ಇಂದಿನಿಂದ ಕಾಸರಗೋಡಿನಲ್ಲಿ ನಿಲುಗಡೆ


Team Udayavani, Jul 6, 2018, 6:00 AM IST

05ksde6.jpg

ಕಾಸರಗೋಡು: ವಿವಿಧ ರಾಜಕೀಯ ಪಕ್ಷಗಳ, ಸಂಘಸಂಸ್ಥೆಗಳ ಹೋರಾ ಟದ ಫಲವಾಗಿ ಲಭಿಸಿದ ಅನುಮತಿಯ ಹಿನ್ನೆಲೆಯಲ್ಲಿ ಜು. 6ರಿಂದ ಕಾಸರಗೋಡು ರೈಲು ನಿಲ್ದಾಣದಲ್ಲಿ ಅಂತ್ಯೋದಯ ಎಕ್ಸ್‌ ಪ್ರಸ್‌ ರೈಲು ನಿಲುಗಡೆಗೊಳ್ಳಲಿದೆ. 13 ಬಾರಿ ಕಾಸರಗೋಡು ನಿಲ್ದಾಣದಲ್ಲಿ ರೈಲು ನಿಲ್ಲಿಸದೆ ಹೋಗಿದ್ದ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲುಗಾಡಿಯನ್ನು 14ನೇ ಸಂಚಾರದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿಲ್ಲಿಸಲಾಗುತ್ತಿದೆ.

ಅಧಿಕೃತವಾಗಿ 13ನೇ ಸಂಚಾರದ ಬಳಿಕ ಕಾಸರಗೋಡಿನಲ್ಲಿ ನಿಲುಗಡೆಗೊಳಿಸ ಲಾಗುತ್ತಿದೆ. ಈ ಮಧ್ಯೆ ಎರಡು ಬಾರಿ ಸಿಗ್ನಲ್‌ ಲಭಿಸದೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಈ ರೈಲುಗಾಡಿಯನ್ನು ನಿಲ್ಲಿಸಲಾಗಿತ್ತು. ಅಂತ್ಯೋದಯ ಎಕ್ಸ್‌ ಪ್ರಸ್‌ ರೈಲು ಗಾಡಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಆಯೋಜಿಸಿದ ಚಳವಳಿಯ ಅಂಗವಾಗಿ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ರೈಲಿನ ಚೈನ್‌ ಎಳೆದಿದ್ದರು. ಈ ಕಾರಣದಿಂದ ಜೂನ್‌ 22 ರಂದು ರೈಲು ಗಾಡಿ ನಿಲುಗಡೆಗೊಂಡಿತ್ತು. ಅಂದು ಬೆಳಗ್ಗೆ 8 ಗಂಟೆಗೆ ರೈಲು ನಿಂತಿತ್ತು. ಅಂದು ಮುಸ್ಲಿಂ ಲೀಗ್‌ ಕಾರ್ಯಕರ್ತರು ರೈಲು ಹಳಿಯಲ್ಲಿ ಕುಳಿತು ರೈಲುಗಾಡಿಯನ್ನು ಸುಮಾರು 15 ನಿಮಿಷಗಳ ತನಕ ತಡೆದಿದ್ದರು.

ಜೂನ್‌ 9ರಂದು ರಾತ್ರಿ 9.39ಕ್ಕೆ ಅಂತ್ಯೋದಯ ರೈಲುಗಾಡಿ ಕಾಸರ ಗೋಡಿಗೆ ತಲುಪಿತ್ತು. ಈ ಗಾಡಿಯ ಮುಂಚಿತ ವಾಗಿ ಇನ್ನೊಂದು ರೈಲು ಗಾಡಿ ಹೋಗಿದ್ದರಿಂದ ಈ ಗಾಡಿಗೆ ಸಿಗ್ನಲ್‌ ಲಭಿಸಿರಲಿಲ್ಲ. ಈ ಕಾರಣದಿಂದ ಅಂದು ರೈಲುಗಾಡಿಯನ್ನು ಕಾಸರಗೋಡಿನಲ್ಲಿ ನಿಲುಗಡೆಗೊಳಿಸಲಾಗಿತ್ತು.

ಶುಕ್ರವಾರ ಬೆಳಗ್ಗೆ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿರುವ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲುಗಾಡಿಗೆ ಭವ್ಯ ಸ್ವಾಗತ ನೀಡಲು ಪ್ರಯಾಣಿಕರು ಸಿದ್ಧತೆ ನಡೆಸಿದ್ದಾರೆ.

ರೈಲು ಗಾಡಿ ಪ್ರವರ
– ರೈಲು ಗಾಡಿ ನಂಬ್ರಗಳು : 16355/16356
– ಒಟ್ಟು ದೂರ 614 ಕಿ.ಮೀ., 7 ನಿಲ್ದಾಣಗಳಲ್ಲಿ  ನಿಲುಗಡೆ
– ಮಂಗಳೂರಿಗೆ ಶುಕ್ರವಾರ ಮತ್ತು ರವಿವಾರ, 
ಸಮಯ ಬೆಳಗ್ಗೆ 7.48/7.50
– ಕೊಚ್ಚುವೇಳಿಗೆ ಶುಕ್ರವಾರ ಮತ್ತು ರವಿವಾರ, 
          ಸಮಯ ರಾತ್ರಿ 8.43/8.45
– ಕೊಚ್ಚುವೇಳಿಯಿಂದ ಮಂಗಳೂರಿಗೆ 
         11.50 ಗಂಟೆಯೊಳಗೆ ತಲುಪುವುದು
– ಬುಕ್‌ ಮಾಡದೇ ಸೀಟುಗಳಿದ್ದರೆ 
          ಟಿಕೆಟ್‌ ಪಡೆದು ಪ್ರಯಾಣಿಸಬಹುದು
– 16 ಕೋಚ್‌ಗಳಲ್ಲೂ ಸೀಟುಗಳಿವೆ
– ಎಕ್ಸ್‌ಪ್ರೆಸ್‌ ಕೋಚ್‌ಗಳಲ್ಲಿರುವ ಜನರಲ್‌ ಟಿಕೆಟ್‌ 
          ದರದ ಶೇ. 15ರಷ್ಟು ಮಾತ್ರವೇ ಹೆಚ್ಚಳ
– ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳನ್ನು 
         ಬಳಸಿಕೊಂಡು   ನಿರ್ಮಿಸಿದ ದೀನದಯಾಳ್‌ ಕೋಚ್‌ಗಳು
– ಶುದ್ಧೀಕರಿಸಿದ ಕುಡಿಯುವ ನೀರು, ಮೊಬೈಲ್‌ 
         ರಿಚಾರ್ಜಿಂಗ್‌, ಲಗೇಜ್‌ ರ್ಯಾಕ್‌, ಬಯೋ ಟಾಯ್ಲೆಟ್‌ 
         ಮೊದಲಾದ ಸೌಕರ್ಯಗಳಿವೆ.

ಕಾಸರಗೋಡಿನಿಂದ 
ಅಂತ್ಯೋದಯ ಎಕ್ಸ್‌ಪ್ರೆಸ್‌ನ 
ಪ್ರಯಾಣ ದರ
ಕೊಚ್ಚುವೇಳಿ – 210 ರೂ.
ಕೊಲ್ಲಂ – 190 ರೂ.
ಎರ್ನಾಕುಳಂ ಜಂಕ್ಷನ್‌ – 145 ರೂ.
ತೃಶ್ಶೂರು – 130 ರೂ.
ಶೋರ್ನೂರು – 125 ರೂ.
ಕಲ್ಲಿಕೋಟೆ – 95 ರೂ.
ಕಣ್ಣೂರು – 70 ರೂ.
ಮಂಗಳೂರು ಜಂಕ್ಷನ್‌ – 55 ರೂ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಮಂಜನಾಡಿ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು

Road Mishap ಮಂಜನಾಡಿ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

Kasaragod ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ

Kasaragod ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

Kasaragod: ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ 

Kasaragod: ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ 

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.