ಅವಧಿ ಮುಗಿಯುತ್ತಾ ಬಂದರೂ ನಡೆಯದ ನಾಡದೋಣಿ ಮೀನುಗಾರಿಕೆ


Team Udayavani, Jul 15, 2018, 6:00 AM IST

1407mle3.gif

ಮಲ್ಪೆ: ಕಡಲಲ್ಲಿ ಎದ್ದ ತೂಫಾನ್‌ ಇನ್ನೂ ತಗ್ಗಿಲ್ಲ. ಬಿರುಸಾದ ಸಮುದ್ರ ಸಹಜಸ್ಥಿತಿಗೆ ಬರದೇ ಇದ್ದರಿಂದ ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಕಾಲ ಕೂಡಿ ಬರಲೇ ಇಲ್ಲ. 

ಹಿಂದೆಲ್ಲ ಇದೇ ಅವಧಿಯಲ್ಲಿ ಮೀನುಗಾರರು ಬಲೆ ತುಂಬ ಮೀನು ಹಿಡಿದು ತರುತ್ತಿದ್ದರು. ಈ ಬಾರಿ ದೋಣಿ ಇಳಿಸಲೇ ಆಗಿಲ್ಲ.  ಇದೀಗ ಮಳೆಗಾಲದ ನಾಡದೋಣಿ ಮೀನುಗಾರಿಕೆ ಅವಧಿಯೂ ಮುಗಿಯುತ್ತಾ ಬಂದಿದ್ದು, ಸಾಲದ ಹೊರೆಯಲ್ಲಿರುವ ನಾವು ದಿಕ್ಕೇ ತೋಚದಂತಾಗಿದ್ದೇವೆ ಎನ್ನುತ್ತಾರೆ ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿ ಮೀನುಗಾರ ಪುರಂದರ ಕೋಟ್ಯಾನ್‌.

ಮುಗಿಯದ ಮಳೆಯಬ್ಬರ
ಈ ಬಾರಿ ಕರಾವಳಿ ತೀರದುದ್ದಕ್ಕೂ ನಿರಂತರವಾಗಿ ಸುರಿಯುತ್ತಿರುವ ಮಳೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರನ್ನು ಕಂಗಾಲಾಗಿಸಿವೆ.  ನಾಡದೋಣಿ ಮೀನುಗಾರರಿಗೆ ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ. ಜೂನ್‌ 1ರಿಂದ ಜು.31ರವರೆಗೆ 60 ದಿನಗಳು ನಾಡದೋಣಿ ಮೀನುಗಾರಿಕೆಗೆ ಅವಕಾಶವಿದ್ದರೂ ಈಗಾಗಲೇ 45ದಿನಗಳು ಕೈತಪ್ಪಿ ಹೋಗಿವೆ. ಆ. 1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುತ್ತಿರುವುದರಿಂದ ಇನ್ನು ಕೇವಲ ಬೆರಳೆಣಿಕೆ ದಿನಗಳು ಮಾತ್ರ ಉಳಿದಿದೆ. 

ಸಾಮಾನ್ಯವಾಗಿ ಪುನರ್ವಸು, ಪುಷ್ಯ ಮಳೆ ಆರಂಭಗೊಂಡಾಗ ನಾಡದೋಣಿ ಗಳಿಗೆ ಉತ್ತಮ ಮೀನುಗಾರಿಕೆ ಆಗುತ್ತಿತ್ತು. ಕಳೆದ ವರ್ಷದಲ್ಲಿ ಜುಲೈ ತಿಂಗಳ ಪ್ರಥಮ ವಾರದಲ್ಲೇ ಹೇರಳ ಪ್ರಮಾಣದಲ್ಲಿ ಸಿಗಡಿ ಮೀನುಗಳು ನಾಡದೋಣಿ ಬಲೆ ಬಿದ್ದಿದ್ದವು. ಈಗ ಕಡಲಿಗಿಳಿದರೆ  ಮೀನು ಸಿಗುವ ಲಕ್ಷಣ ಇದೆ. ಆದರೆ ಮಳೆಗಾಳಿಯಿಂದಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ಸಂಕ್ರಮಣದ ಬಳಿಕ ಮೀನುಗಾರಿಕೆಗೆ ಪೂರಕವಾಗಬಹುದು ಎನ್ನುತ್ತಾರೆ ಮೀನುಗಾರರಾದ ಕೃಷ್ಣ ಸುವರ್ಣ. 

ಹೆಚ್ಚಿನ ಕಾಲಾವಕಶಕ್ಕೆ ಆಗ್ರಹ 
ಮಲ್ಪೆ ಬಂದರು ವ್ಯಾಪ್ತಿಯಲ್ಲಿ 650ಕ್ಕೂ ಹೆಚ್ಚು ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿಗಳು ಮಳೆಗಾಲದ ಮೀನುಗಾರಿಕೆ ನಡೆಸುತ್ತಿವೆ.  ಬಹುತೇಕ ದೋಣಿಗಳು ಸಾಲ ಮಾಡಿ ಮೀನುಗಾರಿಕೆಗೆ ತೊಡಗಿದ್ದು ಸಾಲ ಮರುಪಾವತಿ ಹೇಗೆ ಎಂಬ ಚಿಂತೆಯಲ್ಲಿದೆ.  ಈ ಹಿನ್ನೆಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ 15 ದಿನ ಹೆಚ್ಚುವರಿಯಾಗಿ ಮೀನುಗಾರಿಕೆಗೆ ಅವಕಾಶ ನೀಡಬೇಕು. ಅಲ್ಲಿವರೆಗೆ ಯಾಂತ್ರೀಕೃತ ಮೀನುಗಾರಿಕೆ ಬೇಡ ಎನ್ನುವುದು ಮೀನುಗಾರರ ಸಂಘದ ಆಗ್ರಹವಾಗಿದೆ.  

ಸ್ಥಿತಿ ದುಸ್ತರ 
ಮೊದಲೇ ಮೀನಿಗೆ ಕೆಮಿಕಲ್‌ ಬಳಸಿದ್ದಾರೆ ಎಂಬ ಭಯದಿಂದ ಗ್ರಾಹಕರು ದೂರ ಸರಿದಿದ್ದಾರೆ. ಅದಕ್ಕೆ ಸರಿಯಾಗಿ ಮೀನುಗಾರಿಕೆಗೆ ಹೋಗಲು ಸಮುದ್ರ ಬಿಡುತ್ತಿಲ್ಲ. ಒಟ್ಟಿನಲ್ಲಿ ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ನಮ್ಮ ಸ್ಥಿತಿ ದುಸ್ತರವಾಗಿದೆ.
– ಆನಂದ ಸಾಲ್ಯಾನ್‌,ಮಲ್ಪೆ

ಮಲ್ಪೆಯಲ್ಲಿ ಮತ್ಸ್ಯಮೇಳ
ಒಂದೆಡೆ ನಾಡದೋಣಿ ಕಡಲಿಗೆ ಇಳಿಯದೆ ಮೀನಿಗೆ ಬರ. ಇನ್ನೊಂದೆಡೆ ಮೀನು ಕೊಳ್ಳುವ ಗ್ರಾಹಕರು ಕೆಮಿಕಲ್‌ ಭಯದಿಂದ ಹಿಂದೇಟು ಹಾಕುತ್ತಿರುವುದು ಮೀನು ಮಾರಾಟಗಾರರನ್ನು ಆತಂಕಕ್ಕೀಡು ಮಾಡಿವೆ. ಭಯ ಹೋಗಲಾಡಿಸಲು ಮುಂದಿನ ದಿನದಲ್ಲಿ ಮಲ್ಪೆಯಲ್ಲಿ ಮತ್ಸéಮೇಳ ಆಯೋಜಿಸಲಾಗುವುದು. 
– ಯಶಪಾಲ್‌ ಸುವರ್ಣ
ಅಧ್ಯಕ್ಷ , ಮೀನುಮಾರಾಟ ಫೆಡರೇಶನ್‌ 

ಟಾಪ್ ನ್ಯೂಸ್

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

Zeeka-Virus

Zika Virus: ಗರ್ಭಿಣಿಯರೇ ಝೀಕಾ ಬಗ್ಗೆ ಎಚ್ಚರ: ಸರಕಾರ ಸೂಚನೆ

MBPatil

Airport: ರಾಜಧಾನಿ ಸಮೀಪ ವಿಮಾನ ನಿಲ್ದಾಣಕ್ಕೆ ಜಾಗದ ಹುಡುಕಾಟ: ಎಂ.ಬಿ. ಪಾಟೀಲ್‌

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

1-a-da

Rain; ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತಾ ಟಿ20 ರದ್ದು

Heavy Rain ದ.ಕ.ದಲ್ಲಿ ಬಿರುಸಿನ ಗಾಳಿ-ಮಳೆ; ಕೆಲವೆಡೆ ಹಾನಿ

Heavy Rain ದ.ಕ.ದಲ್ಲಿ ಬಿರುಸಿನ ಗಾಳಿ-ಮಳೆ; ಕೆಲವೆಡೆ ಹಾನಿ

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ

Udupi ಜ್ಞಾನ, ಭಕ್ತಿಯ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ

Uchila ದಸರಾ ಉತ್ಸವಕ್ಕೆ ಇನ್ನಷ್ಟು ಮೆರುಗು

Uchila ದಸರಾ ಉತ್ಸವಕ್ಕೆ ಇನ್ನಷ್ಟು ಮೆರುಗು

Udupi ಅಪರಿಚಿತನಿಂದ ಮಹಿಳೆಗೆ ವಂಚನೆ

Udupi ಅಪರಿಚಿತನಿಂದ ಮಹಿಳೆಗೆ ವಂಚನೆ

Odish-Neji

Udupi: ಕರಾವಳಿಯ ನೇಜಿಗೆ ಒಡಿಶಾ ಕಾರ್ಮಿಕರ ಬಲ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

1-eweweqw

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

Zeeka-Virus

Zika Virus: ಗರ್ಭಿಣಿಯರೇ ಝೀಕಾ ಬಗ್ಗೆ ಎಚ್ಚರ: ಸರಕಾರ ಸೂಚನೆ

1-a-chinna

Asian ಪೆಸಿಫಿಕ್‌ ಬೆಂಚ್‌ ಪ್ರಸ್‌ ಚಾಂಪಿಯನ್‌ಶಿಪ್‌: ವಿಜಯ ಕಾಂಚನ್‌ಗೆ 2 ಚಿನ್ನ

1-a-abhay-aaa-euro

Copa America Football: ಬಲಿಷ್ಠ ಬ್ರಝಿಲ್‌ಗೆ ಉರುಳಾದ ಉರುಗ್ವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.