ಕೆಪಿಎಲ್‌: ಶ್ರೇಯಸ್‌ ಗೋಪಾಲ್‌, ಸಮರ್ಥ್ ಮಾರಾಟವಾಗಲಿಲ್ಲವೇಕೆ?


Team Udayavani, Jul 23, 2018, 11:56 AM IST

kpl.jpg

ಬೆಂಗಳೂರು: ಹಿಂದಿನ ಆವೃತ್ತಿ ಕೆಪಿಎಲ್‌ಗ‌ಳಲ್ಲಿ ಸಕ್ರಿಯ ಪಾತ್ರವಹಿಸಿದ್ದ ಶ್ರೇಯಸ್‌ ಗೋಪಾಲ್‌ ಮತ್ತು ಆರ್‌. ಸಮರ್ಥ್ ಈ ಬಾರಿ ಮಾರಾಟವನ್ನೇ ಕಾಣಲಿಲ್ಲವೇಕೆ? ಶನಿವಾರದ ಹರಾಜಿನ ಬಳಿಕ ಈ ಪ್ರಶ್ನೆ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳನ್ನು ಬಹಳಷ್ಟು ಕಾಡತೊಡಗಿದೆ. ಭಾರತ ಎ ತಂಡದಲ್ಲಿ ರವಿಕುಮಾರ್‌ ಸಮರ್ಥ್ ಸ್ಥಾನ ಪಡೆದಿದ್ದಾರೆ. ಇನ್ನೊಂದು ಕಡೆ ಶ್ರೇಯಸ್‌ ಗೋಪಾಲ್‌ ಭಾರತ ಎ ತಂಡಕ್ಕೆ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಫ್ರಾಂಚೈಸಿಗಳು ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಿದವು ಎಂಬುದು ಸ್ಪಷ್ಟ.

ವಿಶೇಷವೆಂದರೆ, ಹಿಂದಿನ ಆವೃತ್ತಿಗಳಲ್ಲಿ ಗರಿಷ್ಠ ಮೊತ್ತ ಕಂಡಿದ್ದ ಮಾಯಾಂಕ್‌ ಅಗರ್ವಾಲ್‌, ಕೆ. ಗೌತಮ್‌ ಅವರನ್ನು ಈ ಬಾರಿ ಕೇಳುವವರೇ ಇರಲಿಲ್ಲ. ನಿಗದಿತ ಹರಾಜಿನ ವೇಳೆಯಲ್ಲಿ ಎರಡೆರಡು ಬಾರಿ ಹೆಸರು ಕರೆದರೂ ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಲಾಯಿತು. ಎರಡನೆ ಬಾರಿ ಕರೆದಾಗ ಹುಬ್ಬಳ್ಳಿ ಟೈಗರ್ಸ್‌ 25,000 ರೂ. ನೀಡಿ ಮಾಯಾಂಕ್‌ ಅವರನ್ನು ಖರೀದಿಸಿತು. 
ಗೌತಮ್‌ ಅವರನ್ನು ಹರಾಜು ಮುಗಿದ ಅನಂತರ 25,000 ರೂ. ನೀಡಿ ಮೈಸೂರು ವಾರಿಯರ್ಸ್‌ ಖರೀದಿಸಿತು. ಇದಕ್ಕೂ ಕಾರಣ, ಈ ಇಬ್ಬರು ಆಟಗಾರರು ಭಾರತ ಎ ತಂಡ ಅಥವಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿರುವುದು. ಒಂದು ವೇಳೆ ಈ ಇಬ್ಬರೂ ಆಯ್ಕೆಯಾದರೂ ತಮ್ಮ ಹಣ ನಷ್ಟವಾಗುವುದಿಲ್ಲ ಎಂಬ ಭರವಸೆಯೊಂದಿಗೆ ಕನಿಷ್ಠ ಬೆಲೆಗೆ ಫ್ರಾಂಚೈಸಿಗಳು ಖರೀದಿಸಿದವು.ಫ್ರಾಂಚೈಸಿಗಳು, ಕೆಪಿಎಲ್‌ನಲ್ಲಿ ಪೂರ್ಣಾವಧಿಯಲ್ಲಿ ಆಡುವ ಆಟಗಾರರಿಗೆ ಹೆಚ್ಚಿ ಆದ್ಯತೆ ನೀಡಿದ್ದು ಈ ಬಾರಿಯ ಹರಾಜಿನ ವಿಶೇಷ. ದೊಡ್ಡ ಮೊತ್ತಕ್ಕೆ ಖರೀದಿಸಿ, ಅವರು ಅರ್ಧದಲ್ಲೇ ಬಿಟ್ಟುಹೋಗುವುದರಿಂದ ನಷ್ಟ ಖಚಿತ ಎಂಬ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿತ್ತು!

ಬಿ ವಿಭಾಗದಲ್ಲಿ ದಾಖಲೆ 
ಅನುಭವ, ಸಾಮರ್ಥ್ಯ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಎರಡು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಿ ಹರಾಜು ನಡೆಸಲಾಗಿತ್ತು. ಅನುಭವ, ದಾಖಲೆ, ಫಾರ್ಮ್ನಲ್ಲಿ ಸ್ವಲ್ಪ ಹಿಂದಿದ್ದವರು ಪೂಲ್‌ ಬಿಯಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ 20 ಸಾವಿರ ರೂ. ಮೂಲ ಬೆಲೆ ಇರುತ್ತದೆ. ಈ ಗುಂಪಿನಲ್ಲಿ ಸ್ಥಾನ ಪಡೆದರೂ ಮೋಹನ್‌ರಾಮ್‌ ನಿದೀಶ್‌ ಮತ್ತು ಆರ್‌. ಜೊನಾಥನ್‌ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದಾರೆ. ನಿದೀಶ್‌ 5.85 ಲಕ್ಷ ರೂ. ಪಡೆದರೆ, ಜೊನಾಥನ್‌ 5.45 ಲಕ್ಷ ರೂ.ಗೆ ಬಿಕರಿಯಾದರೂ ಬಿ ವಿಭಾಗದ ಆಟಗಾರರ ಪೈಕಿ ಇದು ದಾಖಲೆಯಾಗಿದೆ. ಶನಿವಾರದ ಹರಾಜಿನಲ್ಲಿ ಅಭಿಮನ್ಯು ಮಿಥುನ್‌ ಕೆಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ (8.30 ಲಕ್ಷ ರೂ.) ಮಾರಾಟವಾಗಿ ದಾಖಲೆ ನಿರ್ಮಿಸಿದ್ದರು.

ಟಾಪ್ ನ್ಯೂಸ್

Summer

Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

BJP-0Delhi

BJP is Set: ಇಂದು ದಿಲ್ಲಿ ಸಿಎಂ ಆಯ್ಕೆ ಸಾಧ್ಯತೆ: ನಾಳೆಯೇ ಪ್ರಮಾಣ ಸ್ವೀಕಾರ ಸಂಭವ

1-aaa

RTC-Aadhaar ಪ್ರತೀ ಜೋಡಣೆಗೆ ವಿಎಗಳಿಗೆ 1 ರೂ.!

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Rice-Distri

Padubidri: ಕೆವೈಸಿ ಸಮಸ್ಯೆಯಿಂದ ಪಡಿತರಕ್ಕೆ ಅಡಚಣೆ: ಸ್ಪಂದಿಸಿದ ಆಹಾರ ಇಲಾಖೆ

highcourt

145 ವರ್ಷಗಳ ಆಸ್ತಿ ವ್ಯಾಜ್ಯ ರಾಜಿ ಸಂಧಾನದಲ್ಲಿ ಇತ್ಯರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Ranji Trophy 2024-25: ಇಂದಿನಿಂದ ರಣಜಿ ಸೆಮಿಫೈನಲ್ಸ್‌

Yashasvi Jaiswal: ಚಾಂಪಿಯನ್ಸ್‌ ಟ್ರೋಫಿ ಮೀಸಲು ಪಟ್ಟಿಯಿಂದ ಜೈಸ್ವಾಲ್‌ ಹೊರಕ್ಕೆ?

Yashasvi Jaiswal: ಚಾಂಪಿಯನ್ಸ್‌ ಟ್ರೋಫಿ ಮೀಸಲು ಪಟ್ಟಿಯಿಂದ ಜೈಸ್ವಾಲ್‌ ಹೊರಕ್ಕೆ?

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Summer

Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

BJP-0Delhi

BJP is Set: ಇಂದು ದಿಲ್ಲಿ ಸಿಎಂ ಆಯ್ಕೆ ಸಾಧ್ಯತೆ: ನಾಳೆಯೇ ಪ್ರಮಾಣ ಸ್ವೀಕಾರ ಸಂಭವ

1-aaa

RTC-Aadhaar ಪ್ರತೀ ಜೋಡಣೆಗೆ ವಿಎಗಳಿಗೆ 1 ರೂ.!

20

B.Y.Vijayendra: ನನಗೆ ನನ್ನ ತಂದೆಯೇ ರಾಜಕೀಯ ಗುರು; ಬಿ.ವೈ.ವಿಜಯೇಂದ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.