ಹಸಿ ಕಸ ನಿರ್ವಹಣೆಗೆ ಬಗೆಹರಿಯದ ಜಾಗದ ಸಮಸ್ಯೆ


Team Udayavani, Aug 1, 2018, 5:24 PM IST

1-agust-21.jpg

ಕುಮಟಾ: ರಥಬೀದಿಯ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಮಂಗಳವಾರ ಪುರಸಭೆಯ ವಿಶೇಷ ಸಾಮಾನ್ಯ ಸಭೆ ಪೌರಾಧ್ಯಕ್ಷ ಮಧುಸೂದನ ಶೇಟ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಮುಖವಾಗಿ ಕಿತ್ತೂರ ಚೆನ್ನಮ್ಮ ಉದ್ಯಾನವನದಲ್ಲಿ ಹಸಿಕಸ ವಿಲೇವಾರಿ ವಿಚಾರಕ್ಕೆ ಸಾಕಷ್ಟು ಚರ್ಚೆ ನಡೆಯಿತು. ಪರಿಸ್ಥಿತಿಯನ್ನು ತುರ್ತಾಗಿ ನಿರ್ವಹಿಸಲು ಹಲವು ಬಗೆಯ ಸಲಹೆ ಸೂಚನೆಗಳು ಕೇಳಿಬಂತು.

ಪಟ್ಟಣದ ನಾಗರಿಕರಿಂದ ಹಸಿಕಸವನ್ನು ಪುರಸಭೆ ಕಸದ ವಾಹನದವರು ಸ್ವೀಕರಿಸದೇ ಇರಲು ಸಾಧ್ಯವಿಲ್ಲ. ಹಸಿಕಸವನ್ನು ಒಣಕಸವಾಗಿ ಪರಿವರ್ತಿಸುವ ತಾಂತ್ರಿಕತೆ ಈಗಾಗಲೇ ಶಿವಮೊಗ್ಗದ ವಾರ್ಡೊಂದರಲ್ಲಿ ಸರಕಾರ ಪ್ರಾಯೋಗಿಕವಾಗಿ ಅಳವಡಿಸಿದ್ದು ಸಾಧ್ಯತೆಗಳ ವರದಿಯ ನಂತರವೇ ರಾಜ್ಯಾದ್ಯಂತ ಅಳವಡಿಸಬಹುದು. ಅಲ್ಲಿಯವರೆಗೆ ಸಮಸ್ಯೆಗೆ ತಾತ್ಕಾಲಿಕ ಉಪಶಮನ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಮುಖ್ಯಾಧಿಕಾರಿ ಎಂ.ಕೆ. ಸುರೇಶ ತಿಳಿಸಿದರು.

ಪರಿಸರ ಅಭಿಯಂತ ನಾಗೇಂದ್ರ ಗಾಂವಕರ ಮಾತನಾಡಿ, ಪುರಸಭೆಗೆ ಸ್ವಂತ ತ್ಯಾಜ್ಯ ವಿಲೇವಾರಿ ಘಟಕ ಹೊಂದಲು ಮಿರ್ಜಾನದಲ್ಲಿ ಜಾಗ ಗುರುತಿಸಿ ನಡೆಸಿದ ಪ್ರಯತ್ನಕ್ಕೆ ಸ್ಥಳೀ ಯ ಪಂಚಾಯತದಿಂದ ಒಪ್ಪಿಗೆ ಸಿಕ್ಕಿಲ್ಲ, ಆದರೂ ಪ್ರಯತ್ನ ನಡೆಸಿದ್ದೇವೆ. ಈ ನಡುವೆ ಅನಿವಾರ್ಯ ಪರಿಸ್ಥಿತಿಯಲ್ಲಿ ಉದ್ಯಾನವನದ ಮೂಲೆಯಲ್ಲಿ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿತ್ತು. ಮಳೆಗಾಲವಾದ್ದರಿಂದ ಹಸಿಕಸ ನೀರಲ್ಲಿ ನೆನೆದು ವಾಸನೆ ಬರಲಾ ರಂಭಿಸಿದ್ದು, ಜನ ಆಕ್ಷೇಪ ಮಾಡುತ್ತಿದ್ದಾರೆ. ಪರ್ಯಾಯ ಜಾಗ ಎಲ್ಲಿದೆ. ಕೊನೆಯದಾಗಿ ಸ್ಮಶಾನಗಳನ್ನು ಬಳಸಿಕೊಳ್ಳಬೇಕಾಗಬಹುದು ಎಂದರು.

ಇದಕ್ಕೆ ಸದಸ್ಯರಿಂದ ವಿವಿಧ ಸಲಹೆಗಳು ಕೇಳಿಬಂತು. ಸಮರ್ಪಕ ಕಸ ವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಸದಸ್ಯೆ ದಾಕ್ಷಾಯಿಣಿ ಅರಿಗ ನಮ್ಮ ವಾರ್ಡಿನಲ್ಲಿ ಕಸ ವಿಲೇವಾರಿ ಬೇಡ ಎಂದು ತಕರಾರು ತೆಗೆದರೆ, ಹಸಿಕಸವನ್ನು ಒಣಕಸವಾಗಿಸುವ ತಾಂತ್ರಿಕತೆ ತೆಗೆದುಕೊಂಡು ಬನ್ನಿ ಎಂದು ಸದಸ್ಯ ಯೋಗಾನಂದ ನಾಯ್ಕ ತಿಳಿಸಿದರು. ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಸಿಕಸ ಗೊಬ್ಬರವಾಗಿಸಿ ಕೊಟ್ಟರೆ ಕೃಷಿಗೆ ಬಳಕೆಯಾಗುತ್ತದೆ ಎಂದು ಸದಸ್ಯ ಕಾಂತರಾಜ ನಾಯ್ಕ ಸಲಹೆ ನೀಡಿದರು.

ಪದೇಪದೇ ಸ್ಮಶಾನ ಜಾಗದಲ್ಲಿ ಹಸಿಕಸ ವಿಲೇವಾರಿ ಮಾಡುವ ಪ್ರಸ್ತಾಪವಾದಾಗ ಕೆರಳಿದ ಸದಸ್ಯ ಪ್ರಶಾಂತ ನಾಯ್ಕ ಎದ್ದುನಿಂತು, ಜನರ ಭಾವನೆ ಕೆಣಕುವ ಪ್ರಯತ್ನ ಬೇಡ. ಸಾಮರಸ್ಯ ಕಾಯ್ದುಕೊಳ್ಳಿ, ಹಾಗೆ ಮಾಡುವುದಾದರೆ ಕೇವಲ ಮೃತದೇಹ ಸುಡುವಲ್ಲಿ ಮಾತ್ರವಲ್ಲ, ಹುಗಿಯುವಲ್ಲೂ ಹಸಿಕಸ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಲ್ಲಿನ ಹಸಿಕಸ ಗೊಬ್ಬರ ಪರಿವರ್ತಿಸುವ ವ್ಯವಸ್ಥೆಗೆ ಮೇಲ್ಚಾವಣಿ ಒದಗಿಸಿ ಸರಿಪಡಿಸಿದರೆ ವಾಸನೆ ಬರುವುದೂ ಇಲ್ಲ. ಸಮಸ್ಯೆಯೂ ಇಲ್ಲ, ಈಗಾಗಲೇ 14ನೇ ಹಣಕಾಸು ಯೋಜನೆಯಡಿ 5 ಲಕ್ಷ ಅನುದಾನವನ್ನು ಈ ಕಾರ್ಯಕ್ಕೆ ಬಳಸಿ ಕೊಳ್ಳುವತ್ತ ಕಾರ್ಯಪ್ರವೃತ್ತರಾಗಿದ್ದೆವು. ಸಮಿತಿ ಸಮ್ಮತಿಸಿದರೆ ಅನಿವಾರ್ಯ ತಾತ್ಕಾಲಿಕ ವ್ಯವಸ್ಥೆಯಾಗಿ ಈಗಿರುವ ಉದ್ಯಾನವನದ ವಿಲೇವಾರಿ ಜಾಗದಲ್ಲೇ ಮರುಬಳಕೆ ಮಾದರಿಯಲ್ಲಿ ಶೆಡ್‌ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದ ಸಂದರ್ಭದಲ್ಲಿ ಹೊನ್ನಾವರ ತ್ಯಾಜ್ಯ ವಿಲೇವಾರಿ ಘಟಕದವರು ಕೇವಲ ಒಣಕಸಕ್ಕೆ ಅವಕಾಶ ಕೊಟ್ಟಿದ್ದಾರೆ. ನಮ್ಮ ಹಸಿಕಸವನ್ನು ಅಲ್ಲಿಗೆ ಒಯ್ಯಲಾಗದು. ಎಲ್ಲರ ಸಹಕಾರದಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಸದ್ಯ ಉದ್ಯಾನವನದಲ್ಲಿ ಶೆಡ್‌ನ‌ಡಿ ಹಸಿಕಸ ವಿಲೇವಾರಿ ನಡೆಯಲಿ, ಪರ್ಯಾಯ ಮಾರ್ಗಗಳ ಬಗ್ಗೂ ಪ್ರಯತ್ನ ಮುಂದುವರೆಯಲಿ ಎಂದು ವಿಷಯಕ್ಕೆ ತೆರೆ ಎಳೆದರು. 

ಒಳಚರಂಡಿ ಯೋಜನೆಯವರ ಅಧ್ವಾನವನ್ನು ಸರಿಪಡಿಸುವ ಕಾಳಜಿ ಜಿಲ್ಲಾಧಿಕಾರಿಗಳಿಗೂ ಇದ್ದಂತಿಲ್ಲ. ಯೋಜನೆಯನ್ನು ರದ್ದು ಮಾಡಿಸುವುದೇ ಕ್ಷೇಮ ಎಂಬ ಮಾತು ಕೇಳಿಬಂತು. ವಾಕರಸಾ ಬಸ್‌ ನಿಲ್ದಾಣದ ಎದುರು ಗಟಾರ ಸ್ವಚ್ಛತೆಗೆ ಕ್ರಮವಾಗಬೇಕು. ಒಳರಸ್ತೆಗಳ ನಿರ್ವಹಣೆ ಸರಿಯಾಗಿ ನಡೆಯಲಿ, ಮಳೆಗಾಲದಲ್ಲಿ ಜಾರದಂಥ ಇಂಟರ್‌ ಲಾಕ್‌ಗಳನ್ನೇ ಅಳವಡಿಸಬೇಕು ಎಂಬ ಸಲಹೆಗಳು ಬಂದವು. ವಿವಿಧ ಯೋಜನೆಯಡಿ ಕಾಮಗಾರಿ ನಿರ್ವಹಣೆ, ಹೊರಗುತ್ತಿಗೆಯಡಿ ಚಾಲಕರ ಪೂರೈಕೆ, ಮರಾಕಲ್‌ ಜಂಟಿ ನೀರು ಯೋಜನೆಯ ಸಾಂತಗಲ್‌ ಕ್ಲೋರಿನೇಷನ್‌ ಘಟಕ ನವೀಕರಿಸುವ ಕುರಿತು, ಕಟ್ಟಡ ಪರವಾನಿಗೆ ಅನುಮೋದನೆ ಕುರಿತು ಚರ್ಚೆ ನಡೆಯಿತು.

ಟಾಪ್ ನ್ಯೂಸ್

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

Producer K Manju Teams Up With Director Smile Sreenu

Sandalwood: ಸ್ಮೈಲ್‌ ಶ್ರೀನು ಚಿತ್ರಕ್ಕೆ ಕೆ.ಮಂಜು ಸಾಥ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.