ಭಾಷಣ ಕೇಳಲು ಬಂದಿತ್ತು ಜನಸಾಗರ


Team Udayavani, Aug 17, 2018, 11:52 AM IST

1.jpg

ಕಲಬುರಗಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಭಾಷಣಕ್ಕೆ ನಿರೀಕ್ಷೆ ಮೀರಿ ಜನ ಬಂದಿರುವ ಹಾಗೂ ಅದೇ ಸಮಯಕ್ಕೆ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ ಸಭೆಗೆ ಜನ ಬಾರದಿರುವ ಘಟನೆಗೆ 1980ರ ಘಟನೆಗೆ ಕಲಬುರಗಿ ಸಾಕ್ಷಿಯಾಗಿತ್ತು.

ಅದು 1980ರ ಇಸ್ವಿ. ಕಲಬುರಗಿ ಲೋಕಸಭೆ ಸ್ಥಾನಕ್ಕೆ ಉಪ ಚುನಾವಣೆ. ಇಂದಿರಾ ಗಾಂಧಿ ಪರಮಾಪ್ತ ಸಿ.ಎಂ. ಸ್ಟೀಫನ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆಗ ಜನತಾ ಪಕ್ಷ ಹಾಗೂ ಇತರರ ಬೆಂಬಲಿತ ಅಭ್ಯರ್ಥಿಯಾಗಿ ಬಾಪುಗೌಡ ದರ್ಶನಾಪುರ ಸ್ಪರ್ಧಾ ಕಣದಲ್ಲಿದ್ದರು. 

ಆಗ ವಾಜಪೇಯಿ ನೂತನ ವಿದ್ಯಾಲಯ ಮೈದಾನದಲ್ಲಿ ದರ್ಶನಾಪುರ ಪರ ಮತಯಾಚಿಸುವ ಚುನಾವಣೆ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಸಭೆಗೆ ಸಾವಿರಾರು ಜನ ಸಮೂಹವೇ ಬಂದಿತ್ತು. ಇದು ಅವರ ಭಾಣಷದ ನಿಖರತೆ ಹಾಗೂ ವ್ಯಕ್ತಿತ್ವ ನಿರೂಪಿಸುತ್ತದೆ. ಇದೇ ಸಮಯಕ್ಕೆ ನೂತನ ವಿದ್ಯಾಲಯ ಮೈದಾನ ಕೂಗಳತೆ ದೂರದಲ್ಲೇ ಈಗಿನ ಟೌನ್‌ ಹಾಲ್‌ ಬಳಿ ಸ್ಟೀಫನ್‌ ಪರವಾಗಿ ಆಗಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಹಾಗೂ ಮತ್ತವರ ನಾಯಕರ ಚುನಾವಣಾ ಪ್ರಚಾರ ಸಭೆ ನಡೆದಿತ್ತು.
ಈ ಸಭೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದನ್ನು ಹಿರಿಯ ನಾಯಕರು ಪಕ್ಷ ಬೇಧ ಮರೆತು ಈಗಲೂ ನೆನೆಯುತ್ತಾರೆ.

ಚುನಾವಣೆಗೆ ಹಿನ್ನೆಲೆ: 1980ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ಧರ್ಮಸಿಂಗ್‌ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ತೆಗೆದುಕೊಳ್ಳುವ ಮುನ್ನವೇ ರಾಜೀನಾಮೆ ನೀಡಿ  ಆ ಸ್ಥಾನವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪರಮಾಪ್ತ, ಕಾಂಗ್ರೆಸ್‌ ನ ಹಿರಿಯ ನಾಯಕ ಸಿ.ಎಂ. ಸ್ಟೀಫನ್‌ ಅವರಿಗೆ ಬಿಟ್ಟು ಕೊಡಲಾಯಿತು. 

ಹೀಗಾಗಿ ಲೋಕಸಭೆಗೆ ಉಪ ಚುನಾವಣೆ ನಡೆಯಿತು. ಸ್ಟೀಫನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೆ ಜನತಾ ಪಕ್ಷ ಸೇರಿ ಇತರರ ಬೆಂಬಲದಿಂದ ಬಾಪುಗೌಡ ದರ್ಶನಾಪುರ ಸ್ಪರ್ಧಿಸಿದ್ದರು. ಆಗ ದರ್ಶನಾಪುರ ಪರವಾಗಿ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪಾಲ್ಗೊಂಡು ಭಾಷಣ ಮಾಡಿ ಬಿಸಿಲೂರಿನ ಜನತೆಯ ಗಮನ ಸೆಳೆದಿದ್ದರು. ತಮ್ಮ ಭಾಷಣದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು, ತಮ್ಮ ಭಾಷಣ ಕೇಳಲು ಸಾವಿರಾರು ಜನರು ಬರುತ್ತೀರಿ, ಆದರೆ ಮತಗಳಾಗಿ ಏಕೆ ಪರಿವರ್ತನೆಯಾಗುವುದಿಲ್ಲ ಎಂದು ಜನತೆಯನ್ನು ಪ್ರಶ್ನಿಸಿದ್ದರು.

ಇದನ್ನು ಸಹ ಕಲಬುರಗಿ ಜನ ಇನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ದರ್ಶನಾ ಪುರ ಪರ ಮತಯಾಚಿಸಲು ಎರಡನೇ ಸಲ ಆಗಮಿದ್ದ ವಾಜಪೇಯಿ ಅವರು ಅದಕ್ಕಿಂತ ಮುಂಚೆ 1971-72ರಲ್ಲಿ ಜನ ಸಂಘದ ಅಧ್ಯಕ್ಷರಾಗಿ ಸಂಘದ ಸಂಘಟನೆ ಸಲುವಾಗಿ ಕಲಬುರಗಿಗೆ ಪ್ರಥಮ ಸಲ ಆಗಮಿಸಿದ್ದರು. ಸಂಘಟನಾ ಸಭೆಯಲ್ಲಿ ಪಾಲ್ಗೊಂಡವರು ಪೈಕಿ ಬಹುತೇಕರು ಈಗ ಇಲ್ಲ. ತದನಂತರ
1996ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಬಸವರಾಜ ಪಾಟೀಲ್‌ ಸೇಡಂ ಪರ ಮತಯಾಚಿಸಲು ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದರು.

 ಮುಂದೆ 1998-99ರಲ್ಲಿ ವಾಜಪೇಯಿ 13 ತಿಂಗಳು ಪ್ರಧಾನಿಯಾಗಿದ್ದಾಗ ಸೇಡಂ ಸಹ ಸಂಸದರಾಗಿದ್ದರು. ಮುಂದೆ 1999ರಲ್ಲಿ ಪ್ರಧಾನಿಯಾಗಿದ್ದರೆ ಸೇಡಂ ಗೆಲುವು ಸಾಧಿಸಿರಲಿಲ್ಲ. ಇದರ ನಡುವೆ 1993ರಲ್ಲಿ ರಾಯಚೂರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಾಜಪೇಯಿ ಅವರು ಬೀದರ್‌ ಮುಖಾಂತರ ಕಲಬುರಗಿಗೆ ಆಗಮಿಸಿ ಒಂದು ಗಂಟೆ ಕಾಲ ನಗರದಲ್ಲಿ ಕೆಲವು ಮುಖಂಡರೊಂದಿಗೆ ಚರ್ಚಿಸಿದ್ದರು. ತದನಂತರ ಅವಿಭಜಿತ ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಅತಿಥಿ ಗೃಹದಲ್ಲಿ ರಾತ್ರಿ ತಂಗಿ, ಮರುದಿನ ರಾಯಚೂರಿಗೆ ಪ್ರಯಾಣ ಬೆಳೆಸಿದ್ದರು.

ಹೀಗೆ ಒಟ್ಟು ನಾಲ್ಕು ಸಲ ಮಾಜಿ ಪ್ರಧಾನಿ ವಾಜಪೇಯಿ ಅವರು ಕಲಬುರಗಿಗೆ ಬಂದಿದ್ದು, ನಾಲ್ಕೂ ಸಲವೂ ಪ್ರಧಾನಿಯಾಗುವ ಮುಂಚೆಯೇ ಬಂದಿದ್ದರು ಎಂಬುದು ಒಂದು ವಿಶೇಷ ಎಂಬುದಾಗಿ ಬಿಜೆಪಿಯ ಹಿರಿಯ ತಲೆಮಾರಿನವರು ತಿಳಿಸಿದ್ದಾರೆ.

ಎನ್‌ವಿ ಮೈದಾನದಲ್ಲೇ ಸಭೆ: ಜನ ಸಂಘದ ಅಧ್ಯಕ್ಷರಾಗಿ ಸಂಘದ ಸಂಘಟನಾ ಸಭೆ ಹಾಗೂ ಎರಡು ಸಲ ಚುನಾವಣೆ ಪ್ರಚಾರ ಸಭೆ ನಡೆಸಿದ್ದು ನೂತನ ವಿದ್ಯಾಲಯ ಮೈದಾನದಲ್ಲೇ. ವಾಜಪೇಯಿ ಭಾಷಣ ಮಾಡಿದ್ದು ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಮೂರು ಸಭೆಗಳಲ್ಲಿಯೇ ಮಾತ್ರ ಎಂಬುದು ಮಗದೊಂದು ವಿಶೇಷವಾಗಿದೆ. 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

v

Kalaburagi; ಸೆ.17ರಂದು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ; ದಿನಾಂಕ ಅಂತಿಮಗೊಳಿಸಿ ಅಧಿಸೂಚನೆ

Kalaburagi: ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಕೆಸರಾಟ… ಪಟ್ಟಿಯಲ್ಲಿ ಬದಲಾವಣೆ

Kalaburagi: ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಕೆಸರಾಟ… ಪಟ್ಟಿಯಲ್ಲಿ ಬದಲಾವಣೆ

8-

Chittapur: ದಂಡೋತಿ ಸೇತುವೆ; ಕಿತ್ತು ಹೋದ ರಸ್ತೆ

7-

Sedam: ಕಾಗಿಣಾ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.