ತನ್ನ ಫ್ಲಾಟ್‌ನಲ್ಲೇ ಭೋಪಾಲ್‌ ಮಾಡೆಲ್‌ ಲವರ್‌ ಕೈಯಲ್ಲಿ ಒತ್ತೆಸೆರೆ


Team Udayavani, Jul 13, 2018, 4:23 PM IST

rape-woman-graphic-700.jpg

ಭೋಪಾಲ್‌ : ತಾನು ಪ್ರೇಮಿಸಿ ಮದುವೆಯಾಗ ಬಯಸಿರುವ ಮಾಡೆಲ್‌ ಒಬ್ಟಾಕೆಯನ್ನು ವ್ಯಕ್ತಿಯೋರ್ವ ಇಲ್ಲಿನ ಆಕೆಯ ಫ್ಲಾಟ್‌ನಲ್ಲಿ ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದಾನೆ;  ಆಕೆಯ ವಿಮೋಚನೆ ಕಾರ್ಯಾಚರಣೆಗಾಗಿ ಬಂದಿರುವ ಪೊಲೀಸ್‌ ಅಧಿಕಾರಿಗಳಲ್ಲಿ ಆತ ಸ್ಟಾಂಪ್‌ ಪೇಪರ್‌ ಮತ್ತು ಮೊಬೈಲ್‌ ಚಾರ್ಜರ್‌ ಕೇಳಿದ್ದಾನೆ. 

ಮಾಡೆಲ್‌ ಒತ್ತೆಸೆರೆಯಾಗಿರುವ ಆಕೆಯ ಫ್ಲಾಟಿನ ಒಂದು ಕೋಣೆಯಲ್ಲಿ ಆಕೆಯ ತಂದೆ-ತಾಯಿ ಕೂಡ ಇದ್ದು ಅವರ ಕೋಣೆಯನ್ನು ಆರೋಪಿ ರೋಹಿತ್‌ ಲಾಕ್‌ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

“ನಾನು ಆಕೆಯನ್ನು ಪ್ರೀತಿಸುತ್ತೇನೆ. ಆಕೆಯೂ ನನ್ನನ್ನು ಪ್ರೀತಿಸುತ್ತಿರುವುದಾಗಿ ನನ್ನಲ್ಲಿ ಒಪ್ಪಿಕೊಳ್ಳಬೇಕಿದೆ. ಅಲ್ಲಿಯ ವರೆಗೆ ನಾನು ಆಕೆಯನ್ನು ಬಿಡುವುದಿಲ್ಲ’ ಎಂದು ರೋಹಿತ್‌ ಪೊಲೀಸರಲ್ಲಿ ಹೇಳಿದ್ದಾನೆ. ಆತನ ಒತ್ತೆಸೆರೆಯಲ್ಲಿರುವ ರೂಪದರ್ಶಿಯನ್ನು ಸುರಕ್ಷಿತವಾಗಿ ಹೊರತರುವ ಪೊಲೀಸರ ಪ್ರಯತ್ನ ಈಗಲೂ ಸಾಗಿದೆ. 

ಮೂಲಗಳ ಪ್ರಕಾರ ರೂಪದರ್ಶಿಯು ಎರಡು ತಿಂಗಳ ಹಿಂದಷ್ಟೇ ಮುಂಬಯಿಯಿಂದ ಭೋಪಾಲಕ್ಕೆ ಬಂದಿದ್ದಳು. ಮುಂಬಯಿಯಲ್ಲಿ ಆಕೆಗೆ ಪರಿಚಿತನಾಗಿದ್ದ ರೋಹಿತ್‌ ಆಕೆಗೆ ಪದೇ ಪದೇ ಫೋನ್‌ ಮಾಡಿ ಕಿರುಕುಳ ಕೊಡುತ್ತಿದ್ದ; ಆತನ ಕರೆಗಳಿಗೆ ಆಕೆಯ ಉತ್ತರಿಸುವುದನ್ನೇ ನಿಲ್ಲಿಸಿದ್ದಳು; ಆದರೆ ಮೊನ್ನೆ ಸೋಮವಾರ ರೋಹಿತ್‌ ಭೋಪಾಲಕ್ಕೆ ಬಂದು ಆಕೆಯ ಫ್ಲ್ಯಾಟ್‌ ಪ್ರವೇಶಿಸಿ ಒಳಗಿನಿಂದ ಲಾಕ್‌ ಮಾಡಿದ್ದ. 

ಮಹಿಳೆ ತನ್ನನ್ನು ಪ್ರೀತಿಸುವುದಾಗಿ ಒಪ್ಪಿಕೊಳ್ಳದಿದ್ದರೆ ತಾನು ಆಕೆಯನ್ನು  ಮತ್ತು ಆಕೆಯ ಮನೆಯವರನ್ನು ಕೊಲ್ಲುವುದಾಗಿ ರೋಹಿತ್‌ ಬೆದರಿಕೆ ಹಾಕಿದ್ದಾನೆ. 

ರೋಹಿತ್‌ ಹೇಳಿರುವ ಪ್ರಕಾರ ಪೊಲೀಸರು ಆತನನಿಗೆ ಹಿಂಸೆ, ಕಿರುಕುಳ ಕೊಟ್ಟಿದ್ದಾರೆ. “ನಾನು ಭೋಪಾಲ ತಲುಪಿದಾಗ ನನ್ನ ವಿರುದ್ಧ ಪೊಲೀಸ್‌ ಕಂಪ್ಲೇಂಟ್‌ ದಾಖಲಾಯಿತು. ಪೊಲೀಸರು ನನಗೆ ಹಿಂಸೆ, ಕಿರುಕುಳ ಕೊಟ್ಟರು; ಆದುದರಿಂದಲೇ ನಾನು ಒತ್ತೆಸೆರೆ ಕ್ರಮಕ್ಕೆ ಮುಂದಾದೆ. ಇಲ್ಲಿ ಫ್ಲಾಟ್‌ ಎದುರುಗಡೆ ಜನ ಜಮಾಯಿಸದಿರುತ್ತಿದ್ದಲ್ಲಿ ನಾನು ಎಂದೋ ಹೊರಗೆ ಬರುತ್ತಿದ್ದೆ’ ಎಂದು ರೋಹಿತ್‌ ಹೇಳಿದ್ದಾನೆ. 

ರೋಹಿತ್‌ ಈಗಾಗಲೇ ತನ್ನ ದೇಹಕ್ಕೆ ಅನೇಕ ಕಡೆಗಳಲ್ಲಿ ಗಾಯಮಾಡಿಕೊಂಡಿದ್ದಾನೆ. ಹಾಗೆಯೇ ಆತ ಪ್ರೀತಿಸುವ ಮಹಿಳೆಗೂ ಗಾಯಮಾಡಿದ್ದಾನೆ. ಆಕೆ ದೇಹದಲ್ಲಿ ರಕ್ತ ಒಸರುವುದನ್ನು ನಾವು ಕಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಒತ್ತೆಸೆರೆ ಪ್ರಹಸನ ಈಗಲೂ ಮುಂದುವರಿದಿದ್ದು ಪೊಲೀಸರು ರೋಹಿತ್‌ನಿಂದ ಮಹಿಳೆಗೆ ಇರುವ ಜೀವ ಬೆದರಿಕೆಯ ಕಾರಣ ಎಚ್ಚರಿಕೆಯಿಂದ ಪ್ರಕರಣ ನಿಭಾಯಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.