ಎಬಿಎಸ್‌, ಇಬಿಡಿ ಅಂದರೆ ಏನು? ನಿಜಕ್ಕೂ  ಅಗತ್ಯವೇ?


Team Udayavani, Aug 17, 2018, 1:17 PM IST

17-agust-12.jpg

ಆಧುನಿಕ ವಾಹನಗಳ ಬ್ರೇಕಿಂಗ್‌ ವ್ಯವಸ್ಥೆಯಲ್ಲಿ ಎಬಿಎಸ್‌, ಇಬಿಡಿ ವ್ಯವಸ್ಥೆಗಳು ಸಾಮಾನ್ಯವಾಗಿವೆ. ಸುಮಾರು 5 ಲಕ್ಷ ರೂ. ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್‌, ಇಬಿಡಿಗಳು ಇರುತ್ತವೆ. ಇದರಿಂದ ಏನು ಪ್ರಯೋಜನ? ಇಂತಹ ವ್ಯವಸ್ಥೆ ನಿಜಕ್ಕೂ ಕಾರುಗಳಲ್ಲಿ ಬೇಕೇ? ಎಂಬುದು ಪ್ರಶ್ನೆಯಾಗಿರಬಹುದು. ಉತ್ತರ ಇಲ್ಲಿದೆ. ಹಿಂದಿನ ಕಾಲದಲ್ಲಿ ಎಬಿಎಸ್‌, ಇಬಿಡಿಯಂತಹ ವ್ಯವಸ್ಥೆಗಳು ಬ್ರೇಕಿಂಗ್‌ಗೆ ಇರಲಿಲ್ಲ. ಇದರಿಂದ ಬ್ರೇಕ್‌ ಹಾಕಿದ ಸಂದರ್ಭದಲ್ಲಿ ಕಾರು ಸ್ಕಿಡ್‌ ಆಗುವುದು, ನಿಯಂತ್ರಣ ತಪ್ಪಿ, ಇನ್ನೊಂದು ಕಾರಿಗೆ ಢಿಕ್ಕಿ ಹೊಡೆಯುವುದು ಇತ್ಯಾದಿ ಇತ್ತು. ಆದರೆ ಆಧುನಿಕ ವಿಧಾನದಲ್ಲಿ ಎಬಿಎಸ್‌, ಇಬಿಡಿಗಳು ವಾಹನಗಳ ಬ್ರೇಕಿಂಗ್‌ ವ್ಯವಸ್ಥೆಗೆ ಅಗತ್ಯದ್ದಾಗಿವೆ. ಇದರಿಂದ ತುರ್ತು ಸಂದರ್ಭ ಬ್ರೇಕ್‌ ಹಾಕಿದರೂ ಚಾಲಕನ ನಿಯಂತ್ರಣ ತಪ್ಪದಂತೆ ಸಹಾಯ ಮಾಡುತ್ತದೆ.

ಎಬಿಎಸ್‌ ಅಂದರೇನು?
ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ ಎನ್ನವುದು ಎಬಿಎಸ್‌ನ ವಿಸ್ತೃತ ರೂಪ. 1929ರಲ್ಲಿ ಇದನ್ನು ಗಾಬ್ರೈಲ್‌ ವೋಸಿನ್‌ ಎಂಬಾತ ವಿಮಾನದ ಬ್ರೇಕಿಂಗ್‌ ವ್ಯವಸ್ಥೆಗೆ ಕಂಡುಹಿಡಿದ. ಈ ವ್ಯವಸ್ಥೆಯಲ್ಲಿ ಚಾಲಕ ಬ್ರೇಕ್‌ ಅದುಮಿದಾಗ ಬ್ರೇಕ್‌ ಒಮ್ಮೆಲೆ ಲಾಕ್‌ ಆಗುವುದನ್ನು ತಪ್ಪಿಸುತ್ತದೆ. ಒಂದೇ ಬಾರಿಗೆ ಬ್ರೇಕ್‌ ಪ್ಯಾಡ್‌ ಡಿಸ್ಕ್ ಅದುಮಿ ಹಿಡಿದಾಗ ವೇಗದಲ್ಲಿರುವ ಕಾರು ಓಲಾಡುವ, ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ. ಏಕಾಏಕಿ ಬ್ರೇಕ್‌ ಪ್ಯಾಡ್‌ ಲಾಕ್‌ ಆಗುವುದರಿಂದ ಹೀಗಾಗುತ್ತದೆ. ಇದನ್ನು ತಪ್ಪಿಸಲು ಎಬಿಎಸ್‌ ವ್ಯವಸ್ಥೆ ಇದೆ. ಇದೊಂದು ಎಲೆಕ್ಟ್ರಾನಿಕ್‌ ವ್ಯವಸ್ಥೆಯಾಗಿದ್ದು, ಎಷ್ಟು ಬಲಯುತವಾಗಿ ಬ್ರೇಕ್‌ ಅದುಮಲಾಗಿದೆ ಎಂಬುದನ್ನು ಸೆನ್ಸರ್‌ಗಳು ಲೆಕ್ಕ ಹಾಕಿ ಬ್ರೇಕ್‌ ಹಾಕುತ್ತವೆ. ಜತೆಗೆ ಬ್ರೇಕ್‌ ಹಾಕುವ ಸಂದರ್ಭದಲ್ಲಿ ಎಬಿಎಸ್‌ ವ್ಯವಸ್ಥೆ ಪ್ರತಿ ಸೆಕೆಂಡ್ ಗೆ ಹಲವು ಬಾರಿ ಬ್ರೇಕ್‌ ಅನ್ನು ಹಿಡಿಯುವುದು, ಬಿಡುವುದು ಮಾಡುತ್ತದೆ. ಇದರಿಂದಾಗಿ ಅತಿ ಹೆಚ್ಚು ವೇಗದಲ್ಲಿದ್ದರೂ ಕಾರು ಸ್ಕಿಡ್‌ ಆಗಲಾರದು. ಬ್ರೇಕ್‌ ಹಾಕಿದಾಗ ಗಕ್ಕನೆ ನಿಲ್ಲಲು ಸಹಾಯ ಮಾಡುತ್ತದೆ.

ಇಬಿಡಿ ಅಂದರೇನು?
ಎಲೆಕ್ಟ್ರಾನಿಕ್‌ ಬ್ರೇಕ್‌ ಫೋರ್ಸ್‌ ಡಿಸ್ಟ್ರಿಬ್ಯೂಷನ್‌ ಎನ್ನುವುದು ಇಬಿಡಿಯ ವಿಸ್ತೃತ ರೂಪ. ಇದೂ ಎಲೆಕ್ಟ್ರಾನಿಕ್‌ ವ್ಯವಸ್ಥೆಯಾಗಿದೆ. ಈ ಮಾದರಿಯಲ್ಲಿ ಮೂರು ವ್ಯವಸ್ಥೆಗಳಿರುತ್ತವೆ. ಸ್ಪೀಡ್‌ ಸೆನ್ಸರ್‌, ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಯುನಿಟ್‌, ಬ್ರೇಕ್‌ ಫೋರ್ಸ್‌ ಮಾಡ್ಯುಲೇಟರ್‌ ಇರುತ್ತದೆ. ಸ್ಪೀಡ್‌ ಸೆನ್ಸರ್‌ ಕಾರಿನ ವೇಗ, ಎಂಜಿನ್‌ ತಿರುಗುವ ವೇಗ ಲೆಕ್ಕಾಚಾರ ಹಾಕಿ ಚಕ್ರದ ಸ್ಲಿಪ್‌ ಸಾಧ್ಯತೆಯನ್ನು ಇಸಿಯುಗೆ ಹೇಳುತ್ತದೆ. ಅದರಂತೆ ಅಲ್ಲಿರುವ ಸಣ್ಣ ಚಿಪ್‌ ಕಾರಿನ ಸ್ಪೀಡ್‌ ಮತ್ತು ಚಕ್ರ ತಿರುಗುವ ವೇಗ ಅಂದಾಜಿಸಿ ಎಷ್ಟು ಪ್ರಮಾಣದಲ್ಲಿ ಬ್ರೇಕ್‌ ಹಿಡಿಯಬೇಕು ಎಂದು ಲೆಕ್ಕ ಹಾಕುತ್ತದೆ. ಅದರಂತೆ ಬ್ರೇಕ್‌ ಫೋರ್ಸ್‌ ಮಾಡ್ಯುಲೇಟರ್‌ಗಳು ಬ್ರೇಕ್‌ ಆಯಿಲ್‌ ಬಿಡುಗಡೆ ಮಾಡಿ ಚಕ್ರಗಳ ವೇಗಕ್ಕೆ ತಕ್ಕಂತೆ ಬ್ರೇಕ್‌ ಅದುಮಲು ಸಹಾಯ ಮಾಡುತ್ತದೆ. ಚಾಲಕ ಗಟ್ಟಿಯಾಗಿ ಬ್ರೇಕ್‌ ಹಾಕುವ ಆವಶ್ಯಕತೆ ಇರುವುದಿಲ್ಲ. ಎಷ್ಟು ಪ್ರಮಾಣದಲ್ಲಿ ಬ್ರೇಕ್‌ ಬೇಕು ಎಂಬುದನ್ನು ತಂತ್ರಜ್ಞಾನವೇ ನಿರ್ಧರಿಸುತ್ತದೆ. ಇದರಿಂದ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆ ಕಡಿಮೆ

ಅಗತ್ಯವಿದೆಯೇ?
ಹೈವೇಯಲ್ಲಿ ವೇಗದ ಚಾಲನೆಗೆ, ಸ್ಕಿಡ್‌ ಆಗುವ ಮಾರ್ಗಗಳಲ್ಲಿ, ನೀರಿನಿಂದ ಜಾರುವ ಪ್ರಮೇಯಗಳಿದ್ದಾಗ, ಈ ಎರಡೂ ವ್ಯವಸ್ಥೆಗಳು ಚಾಲಕನ ನೆರವಿಗೆ ಬರುತ್ತವೆ. ಮುಂದಿನ ದಿನಗಳಲ್ಲಿ ಈ ಎರಡೂ ವ್ಯವಸ್ಥೆಗಳನ್ನು ಕೇಂದ್ರ ಸರಕಾರ ಎಲ್ಲ ಕಾರುಗಳಲ್ಲಿ ಕಡ್ಡಾಯ ಮಾಡಲು ಯೋಜನೆ ರೂಪಿಸುತ್ತಿದೆ. ಇದರಿಂದ ಅಪಘಾತ ಪ್ರಮಾಣವನ್ನು ಕಡಿಮೆಮಾಡಬಹುದು.

 ಈಶ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.