ಹೊಂಡಗುಂಡಿಗಳಿಂದ ತುಂಬಿದ ಬೈಲೂರು-ಪಳ್ಳಿ ರಸ್ತೆ


Team Udayavani, Jul 15, 2018, 6:15 AM IST

1207kar1.gif

ಕಾರ್ಕಳ: ತಾಲೂಕಿನ ಪಳ್ಳಿ- ಬೈಲೂರು ಸಂಪರ್ಕ ರಸ್ತೆಯಲ್ಲಿ ಹೊಂಡ ಗುಂಡಿಗಳೇ ತುಂಬಿ ವಾಹನ ಸಂಚಾರ ದುಸ್ತರವಾಗಿದೆ. ಪಳ್ಳಿ- ರಂಗನಪಲ್ಕೆ- ಬೈಲೂರು ಸಂಪರ್ಕಕಕ್ಕೆ ಇದೇ ಪ್ರಮುಖ ರಸ್ತೆ. 10 ಕಿ.ಮೀ. ಉದ್ದದ ಈ ರಸ್ತೆಗೆ ಮಧ್ಯದ ಮಾರುತಿ ನಗರ, ರಂಗನಪಲ್ಕೆಯಲ್ಲಿ ಕಾಂಕ್ರೀಟ್‌ ಹಾಕಲಾಗಿದೆ.  

ಆದರೆ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ಫಿನಿಷಿಂಗ್‌ ಕಾರ್ಯ ಆಗಿಲ್ಲ.ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು, ಸಾವಿರಾರು ಮಂದಿ ಓಡಾ ಡುತ್ತಾರೆ. ಆಳ್ವಾಸ್‌, ನಿಟ್ಟೆ, ಶಿರ್ವ ಸೇರಿದಂತೆ ಪ್ರತಿಷ್ಠಿತ ಕಾಲೇಜುಗಳ ಶಾಲಾ ವಾಹನಗಳು ಸೇರಿದಂತೆ  ಬೈಲೂರು, ಕಣಜಾರು, ಪಳ್ಳಿ ಭಾಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆ ಅವಲಂಬಿಸಿದ್ದಾರೆ.

ಅಲ್ಲಲ್ಲಿ ಕೆಸರುಮಯ
ಇತ್ತೀಚೆಗೆ ಸಾರ್ವಜನಿಕರು ರಸ್ತೆಯ ಗುಂಡಿಗಳನ್ನು ಮಣ್ಣುಹಾಕಿ ಮುಚ್ಚುವ ಕಾರ್ಯ ನಡೆಸಿದ್ದರು. ಆದರೆ ಎಡಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆ ಪೂರ್ತಿ ಈಗ ಕೆಸರುಮಯವಾಗಿದೆ.

ಮಳೆನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.ಇದರಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ಸಂಚಾರ ಕಷಾÌಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಂಚಾಯತ್‌ಗೆ ಮನವಿ
ಕಳೆದ ಐದಾರು ವರ್ಷಗಳಿಂದ ರಸ್ತೆ ದುರಸ್ತಿಕಾರ್ಯವಾಗಿಲ್ಲ. ರಸ್ತೆ ಸರಿಪಡಿ ಸುವಂತೆ  ಪಂಚಾಯತ್‌ಗೆ ಮನವಿ ಮಾಡಲಾಗಿದೆ. ಆದರೆ ಅದು ಜಿಲ್ಲಾ ಪಂಚಾಯತ್‌ ರಸ್ತೆಯಾಗಿರುವುದರಿಂದ ಗ್ರಾಮ ಪಂಚಾಯತ್‌ ಕೂಡ ಸುಮ್ಮನಿದೆ  ಎನ್ನುತ್ತಾರೆ ಸ್ಥಳೀಯರು.

ಶೀಘ್ರ ಕೆಲಸ ಪ್ರಾರಂಭ
ಜನರಿಗೆ ಸಮಸ್ಯೆ ಯಾಗುತ್ತಿರುವುದು ಗಮನಕ್ಕೆ ಬಂದಿದೆ.. ಕೂಡಲೇ ಸ್ಪಂದಿಸುವ ನಿಟ್ಟಿನಲ್ಲಿ  11 ಕೋ.ರೂ. ಅನುದಾನ ಇಡಲಾಗಿದೆ. 5 ಕೋ.ರೂ. ಕಾಮಗಾರಿಗೆ ಟೆಂಡರ್‌ ಆಗಿದೆ. ಕೆಲಸವೂ ಪ್ರಾರಂಭವಾಗಿತ್ತು, ಆದರೆ ಮಳೆ ಜೋರಾಗಿರುವ ಕಾರಣ ಕೆಲಸ ಮಾಡಲು ಸಾಧ್ಯವಾಗಿಲ್ಲ. ಶೀಘ್ರವೇ ಕೆಲಸ ಮತ್ತೆ ಪ್ರಾರಂಭಗೊಳಿಸಲಾಗುವುದು.
 - ಸುಮಿತ್‌ ಶೆಟ್ಟಿ  ಕೌಡೂರು, ಜಿ.ಪಂ. ಸದಸ್ಯರು

ಸಂಚಾರ ಕಷ್ಟ
ರಸ್ತೆಯ ಸ್ಥಿತಿ ದುಸ್ತರವಾಗಿದ್ದು ಓಡಾಟ ಕಷ್ಟವಾಗಿದೆ. ಸಾರ್ವಜನಿಕರೇ ಅನೇಕ ಬಾರಿ ಶ್ರಮದಾನ ಮಾಡಿ ಅಲ್ಲಲ್ಲಿ  ಗುಂಡಿಮುಚ್ಚುವ ಕಾರ್ಯ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ  ರಸ್ತೆ ದುರಸ್ತಿಕಾರ್ಯ ಶೀಘ್ರ ನಡೆಯಬೇಕು.
– ಪ್ರಸಿಲ್ಲಾ ಮೇಬಲ್‌ ನಜ್ರತ್‌, ರಂಗನಪಲ್ಕೆ

ಟಾಪ್ ನ್ಯೂಸ್

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

Somnath

ISRO ಕ್ಷುದ್ರಗ್ರಹದಿಂದ ಭೂಮಿ ರಕ್ಷಿಸಲು ನಾವು ಉತ್ಸುಕ: ಎಸ್‌.ಸೋಮನಾಥ್‌

1-dsdsadasdas

Lok Sabha; ಪ್ರಧಾನಿ ಮೋದಿ ಸುಳ್ಳು ಮಾಹಿತಿ: ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

Dengue

Dengue ಹಾವಳಿ: ಚಿಕಿತ್ಸೆ ಜತೆಗೆ ಮುನ್ನೆಚ್ಚರಿಕೆ ಅಗತ್ಯ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

BJP Vs ಸಿಎಂ ಸಿದ್ದರಾಮಯ್ಯ ಮುಡಾ ಕಾಳಗ

Somnath

ISRO ಕ್ಷುದ್ರಗ್ರಹದಿಂದ ಭೂಮಿ ರಕ್ಷಿಸಲು ನಾವು ಉತ್ಸುಕ: ಎಸ್‌.ಸೋಮನಾಥ್‌

1-dsdsadasdas

Lok Sabha; ಪ್ರಧಾನಿ ಮೋದಿ ಸುಳ್ಳು ಮಾಹಿತಿ: ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

Dengue

Dengue ಹಾವಳಿ: ಚಿಕಿತ್ಸೆ ಜತೆಗೆ ಮುನ್ನೆಚ್ಚರಿಕೆ ಅಗತ್ಯ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.