ನಿಡಿಗಲ್ ಸೇತುವೆ ಗುಣಮಟ್ಟ ಪರಿಶೀಲನೆಗೆ ಆಗ್ರಹ
Team Udayavani, Jul 10, 2018, 2:55 AM IST
ಬೆಳ್ತಂಗಡಿ: ಮೂಲರಪಟ್ಣ ಸೇತುವೆ ನೀರುಪಾಲಾದ ಬಳಿಕ ಎಚ್ಚೆತ್ತಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ತಂತ್ರಜ್ಞರನ್ನು ಕರೆಸಿ ಗುರುಪುರ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಿದೆ. ಆದರೆ ಇಷ್ಟೇ ಹಳೆಯದಾದ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸೇತುವೆಯನ್ನೂ ಪರೀಕ್ಷೆ ಮಾಡಲು ಹೆದ್ದಾರಿ ಇಲಾಖೆ ನೋ ಎನ್ನುತ್ತಿದೆ! ನಿಡಿಗಲ್ ನಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದರೂ ಒಂದು ಬದಿಯ ವಾಹನ ಸಂಚಾರಕ್ಕೆ ಹಳೆ ಸೇತುವೆಯನ್ನು ಉಳಿಸಿಕೊಳ್ಳಲಾಗುತ್ತದೆ. ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆ ಗುಣಮಟ್ಟ ಪರಿಶೀಲಿಸಿ, ದುರಸ್ತಿಗೊಳಿಸುವುದು ಅನಿವಾರ್ಯ.
ಬಿ.ಸಿ. ರೋಡ್ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಈ ಹೆದ್ದಾರಿಯ ಅತಿ ಉದ್ದದ ಸೇತುವೆ ಇದಾಗಿದೆ. 1938ರಲ್ಲಿ ಇದನ್ನು ನಿರ್ಮಿಸಲಾಗಿದ್ದು, ಪ್ರಸ್ತುತ 80ರ ಹರೆಯದಲ್ಲಿದೆ. ಗುರುಪುರ ಸೇತುವೆಯನ್ನು ಯಂತ್ರಗಳ ಮೂಲಕ ರಂಧ್ರ ಕೊರೆದು ಗುಣಮಟ್ಟ ಪರಿಶೀಲಿಸಿದ್ದರು. ನಿಡಿಗಲ್ ಸೇತುವೆಯನ್ನೂ ಪರಿಶೀಲನೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಹೆದ್ದಾರಿ ಅಧಿಕಾರಿಗಳ ಬಳಿ ವಿಚಾರಿಸಿದರೆ, ನಿಡಿಗಲ್ ಸೇತುವೆ ಸಮರ್ಪಕವಾಗಿದೆ. ಗುಣಮಟ್ಟ ಪರಿಶೀಲನೆ ಮಾಡಬೇಕಿಲ್ಲ ಎಂದಿದ್ದಾರೆ.
ಸೇತುವೆ ಶಿಥಿಲಾವಸ್ಥೆ
ನಿಡಿಗಲ್ ಸೇತುವೆ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದು, ಸೇತುವೆಯುದ್ದಕ್ಕೂ ಕಾಂಕ್ರೀಟ್ ಬಿರುಕು ಕಂಡುಬಂದಿದ್ದು, ಅಲ್ಲಲ್ಲಿ ಹೊಂಡಗಳೂ ಆಗಿವೆ. ಬಿರುಕು ಬಿಟ್ಟ ಸ್ಥಳಗಳಲ್ಲಿ ತುಕ್ಕು ಹಿಡಿದಿರುವ ಕಬ್ಬಿಣ ಕಾಣುತ್ತಿದ್ದು, ಸೇತುವೆಯ ದುರಸ್ತಿಗಾಗಿ ಬೇಡಿಕೆ ಕೇಳಿಬರುತ್ತಿದೆ. ಸೇತುವೆಯ ಎರಡೂ ಬದಿಯ ಆರಂಭದಲ್ಲೂ ತಡೆಗೋಡೆ ಕುಸಿದಿದೆ. ಶಿರಾಡಿ ಘಾಟಿ ರಸ್ತೆ ಬಂದಾಗಿದ್ದು, ನಿಡಿಗಲ್ ಸೇತುವೆಯಲ್ಲಿ ವಾಹನದ ಒತ್ತಡ ಹೆಚ್ಚಿದೆ. ಜತೆಗೆ ಇಲ್ಲಿ ಏಕಮುಖ ಸಂಚಾರ ಇರುವುದರಿಂದ ಟ್ರಾಫಿಕ್ ಜಾಮ್ ಕೂಡ ಸಂಭವಿಸುತ್ತದೆ. ಮೂಲರಪಟ್ಣ ಸೇತುವೆ ದುರ್ಘಟನೆ ಸಂಭವಿಸಿದ ಬಳಿಕ ಈ ಭಾಗದ ಜನರ ಆತಂಕ ಹೆಚ್ಚಾಗಿದೆ.
ಹೊಸ ಸೇತುವೆ ಕಾಮಗಾರಿ
ಬಿ.ಸಿ. ರೋಡ್ – ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕ ಹೆದ್ದಾರಿಯ ಅಭಿವೃದ್ಧಿ ಪೂರ್ವಭಾವಿಯಾಗಿ ಪ್ರಸ್ತುತ 28 ಕೋ.ರೂ.ಗಳಲ್ಲಿ ಬೆಳ್ತಂಗಡಿ ತಾಲೂಕಿನ ನಿಡಿಗಲ್, ಚಾರ್ಮಾಡಿ ಹಳ್ಳ ಹಾಗೂ ಬಂಟ್ವಾಳ ತಾಲೂಕಿನ ಮಣಿಹಳ್ಳ ಹೀಗೆ ಮೂರು ಕಡೆ ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ.
ಪರಿಶೀಲನೆ ಇಲ್ಲ
ಬಿ.ಸಿ. ರೋಡ್ – ಚಾರ್ಮಾಡಿ ಹೆದ್ದಾರಿ ಮಧ್ಯೆ ಮೂರು ಕಡೆಗಳಲ್ಲಿ 28 ಕೋ.ರೂ.ಗಳಲ್ಲಿ ಮೂರು ಸೇತುವೆ ನಿರ್ಮಾಣವಾಗುತ್ತಿದ್ದು, ಹಳೆ ಸೇತುವೆಯನ್ನು ಹಾಗೇ ಉಳಿಸಲಾಗುತ್ತದೆ. ಗುರುಪುರ ಸೇತುವೆಯಂತೆ ಇದರ ಗುಣಮಟ್ಟ ಪರಿಶೀಲನೆ ಮಾಡಬೇಕಿಂದಿಲ್ಲ. ಈ ಸೇತುವೆ ಸಮರ್ಪಕವಾಗಿದೆ ಎಂದು ರಾ.ಹೆ. ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
— ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಎಪಿಎಂಸಿ ವಸತಿಗೃಹದಲ್ಲಿ ಅನಧಿಕೃತ ವಾಸ; ಮಹಿಳೆ ಹೊರಕ್ಕೆ
Belthangady: ರಸ್ತೆ ಶೋಚನೀಯ; ನಿರ್ವಹಣೆಯ ಕೊರತೆ; ರಸ್ತೆಯಲ್ಲಿ ಇಂಗು ಗುಂಡಿ ತರಹದ ಹೊಂಡ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ
MUST WATCH
ಹೊಸ ಸೇರ್ಪಡೆ
ಟಿಕೆಟ್ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್
MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್
INDvsNZ: ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಪೂರೈಸಿದ ವಿರಾಟ್ ಕೊಹ್ಲಿ
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.