ತಿ.ನರಸೀಪುರ ಪುರಸಭೆಗೆ 22 ನಾಮಪತ್ರ ಸಲ್ಲಿಕೆ
Team Udayavani, Aug 18, 2018, 12:22 PM IST
ತಿ.ನರಸೀಪುರ: ಪುರಸಭೆ ಚುನಾವಣೆ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಗುರುವಾರ 22 ಮಂದಿ ವಿವಿಧ ವಾರ್ಡ್ಗಳಿಗೆ ಸ್ಪರ್ಧಿಸಲು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ 2ನೇ ವಾರ್ಡ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟು, ಎಸ್ಸಿ ಮಹಿಳೆಗೆ ಮೀಸಲಾಗಿರುವ ಮೂರನೇ ವಾರ್ಡ್ಗೆ ಶಿಲ್ಪಾ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಲ್ಕನೇ ವಾರ್ಡ್ಗೆ ಬಿಜೆಪಿ ಅಭ್ಯರ್ಥಿಯಾಗಿ ಎನ್.ಮಂಜುನಾಥ್, ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಜಯಕುಮಾರ್, ಸಾಮಾನ್ಯ ಕ್ಷೇತ್ರ ಐದನೇ ವಾರ್ಡ್ಗೆ ಪಕ್ಷೇತರರಾಗಿ ಎಸ್.ಪುರುಷೋತ್ತಮ, ಸತ್ಯನಾರಾಯಣ, ರಾಚೇಗೌಡ, ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದರು.
ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಆರನೇ ವಾರ್ಡ್ಗೆ ಬಿಜೆಪಿ ಅಭ್ಯರ್ಥಿಯಾಗಿ ಗಿರಿಜಮ್ಮ, ಸಾಮಾನ್ಯ ಕ್ಷೇತ್ರ ಏಳನೇ ವಾರ್ಡ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ.ಪುಟ್ಟರಾಜು, ಬಿಜೆಪಿ ಅಭ್ಯರ್ಥಿಯಾಗಿ ಆರ್.ಮಣಿಕಂಠರಾಜ್, ಪಕ್ಷೇತರರಾಗಿ ಎಸ್.ಲಕ್ಷ್ಮೀ, ಅಗಸ್ತೇಗೌಡ, ಎಸ್.ವಿನೋದ, ತುಂಬಲ ಪ್ರಕಾಶ್, ನಾಗಮ್ಮ, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಎಂಟನೇ ವಾರ್ಡ್ಗೆ ಪಕ್ಷೇತರರಾಗಿ ಎಚ್.ಗೀತಾ,
ವಾಣಿ, ಸಾಮಾನ್ಯವಾಗಿರುವ ಒಂಬತ್ತನೇ ವಾರ್ಡ್ಗೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೀರಭದ್ರಪ್ಪ, ಪಕ್ಷೇತರರಾಗಿ ಜಯಶಂಕರ್, ಡಿ.ರಾಮಕೃಷ್ಣ, ಸಾಮಾನ್ಯ ಮಹಿಳೆ ಮೀಸಲು ವಾರ್ಡ್ ಹನ್ನೆರಡರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೀತಾ ಹಾಗೂ ಪರಿಶಿಷ್ಟ ಜಾತಿ ಮೀಸಲು ವಾರ್ಡ್ 14ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಮಹದೇವಸ್ವಾಮಿ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಕೆ.ರಾಜು, ಜಿಪಂ ಕುಡಿಯುವ ನೀರು ಉಪ ಭಾಗದ ಎಇಇ ಏಜಾಜ್ ಅಹಮದ್ ಸಿದ್ಧಿಖೀ, ಸಹಾಯಕ ಚುನಾವಣಾಧಿಕಾರಿಗಳಾಗಿ ಆರ್.ಶಿವಣ್ಣ, ಚಂದ್ರಶೇಖರ್ ಹಾಗೂ ಶಿರಸ್ತೇದಾರ್ ಪ್ರಭುರಾಜ್ ಕರ್ತವ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru Dasara: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ: ಸುಗ್ರೀವ 5.2 ಟನ್
Hunsur: ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಇನ್ಸ್ಪೆಕ್ಟರ್ ಮುನಿಯಪ್ಪ
Report on Corruption: ಕೋವಿಡ್ ಅಕ್ರಮ: ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ: ಸಿಎಂ
Mysuru: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ಅಕ್ರಮ: ಸಂಸದ ಯದುವೀರ್
Mysore: ಚಾಮುಂಡೇಶ್ವರಿ ದೇಗುಲ ಸಂಪ್ರದಾಯ, ಘನತೆ ಕಾಪಾಡಿ ಉನ್ನತೀಕರಿಸಿ: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.