ರಾ.ಹೆ.ಗೆ ಕೇವಲ ಹೈಮಾಸ್ಟ್‌ ದೀಪವಿದೆ,ಬೀದಿ ದೀಪವಿಲ್ಲ


Team Udayavani, Jul 7, 2018, 6:00 AM IST

0607udht3.jpg

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾತ್ರಿ ವೇಳೆ ಸಂಚಾರವೆನ್ನುವುದು ಬಹಳ ದುಸ್ತರವಾಗಿದೆ. ಪ್ರಮುಖ ಬಸ್‌ ನಿಲ್ದಾಣ ಮತ್ತು ನಗರ ಪ್ರದೇಶಗಳಲ್ಲಿ  ಹೆದ್ದಾರಿ ನಿರ್ಮಾಣ ಸಂಸ್ಥೆ ಅಳವಡಿಸಿದ ಹೈಮಾಸ್ಟ್‌ ದೀಪಗಳನ್ನು ಹೊರತು ಪಡಿಸಿದರೆ ಎಲ್ಲಿಯೂ ಬೀದಿ ದೀಪದ ವ್ಯವಸ್ಥೆ ಇಲ್ಲ.

ಮಹಿಳೆಯರಿಗೆ ಅಪಾಯ
ಬೀದಿ ದೀಪ ಇಲ್ಲದೆ ಇರುವುದು ಮಹಿಳೆಯರ ಸುರಕ್ಷೆಗೆ ತೊಡಕಾಗಿದೆ. ಉಡುಪಿ, ಕುಂದಾಪುರ, ಮೊದಲಾದೆಡೆ ಕೆಲಸಕ್ಕೆ, ವಿದ್ಯಾಭ್ಯಾಸಕ್ಕೆಂದು ತೆರಳುವ ಹೆಣ್ಮಕ್ಕಳು ಕತ್ತಲಾಗುವ ಮುನ್ನ ಮನೆಗೆ ಬಂದು ಸೇರಬೇಕು. ಇಲ್ಲವಾದಲ್ಲಿ ಹೆತ್ತವರು ಸಂಜೆ ಕತ್ತಲಾದ ಮೇಲೆ ತಮ್ಮ ಹೆಣ್ಮಕ್ಕಳನ್ನು ಬಸ್‌ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಸ್ವಂತ ವಾಹನವಿದ್ದವರು ಬಸ್‌ ನಿಲ್ದಾಣದಿಂದ ವಾಹನಗಳ ಮೂಲಕ ಕರೆದುಕೊಂಡು ಬಂದರೆ; ಇನ್ನುಳಿದವರು ಕತ್ತಲಲ್ಲಿ ಬ್ಯಾಟರಿ ಹಿಡಿದುಕೊಂಡು ತೆರಳಬೇಕಾದ ಪರಿಸ್ಥಿತಿ ಇದೆ.

ಮಳೆಗಾಲದಲ್ಲಿ ಅಪಾಯ ಜಾಸ್ತಿ
ಮಳೆಗಾಲದಲ್ಲಿ  ಫ‌ುಟ್‌ಬಾತ್‌ನಲ್ಲಿ ನೀರು ತುಂಬಿಕೊಂಡು ನಡೆದಾಡಲು ಅಸಾಧ್ಯವಾದ ಸ್ಥಿತಿ ಇರುತ್ತದೆ. ಅದಕ್ಕಾಗಿ ಹೆಚ್ಚಿನ ಪಾದಚಾರಿಗಳು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುತ್ತಾರೆ. ಬೀದಿ ದೀಪಗಳಿದ್ದಲ್ಲಿ  ವಾಹನ ಸವಾರರಿಗೆ ದೂರದಿಂದಲೇ ವ್ಯಕ್ತಿಯ ಚಲನೆ ತಿಳಿಯುತ್ತದೆ.  ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಎಲ್ಲಿಯೂ ಬೀದಿ ಇಲ್ಲದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ.

ಎಲ್ಲೆಲ್ಲಿ  ಬೀದಿ ದೀಪ ಇದೆ
ಕುಂದಾಪುರದಿಂದ ಉಡುಪಿಯವರೆಗೆ ಕೋಟೇಶ್ವರ ಅಂಡರ್‌ ಪಾಸ್‌, ಬೀಜಾಡಿ ಕ್ರಾಸ್‌, ಕುಂಭಾಶಿ ಬಸ್‌ ನಿಲ್ದಾಣ, ಕೋಟ ಕ್ಯಾಟಲ್‌ ಪಾಸ್‌ ಮತ್ತು ಬಸ್‌ ನಿಲ್ದಾಣ, ಕೋಟ ಪೆಟ್ರೋಲ್‌ ಬಂಕ್‌, ಕೋಟ ಮೂರ್‌ಕೈ, ಸಾಲಿಗ್ರಾಮ ರಥಬೀದಿ ಮತ್ತು ಬಸ್‌ ನಿಲ್ದಾಣ, ಸಾಸ್ತಾನ ಟೋಲ್‌ ಗೇಟ್‌, ಸಾಸ್ತಾನ ಬಸ್‌ ನಿಲ್ದಾಣ, ಮಾಬುಕಳ ಸೇತುವೆ, ಬ್ರಹ್ಮಾವರ ಆಕಾಶವಾಣಿಯಿಂದ ಎಸ್‌ಎಮ್‌ಎಸ್‌ ಕಾಲೇಜು, ಹೇರೂರು, ಕಲ್ಯಾಣಪುರ ಸೇತುವೆ, ಸಂತೆಕಟ್ಟೆ, ಅಂಬಾಗಿಲು, ನಿಟ್ಟೂರು, ಉಡುಪಿಯ ಪ್ರಮುಖ ಭಾಗಗಳಲ್ಲಿ ಬೀದಿ ದೀಪದ ವ್ಯವಸ್ಥೆ ಇದೆ. 

ಹೊಣೆಗಾರರು ಯಾರು?
ಜಿ.ಪಂ. ಸಿಇಒ ಶಿವಾನಂದ ಕಾಪಶಿಯವರನ್ನು ಉದಯವಾಣಿ ಮಾತನಾಡಿಸಿದಾಗ, “ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆಯಾಗಿರುವ ನವಯುಗ ಮತ್ತು ಐಆರ್‌ಬಿ ಕಂಪೆನಿಗಳು ಬೀದಿ ದೀಪವನ್ನು ಅಳವಡಿಸಬೇಕು. ಈ ಹಿಂದೆ ಹೆದ್ದಾರಿ ನಿರ್ಮಾಣ ಸಂದರ್ಭ ಏನೆಲ್ಲ ವಸ್ತುಗಳನ್ನು ತೆರವುಗೊಳಿಸ ಲಾಗಿದೆಯೋ ಅವುಗಳನ್ನು ಸರಿಪಡಿಸಿಕೊಡ ಬೇಕಾಗಿರುವುದು ಗುತ್ತಿಗೆ ಪಡೆದ ಸಂಸ್ಥೆಯ ಕರ್ತವ್ಯ’ ಎಂದು ಹೇಳುತ್ತಾರೆ. ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆಯ ಟೋಲ್‌ ಮ್ಯಾನೇಜರ್‌ ರವಿಬಾಬು ಅವರನ್ನು ಈ ಕುರಿತು ಪ್ರಶ್ನಿಸಿದಾಗ “ನಮಗೆ ಎನ್‌ಎಚ್‌ಎಐ ಎಲ್ಲೆಲ್ಲಿ ಬೀದಿ ದೀಪ ಅಳವಡಿಸಲು ಸೂಚನೆ ನೀಡುತ್ತದೆಯೋ ಅಲ್ಲಿ  ಅಳವಡಿಸಿದ್ದೇವೆ. ಎನ್‌ಎಚ್‌ಎಐ ಆದೇಶವನ್ನು ಕಾರ್ಯರೂಪಕ್ಕೆ ತರುವುದು ಮಾತ್ರ ನಮ್ಮ ಕೆಲಸ’ ಎಂದರು. 

ಇದ್ದರೂ ಉರಿಯುತ್ತಿಲ್ಲ ಬೀದಿ ದೀಪ
ಉಪ್ಪೂರು ಬಸ್‌ ನಿಲ್ದಾಣದ ಬಳಿ ಮತ್ತು ಬ್ರಹ್ಮಾವರ ಆಕಾಶವಾಣಿಯಿಂದ ಧರ್ಮಾವರಂ ಆಡಿಟೋರಿಯಂವರೆಗೆ ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ. ಆದರೆ ಹಲವು ದಿನಗಳಿಂದ ಅದು ಉರಿಯುತ್ತಿಲ್ಲ.ಜಿಲ್ಲಾಡಳಿತ ಎಲ್ಲಿ ಬೀದಿ ದೀಪ ಬೇಕು ಎಂದು ಸೂಚನೆ ನೀಡಿದರೆ ಮಾತ್ರ ಅಲ್ಲಿ ಹಾಕಿಕೊಡುತ್ತೇವೆ.
– ವಿಜಯಕುಮಾರ್‌, 
ರಾ.ಹೆ. ಹಿರಿಯ ಅಧಿಕಾರಿ

ಬೀದಿ ದೀಪಗಳು ಎಲ್ಲೆಲ್ಲಿ ಬೇಕು ಎಂದು ಪಂಚಾಯತ್‌ಗಳು ಹೇಳಬೇಕು. ಬೀದಿ ದೀಪದ ಅವಶ್ಯಕತೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
– ಶೋಭಾ ಕರದ್ಲಾಂಜೆ,ಸಂಸದೆ

– ಹರೀಶ್‌ ಕಿರಣ್‌ ತುಂಗ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.