![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 30, 2018, 11:30 AM IST
ಉಪ್ಪುಂದ: ಉಪ್ಪುಂದ ರಾ.ಹೆದ್ದಾರಿ 66ರ ಶಾಲೆಬಾಗಿಲು ಬಳಿ ರವಿವಾರ ಮಧ್ಯಾಹ್ನ ಕಾರು ಮತ್ತು ಟ್ಯಾಂಕರ್ ಢಿಕ್ಕಿಯಾಗಿ ಕಾರು ಜಖಂಗೊಂಡಿದೆ.
ಗೋವಾದಿಂದ ಮಂಗಳೂರು ಕಡೆಗೆ ತೆರಳುತ್ತಿರುವ ಮಾರುತಿ ಸುಜುಕಿ ಕಾರಿನಲ್ಲಿದ್ದವರು ಉಪ್ಪುಂದ ಶಾಲೆಬಾಗಿಲು ಬಳಿಯ ಹೊಟೇಲ್ನಲ್ಲಿ ಊಟ ಮಾಡಿ ಮಂಗಳೂರು ಕಡೆಗೆ ಕಾರನ್ನು ತಿರುಗಿಸುವ ಸಂದರ್ಭ ಕುಂದಾಪುರದಿಂದ ಭಟ್ಕಳ ಕಡೆಗೆ ಹೋಗುತ್ತಿರುವ ಟ್ಯಾಂಕರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟದಿಂದಾಗಿ ಕಾರಿನಲ್ಲಿ ಇದ್ದವರಿಗೆ ಯಾವುದೇ ಅಪಾಯವಾಗಿಲ್ಲ.
ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಬೈಂದೂರು ಪೊಲೀ ಸರು ಸ್ಥಳಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.