ಯಾರದ್ದೋ ಹೆಸರು; ಇನ್ಯಾರಿಗೋ ಕನೆಕ್ಷನ್‌


Team Udayavani, Jul 4, 2018, 3:45 AM IST

gas-cylinder-650.jpg

ಬೈಂದೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲಾ ಇಂಧನ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿರುವ ಸಾಧ್ಯತೆ ಗೋಚರಿಸಿದೆ. ಇದಕ್ಕೆ ಪುಷ್ಟೀಕರಣ ನೀಡು ವಂಥ ಮಾಹಿತಿ ಕುಂದಾಪುರ ತಾಲೂಕಿನಲ್ಲಿ ಲಭ್ಯವಾಗಿದೆ. ಯಾರಧ್ದೋ ಹೆಸರಿನಲ್ಲಿ ಬೇರೆ ಯಾರಿಗೋ ಗ್ಯಾಸ್‌ ಸಂಪರ್ಕ ನೀಡಿ ಕೆಲವು ವಿತರಕ ಏಜೆನ್ಸಿಗಳು ರಂಗೋಲಿಯಡಿ ನುಸುಳುವ ಪ್ರಯತ್ನ ನಡೆಸಿರುವ ಆರೋಪ ಕೇಳಿಬಂದಿದೆ. ಇದರಿಂದ ನೂರಾರು ಬಿ.ಪಿ.ಎಲ್‌. ಕಾರ್ಡುದಾರರು ಶಾಶ್ವತವಾಗಿ ಅಡುಗೆ ಅನಿಲ ಸಂಪರ್ಕ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಏನಿದು ಯೋಜನೆ?: ಕೇಂದ್ರ ಸರಕಾರವು ಬಡ ಮಹಿಳೆಯರಿಗೆ ಸುರಕ್ಷೆ ಹಾಗೂ ಗೌರವ ನೀಡುವ ನೆಲೆಯಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯನ್ನು ‘ಸ್ವಚ್ಛ ಇಂಧನ -ಉತ್ತಮ ಜೀವನ’ ಪರಿಕಲ್ಪನೆಯಡಿ ನೀಡಿತ್ತು. ಇದರಡಿ ಬಿಪಿಎಲ್‌ ಕಾರ್ಡುದಾರರು, ಪರಿಶಿಷ್ಟ ಜಾತಿ- ಪಂಗಡದ‌ ಮಹಿಳೆಯರು ಸಂಪೂರ್ಣ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಪಡೆಯಬಹುದು. ಇದರಿಂದ‌ ಸಾವಿರಾರು ಕುಟುಂಬಗಳು ಅಡುಗೆಗೆ ಕಟ್ಟಿಗೆ ಮತ್ತು ಇತರ ಇಂಧನ ಅವಲಂಬಿಸುವುದನ್ನು ತಪ್ಪಿಸುವುದು ಸರಕಾರದ ಉದ್ದೇಶವಾಗಿತ್ತು. ಈ ಯೋಜನೆಯಡಿ ಅನಿಲ ಸಂಪರ್ಕವನ್ನು ಎಸ್‌.ಇ.ಸಿ.ಸಿ. ವೆಬ್‌ ಸೈಟ್‌ ನಲ್ಲಿ ಎ.ಎಚ್‌.ಎಲ್‌. ಟಿನ್‌ ನಂಬರ್‌ ಆಧಾರದಲ್ಲಿ ಒದಗಿಸಬೇಕು. 29 ಡಿಜಿಟ್‌ ಗಳ ಈ ಸಂಖ್ಯೆಯಲ್ಲಿ ಆಯಾ ಕುಟುಂಬ ಸದಸ್ಯರ ಸಂಪೂರ್ಣ ವಿವರಗಳಿರುತ್ತವೆ. ಹೀಗಾಗಿ ಯೋಜನೆಯ ಸಂಪರ್ಕ ನೀಡುವ ವಿತರಕರು ಈ ದಾಖಲೆಯನ್ನು ಪರಿಶೀಲಿಸಿಯೇ ನೀಡಬೇಕು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಆದರೆ ಆಗುತ್ತಿರುವುದು ಬೇರೆ. ಸಾಮಾನ್ಯವಾಗಿ ಬಹುತೇಕ ಕುಟುಂಬಗಳು ಈಗಾಗಲೇ ಗ್ಯಾಸ್‌ ಸಂಪರ್ಕ ಹೊಂದಿವೆ. ಉಜ್ವಲಾ ಯೋಜನೆಯ ಮಾಹಿತಿ ಇರುವ ಹಲವರು ಸೌಲಭ್ಯ ಪಡೆದಿದ್ದರೂ ಗ್ರಾಮೀಣ ಭಾಗದ ನೂರಾರು ಕುಟುಂಬಗಳು ಇದರಿಂದ ವಂಚಿತವಾಗಿವೆ. ಇತ್ತೀಚೆಗೆ ಕೇಂದ್ರ ಸರಕಾರ ಅಗತ್ಯ ಮಾಹಿತಿಯನ್ನು ಮನೆ ಮನೆಗೆ ತಲುಪಿಸಿದೆ. ಕೇಂದ್ರ ಸರಕಾರದ ಯೋಜನೆಯ ಲಾಭ ಅರ್ಹ ಫ‌ಲಾನುಭವಿಗಳಿಗೆ ಸಿಗಬೇಕು. ಈ ರೀತಿಯ ದುರುಪಯೋಗ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಅಕ್ರಮ ವಿತರಣೆ ಕುರಿತು ಸಮಗ್ರ ತನಿಖೆಯಾಗಬೇಕು. ಅರ್ಹ ನಾಗರಿಕರಿಗೆ ಅನ್ಯಾಯವಾಗಿರುವಾಗ ಜಿಲ್ಲಾಡಳಿತ ಸಮಗ್ರ ತನಿಖೆಗೆ ಆದೇಶಿಸಿ ನ್ಯಾಯ ಕಲ್ಪಿಸಬೇಕು ಎಂಬುದು ಜನರ ಆಗ್ರಹ.

ಇಲ್ಲೊಂದು ಪ್ರಕರಣ
ಬೈಂದೂರಿನ ಗ್ರಾಮೀಣ ಭಾಗದ ಕೆಲವರು ಉಜ್ವಲಾ ಅನಿಲ ಸಂಪರ್ಕ ಪಡೆಯಲು ವಿತರಕರನ್ನು ಸಂಪರ್ಕಿಸಿದಾಗ ‘ನಿಮಗೆ ಈಗಾಗಲೇ ಅನಿಲ ಸಂಪರ್ಕ ನೀಡಲಾಗಿದೆ’ ಎಂಬ ಉತ್ತರ ಲಭಿಸಿತು. ಇದರಿಂದ ಕೋಪಗೊಂಡ ಕೆಲವರು, ನಮಗೆ ಗ್ಯಾಸ್‌ ಸಂಪರ್ಕ ಕೊಟ್ಟಿಲ್ಲ. ಕೊಡಿ ಎಂದು ಪಟ್ಟು ಹಿಡಿದರು. ಕೊನೆಗೂ ನ್ಯಾಯ ಸಿಗದ ಪರಿಣಾಮ ಇದರ ಬಗ್ಗೆ ಮಾಹಿತಿ ಇಲ್ಲದ, ನಿಜವಾಗಿ ಗ್ಯಾಸ್‌ ಸಂಪರ್ಕವನ್ನೂ ಪಡೆದಿರದ ಗ್ರಾಹಕರು ವಿತರಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಸಮಗ್ರವಾಗಿ ಪರಿಶೀಲಿಸಿದಾಗ ತಾಲೂಕು ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಯೋಜನೆಯ ಲಾಭ ಪಡೆದಿಲ್ಲ. ಸಂಪರ್ಕಗಳಲ್ಲಿ ಗ್ರಾಹಕರ ಹೆಸರು ಮಾತ್ರ ಸರಿಯಾಗಿದೆ. ಆದರೆ ವಿಳಾಸ ಸಂಪೂರ್ಣ ಬೇರೆ. ಜಡ್ಕಲ್‌ ನ ಗ್ರಾಹಕರಿಗೆ ಗಂಗೊಳ್ಳಿಯ ವಿಳಾಸವಿದೆ. ಅಂದರೆ ಯಾರದೋ ಹೆಸರಿನಲ್ಲಿ ಇನ್ಯಾರಿಗೋ ಸಂಪರ್ಕ ಎಂಬಂತಾಗಿದೆ. ಇತರೆಡೆಯೂ ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಸಂಪರ್ಕಗಳು ಅರ್ಹರಿಗೆ ಮುಟ್ಟಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

2011ರ ಗಣತಿ ಆಧಾರದಲ್ಲಿ ಅರ್ಹ ಫಲಾನುಭವಿಗಳಿಗೆ ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ನೀಡಲಾಗುತ್ತದೆ. ಇದರ ಮೇಲುಸ್ತುವಾರಿಗೆ ಪ್ರತ್ಯೇಕ ಕೇಂದ್ರ ಸರಕಾರದ ನೋಡಲ್‌ ಅಧಿಕಾರಿ ನೇಮಿಸಲಾಗಿದೆ.ವಿತರಕರಿಂದ ಇದರ ದುರುಪಯೋಗವಾಗಿರುವ ಕುರಿತು ಕೂಲಂಕಷ ತನಿಖೆ ಮಾಡಲಾಗುತ್ತದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ, ಉಡುಪಿ

ನಮ್ಮ ಸಿಬಂದಿಯಿಂದ ಈ ರೀತಿಯ ಅಚಾತುರ್ಯ ನಡೆದಿರಬಹುದು. ಇದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಇಂತಹ ಗ್ರಾಹಕರಿಗೆ ಸ್ವಂತ ಖರ್ಚು ಭರಿಸಿ ಗ್ಯಾಸ್‌ ಸಂಪರ್ಕ ನೀಡಲು ಬದ್ಧನಾಗಿದ್ದೇನೆ.
– ರಾಜೇಶ್‌ ಶೇರಿಗಾರ್‌, ಮಲ್ಲಿಕಾರ್ಜುನ ಏಜೆನ್ಸಿ, ಗಂಗೊಳ್ಳಿ

ಒಮ್ಮೆ ಸಂಪರ್ಕ ಪಡೆದ ಗ್ರಾಹಕರಿಗೆ ನಾವು ಪುನಃ ಸಂಪರ್ಕ ನೀಡಲು ಸಾಧ್ಯವಿಲ್ಲ. ಈ ರೀತಿ ಸಂಪರ್ಕ ನೀಡುವುದು ಕಾನೂನು ಪ್ರಕಾರ ಅಪರಾಧ. ಹೀಗಾಗಿ ಗ್ರಾಹಕರಿಗೆ ವಾಸ್ತವ ವಿಚಾರವನ್ನು ತಿಳಿಸಿದ್ದೇವೆ.
– ವೆಂಕಟೇಶ ಕಿಣಿ, ಭಾರತ್‌ ಗ್ಯಾಸ್‌, ಬೈಂದೂರು

— ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.