿಸಿದವು.


ಸಂಚಾರ ಬದಲಾವಣೆ

ಮಂಗಳೂರಿನಿಂದ ಮೂಡಬಿದಿರೆ ಕಾರ್ಕಳಕ್ಕೆ ತೆರಳುವ ಬಸ್‌ಗಳು ಕಾವೂರು ಮುಖಾಂತರ ಬಜ್ಪೆಗೆ ಆಗಮಿಸಿ ಕೈಕಂಬದಿಂದ ಹಾದುಹೋದವು. ಕಾರ್ಕಳ ಮೂಡಬಿದಿರೆಯಿಂದ ಆಗಮಿಸಿದ ಬಸ್‌ ಗಳು ಕೈಕಂಬದಿಂದ ಬಜ್ಪೆ ಮುಖಾಂತರ ಮಂಗಳೂರಿಗೆ ಸಂಚರಿಸಿತು. ಸ್ಥಳೀಯ ಶಾಲಾ ಮಕ್ಕಳು ಅಘೋಷಿತ ರಜೆ ಹಾಕಿದರು. ಬೆಳ್ಳಂಬೆಳಗ್ಗೆ ಏಕಾಏಕಿ ರಸ್ತೆ ಬಂದ್‌ ಮಾಡಿರುವುದನ್ನು ಕಂಡು ಸೇತುವೆ ಕುಸಿದಿದೆ ಎಂಬ ವದಂತಿ ಹಬ್ಬಿ ಹಲವಾರು ಮಂದಿ ಸೇತುವೆಯತ್ತ ಧಾವಿಸಿ ಬಂದಿದ್ದರು. ಸ್ಥಳದಲ್ಲಿ ಪೊಲೀಸರಿಂದ ಬಂದೋಬಸ್ತು ಏರ್ಪಡಿಸಲಾಗಿತ್ತು.

ರಂಧ್ರ ಕೊರೆದು ಪರಿಶೀಲನೆ 
ಸೇತುವೆಯಲ್ಲಿ ರಂಧ್ರಕೊರೆದು ಪರಿಶೀಲನೆ ನಡೆಸಲಾಗಿದೆ. ಸೇತುವೆಯ ತಡೆಗೋಡೆ, ತುಕ್ಕು ಹಿಡಿದ ಭಾಗ, ಸೇತುವೆ ಅಡಿಭಾಗ ಮುಖ್ಯವಾಗಿ ಬೇರಿಂಗ್‌, ಡೆಸ್ಕ್ ಲ್ಯಾಬ್‌, ಕುಸಿದ ಸ್ಥಳ, ಇತ್ಯಾದಿಗಳನ್ನು ಪರಿಶೀಲಿಸಿತು. ಸೇತುವೆ ಮೇಲ್ಭಾಗದ ಟ್ರಸ್‌ ಉತ್ತಮವಾಗಿದೆ ಎಂದಷ್ಟೇ ಹೇಳಿದ ತಂಡವು ಉಳಿದಂತೆ ಪರೀಕ್ಷೆಯ ಯಾವ ಮಾಹಿತಿಯನ್ನೂ ಬಿಟ್ಟುಕೊಡಲು ನಿರಾಕರಿಸಿದೆ.

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.