ಹುತಾತ್ಮ ಸೈನಿಕರ ಕುಟುಂಬಗಳಿಗೆ ನೆರವಾಗಲು ಯೋಧನಿಂದ ಸೈಕಲ್ ಪರ್ಯಟನೆ
Team Udayavani, Jul 9, 2018, 11:10 AM IST
ಮಹಾನಗರ: ಹುತಾತ್ಮ ಸೈನಿಕರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ನೌಕಾಪಡೆಯ ಯೋಧರೊಬ್ಬರು ಕಾಶ್ಮೀರ ದಿಂದ ಕನ್ಯಾಕುಮಾರಿವರೆಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕಲ್ನಲ್ಲಿ ಪರ್ಯಟನೆ ನಡೆಸುತ್ತಿದ್ದು, ಅವರು ರವಿವಾರ ಮಂಗಳೂರಿಗೆ ಆಗಮಿಸಿದರು.
ಕೇರಳ ಕಣ್ಣೂರಿನ ನೌಕಾ ನೆಲೆಯಲ್ಲಿ ಕರ್ನಲ್ ಕಮಾಂಡರ್ ಆಗಿರುವ ಮನೋಜ್ ಗುಪ್ತಾ ಅವರು ಜೂ. 6ರಂದು ಕಾಶ್ಮೀರದಿಂದ ಹೊರಟು ಜು. 16ರಂದು ಕನ್ಯಾಕುಮಾರಿ ತಲುಪಲಿದ್ದಾರೆ. ಸುಮಾರು 4 ಸಾವಿರ ಕಿ.ಮೀ. ಸೈಕಲ್ನಲ್ಲೇ ಕ್ರಮಿಸುತ್ತಿದ್ದು, ಗೋಕರ್ಣ ಮೂಲಕ ಮಂಗಳೂರಿಗೆ ತಲುಪಿದರು.
ಈ ಸಂದರ್ಭದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳ ಅವಧಿಯಲ್ಲಿ 11 ರಾಜ್ಯ ಹಾಗೂ 40 ಜಿಲ್ಲೆಗಳನ್ನು ಹಾದು ಹೋಗುತ್ತಿದ್ದೇನೆ. ಪ್ರತಿದಿನ ಕನಿಷ್ಠ 100 ಕಿ.ಮೀ. ಕ್ರಮಿಸುತ್ತೇನೆ. ಕೆಲವೊಮ್ಮೆ 200 ಕಿ.ಮೀ. ವರೆಗೆ ಸಾಗಿದ್ದೂ ಇದೆ. ವಿಜಯಪುರದಲ್ಲಿ ಸೈಕಲ್ ಕೈಕೊಟ್ಟದ್ದು ಬಿಟ್ಟರೆ ಬೇರೆಲ್ಲೂ ಈವರೆಗೆ ತೊಂದರೆಯಾಗಿಲ್ಲ. ಬಳಿಕ ಅಲ್ಲಿ ಸೈಕಲ್ನ್ನು ಸರಿಪಡಿಸಿ ಹೊರಡಬೇಕಾಯಿತು ಎಂದರು.
ಕರ್ನಲ್ ಮನೋಜ್ ಗುಪ್ತಾ ಅವರು ಸೈಕಲ್ ಪರ್ಯಟನೆ ವೇಳೆ ಮಾಲ್ಗಳು, ಬ್ಯಾಂಕ್ಗಳಿಗೆ ತೆರಳಿ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗುವ ಬಗ್ಗೆ ತಿಳಿಸುತ್ತಾರೆ. ಬಳಿಕ ಅವರಿಂದ ನೆರವಿನ ಭರವಸೆಯನ್ನು ಪಡೆಯುತ್ತಾರೆ. ನೌಕಾಪಡೆಯ ನಿರ್ದಿಷ್ಟ ಖಾತೆಗೆ ಜಮೆ ಮಾಡುವಂತೆ ತಿಳಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.