ಚೆಂಡು ವಿರೂಪ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ಹ್ಯಾಂಡ್ಸ್ಕಾಂಬ್
Team Udayavani, Jul 28, 2018, 6:00 AM IST
ಮೆಲ್ಬರ್ನ್: ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಸಂಭವಿಸಿದ ಚೆಂಡು ವಿರೂಪ ಪ್ರಕರಣದ ಬಗ್ಗೆ ಆಸ್ಟ್ರೇಲಿಯದ ಆಟಗಾರ ಪೀಟರ್ ಹ್ಯಾಂಡ್ಸ್ಕಾಂಬ್ ಮೊದಲ ಸಲ ಗಂಭೀರವಾಗಿ ಮಾತಾಡಿದ್ದಾರೆ. ಇದರಲ್ಲಿ ತನ್ನ ಪಾತ್ರವೇನೂ ಇಲ್ಲ, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಎಡಿಟ್ ಮಾಡಿ ತಾನೂ ಈ ಪ್ರಕರಣದ ಪಾತ್ರಧಾರಿ ಎಂಬಂತೆ ಬಿಂಬಿಸಲಾಗಿದೆ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋದಲ್ಲಿ ಹ್ಯಾಂಡ್ಸ್ಕಾಂಬ್ ಅವರು ಬ್ಯಾನ್ಕ್ರಾಫ್ಟ್ಗೆ ಏನೋ ಸೂಚನೆ ನೀಡುತ್ತಿರುವುದನ್ನು ಕಾಣಬಹುದಿತ್ತು. ಬ್ಯಾನ್ಕ್ರಾಫ್ಟ್ಗೆ ಈ ಸೂಚನೆ ನೀಡುವ ಮುನ್ನ, ಕೋಚ್ ಡ್ಯಾರನ್ ಲೇಹ್ಮನ್ ಜತೆ ಹ್ಯಾಂಡ್ಸ್ ಕಾಂಬ್ ವಾಕಿ-ಟಾಕಿಯಲ್ಲಿ ಮಾತಾಡುತ್ತಿರುವ ದೃಶ್ಯ ಕಂಡುಬಂದಿತ್ತು.
“ಮಾಧ್ಯಮಗಳು ಈ ವೀಡಿಯೋವನ್ನು ಅದೆಷ್ಟು ಚಾಲಾಕಿತನದಿಂದ ಎಡಿಟ್ ಮಾಡಿದ್ದಾರೆಂಬುದೇ ಒಂದು ಅಚ್ಚರಿ. ನಾನು ವಾಕಿ-ಟಾಕಿಯಲ್ಲಿ ಮಾತಾ ಡುತ್ತಿದ್ದ ದೃಶ್ಯದ ಬೆನ್ನಲ್ಲೇ ಬ್ಯಾನ್ಕ್ರಾಫ್ಟ್ ಅವರತ್ತ ಹೋಗುತ್ತಿರುವ ದೃಶ್ಯಾವಳಿ ಮೂಡಿಬಂದಿದೆ’ ಎಂದು ಹ್ಯಾಂಡ್ಸ್ಕಾಂಬ್ ಹೇಳಿದರು.
ಕೋಚ್ ಲೇಹ್ಮನ್ ಸೂಚನೆ !
ಆಗ ಬ್ಯಾನ್ಕ್ರಾಫ್ಟ್ ಸ್ಯಾಂಡ್ಪೇಪರ್ನಂತಿ ರುವ ವಸ್ತುವಿನಿಂದ ಚೆಂಡನ್ನು ಉಜ್ಜುತ್ತಿರು ವುದು, ಕೋಚ್ ಲೇಹ್ಮನ್ ಅವರು ಹ್ಯಾಂಡ್ಸ್ಕಾಂಬ್ ಮೂಲಕ ಬ್ಯಾನ್ಕ್ರಾಫ್ಟ್ಗೆ ಪ್ರಮುಖ ಸೂಚನೆಯೊಂದನ್ನು ನೀಡಿದ್ದು, ಬಳಿಕ ಹ್ಯಾಂಡ್ಸ್ ಕಾಂಬ್-ಬ್ಯಾನ್ಕ್ರಾಫ್ಟ್ ಸೇರಿ ನಗುತ್ತಿರುವ ದೃಶ್ಯವನ್ನು ಈ ವೀಡಿಯೋ ಒಳಗೊಂಡಿತ್ತು.
“ನಾನು ಬ್ಯಾನ್ಕ್ರಾಫ್ಟ್ ಪಕ್ಕ ಫೀಲ್ಡಿಂಗ್ ನಡೆಸುತ್ತಿದ್ದೆ. ಅವರೊಂದಿಗೆ ತಮಾಷೆ ಮಾಡಿ ನಕ್ಕಿದ್ದೆ. ಇದನ್ನು ಹೊರತುಪಡಿಸಿ ಬೇರೇನೂ ಸಂಭ ವಿಸಿರಲಿಲ್ಲ…’ ಎಂದಿದ್ದಾರೆ ಹ್ಯಾಂಡ್ಸ್ಕಾಂಬ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ
CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Mangaluru: ರಾಷ್ಟ್ರೀಯ ಸ್ಟಾಂಡಪ್ ಪ್ಯಾಡ್ಲಿಂಗ್: ರಾಜ್ಯಕ್ಕೆ 7 ಪದಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.