ಪಾಯಸ, ಪೀನಟ್ ಅಲ್ಲ, ಅದು ಆ್ಯಂಡ್ರಾಯ್ಡ “ಪಿಸ್ತಾಶಿಯೋ’!
Team Udayavani, Jul 13, 2018, 6:00 AM IST
ಹೊಸದಿಲ್ಲಿ: ಆ್ಯಂಡ್ರಾಯ್ಡ “ಪಿ’ ಅಂದ್ರೆ “ಪಿಸ್ತಾಶಿಯೋ’! ಆ್ಯಂಡ್ರಾಯ್ಡ ಒರಿಯೋ ನಂತರದ ವರ್ಷನ್ ಆಗಿರುವ ಆ್ಯಂಡ್ರಾಯ್ಡ ಒಎಸ್ “ಪಿ’ಗೆ ಭಾರತೀಯ ಮೂಲದ ತಿನಿಸುಗಳ ಹೆಸರಿಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸದ್ಯ “ಪಿಸ್ತಾಶಿಯೋ’ ಎಂಬ ಹೆಸರಿನ ಬಗ್ಗೆ ಸೋರಿಕೆಯಾಗಿದ್ದು, ಮುಂದಿನ ತಿಂಗಳು ಗೂಗಲ್ ಅಧಿಕೃತವಾಗಿ ಘೋಷಣೆ ಮಾಡಲಿದೆ.
ಸದ್ಯ ಆ್ಯಂಡ್ರಾಯ್ಡನ ಮಾತೃಸಂಸ್ಥೆ ಗೂಗಲ್ಗೆ ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ ನೇತೃತ್ವ ವಹಿಸಿದ್ದಾರೆ. ಚೆನ್ನೈ ಮೂಲದ ಪಿಚೈ ಭಾರತದ ಭಾವನೆಗಳಿಗೆ ಪೂರಕವಾಗಿ ಆ್ಯಂಡ್ರಾಯ್ಡ “ಪಿ’ಗೆ ಭಾರತೀಯ ಮೂಲದ ಸಿಹಿ ತಿನಿಸಿನ ಹೆಸರಿ ಡಲಿ ದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಹುವಾಯಿ ಕಂಪನಿಯೊಂದರ ಕಸ್ಟಮರ್ ಕೇರ್ ಸಿಬ್ಬಂದಿಯೊಬ್ಬರು, ಗ್ರಾಹಕರೊಬ್ಬರಿಗೆ ಉತ್ತರ ನೀಡುವಾಗ ಆ್ಯಂಡ್ರಾಯ್ಡ ಪಿಸ್ತಾ ಶಿಯೋ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹುವಾಯಿ ಪಿ9 ಮೊಬೈಲ್ಗೆ ಆ್ಯಂಡ್ರಾಯ್ಡ ಒರಿಯೋ ಅಪ್ಡೇಟ್ ಆಗುತ್ತಾ ಎಂಬ ಪೊಲೆಂಡ್ನ ಗ್ರಾಹಕರ ಪ್ರಶ್ನೆಗೆ ಉತ್ತರಿಸಲು ಹೋಗಿ ಈ ಎಡವಟ್ಟು ಮಾಡಿದ್ದಾರೆ.
ಸಾಮಾನ್ಯವಾಗಿ ಗೂಗಲ್ ಆ್ಯಂಡ್ರಾಯ್ಡ ತನ್ನ ಮೊದಲ ವರ್ಷನ್ನಿಂದ ಇಲ್ಲಿವರೆಗೆ ಎಲ್ಲದಕ್ಕೂ ಜನಪ್ರಿಯ ಸಿಹಿ ತಿಂಡಿಯ ಹೆಸರಿಡುವುದನ್ನು ರೂಢಿ ಮಾಡಿಕೊಂಡಿದೆ. ಅದರಂತೆಯೇ ಲಾಲಿಪಪ್, ಮಾರ್ಷ್ ಮೆಲ್ಲೋ, ನೌಗಟ್, ಒರಿಯೋ ಹೆಸರುಗಳನ್ನು ಇರಿಸಿಕೊಂಡು ಬಂದಿದೆ.
ಹೆಸರು ಬದಲಾಗಬಹುದು: ಸದ್ಯಕ್ಕೆ ಪಿಸ್ತಾಶಿಯೋ ಹೆಸರು ಸೋರಿಕೆಯಾಗಿದ್ದರೂ, ಇದೇ ಅಂತಿಮವಾಗಬೇಕಾಗಿಲ್ಲ. ಮುಂದಿನ ತಿಂಗಳು ಅಧಿಕೃತವಾಗಿ ಘೋಷಣೆಯಾಗು ವಾಗ ಬದಲಾಗಬಹುದು. ಸದ್ಯಕ್ಕೆ ಇದನ್ನು ಡೆವಲಪ್ ಮಾಡುವಾಗ ಸಿಬ್ಬಂದಿ ನಡುವಿನ ಸಂವಹನಕ್ಕೆ ಬಳಕೆ ಮಾಡುತ್ತಿರಬಹುದು ಎಂಬ ಮಾತುಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.