ಕರಾವಳಿ ಲಂಚ್‌ ಹೋಂ :ಇಲ್ಲಿ ಮೀನೂಟ ಸೂಪರ್‌ ಮಾರಾಯ್ರೇ !


Team Udayavani, Aug 18, 2018, 5:16 PM IST

1-tr.jpg

ಈ ಹೋಟೆಲ್‌ ಹೆಸರು ಕೇಳಿದಾಕ್ಷಣ ಕರಾವಳಿಯ ಕಡೆ ತಯಾರಿಸುವ ರುಚಿರುಚಿ ತಿನಿಸುಗಳ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಮೀನುಪ್ರಿಯರ ಬಾಯಲ್ಲಿ ನೀರೂರಿದರೂ ಆಶ್ಚರ್ಯವೇನಿಲ್ಲ… ಹೆಸರಿಗೆ ತಕ್ಕ ಹಾಗೆ ಕರಾವಳಿ ಲಂಚ್‌ ಹೋಮ್‌ ಕರಾವಳಿ ಖಾದ್ಯಗಳಿಗೆ ಹೆಸರುವಾಸಿ. ಒಮ್ಮೆ ಹೋಟೆಲ್‌ ಮೂಂದೆ ಹಾದು ಹೋದರೆ ಅದರದ್ದೇ ಘಮ…  

ಒಂದೇ ರುಚಿ
ಬೆಂಗಳೂರಿನಲ್ಲಿ ಕರಾವಳಿಯ ಮೀನೂಟವನ್ನು ಮಿಸ್‌ ಮಾಡಿಕೊಳ್ಳುತ್ತಿರುವವರು ಇಲ್ಲಿನ ರುಚಿಯನ್ನು ಪ್ರಯತ್ನಿಸಬಹುದು. ರುಚಿಯ ಬಗ್ಗೆ ಕಾಳಜಿ ಹೊಂದಿರುವ ಮಾಲೀಕರು ಅಡುಗೆಯಲ್ಲಿ ಬಳಸುವ ಅಹಾರ ಸಾಮಗ್ರಿಯ  ಬಗ್ಗೆಯೂ ಗಮನಹರಿಸುತ್ತಾರೆ. ಯಾವ ವಿಷಯದಲ್ಲೂ ರಾಜಿ ಮಾಡಿಕೊಳ್ಳದೆ ಇರುವುದರಿಂದಲೇ ಒಂದೇ ರೀತಿಯ ರುಚಿಯನ್ನು ಮೇಂಟೇನ್‌ ಮಾಡಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.

ಮೀನು ಚೆನ್ನಾಗಿರಬೇಕು
ಮೀನಿನ ಅಡುಗೆಯಲ್ಲಿ ಮೀನುಗಳೇ ಮುಖ್ಯ. ಅದೇ ಚೆನ್ನಾಗಿಲ್ಲದೇ ಹೋದರೆ ಅಡುಗೆಯಲ್ಲಿ ಎನು ಸಾಮಗ್ರಿ ಬಳಸಿದರೂ ಮೀನೂಟ ರುಚಿಕರ ಎನಿಸದು. ಅದರಲ್ಲೂ ಮೀನುಪ್ರಿಯರು ಮೀನೂಟದ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ. ಒಂಚೂರು ಹೆಚ್ಚುಕಮ್ಮಿಯಾದರೂ ಅವರು ಗ್ರಹಿಸಿಬಿಡುತ್ತಾರೆ. ಹೀಗಾಗಿ ಊರಿನಿಂದಲೇ ಮೀನುಗಳನ್ನು ಆರಿಸಿ ತರಿಸುತ್ತೇವೆ ಎನ್ನುತ್ತಾರೆ ರಾಜೇಶ್‌. ಅಂದಹಾಗೆ ಅವರು ಕುಂದಾಪುರದ ನೇರಲಕಟ್ಟೆಯವರು. ಹೆಚ್ಚಿನ ಸಲ ಅಲ್ಲಿಂದಲೇ ಬಂಗುಡೆ, ಅಂಜಲ್‌, ಕಾಣೆ, ಸೀಗಡಿ, ಸಿಲ್ವರ್‌ ಮೀನು, ಏಡಿ, ಮರವಾಯಿ, ಕಲ್ಲೂರ ಹೀಗೆ ಹಲವಾರು ಜಾತಿಯ ತಾಜಾ ಮೀನುಗಳು ಕರಾವಳಿ ಲಂಚ್‌ ಹೋಂಗೆ ಸರಬರಾಜಾಗುತ್ತವೆ.

ಕರಾವಳಿಯ ಖಾದ್ಯಗಳು
ಇಲ್ಲಿನ ಮೆನುವಿನಲ್ಲಿ ಬಾಂಗಡ ಫ್ರೆç, ಆಂಜಲ್‌ ಫ್ರೆç, ಫಿಶ್‌ ತವಾ ಫ್ರೆç, ಫಿಶ್‌ ಘೀ ರೋಸ್ಟ್‌, ಪಾಂಪ್ಲೆಟ್‌ ಫ್ರೆç, ಕಾಣೆ ಫ್ರೆç ಮರವಾಯಿ ಸುಕ್ಕ, ಏಡಿ ಸುಕ್ಕ, ನೀರು ದೋಸೆ, ಕೋರಿ ರೊಟ್ಟಿ ಮುಂತಾದವನ್ನು ಕಾಣಬಹುದು. ರುಚಿ ಜೊತೆಗೆ ಶುಚಿಯನ್ನು ಕಾಪಾಡಿಕೊಂಡು ಬಂದಿರುವುದು ಮತ್ತು ಕರಾವಳಿಯ ತಾಜಾಮೀನುಗಳಿಂದಲೇ ಖಾದ್ಯಗಳನ್ನು ತಯಾರಿಸುವುದರಿಂದಲೇ ಜನರಿಗೆ ಬಹಳ ಇಷ್ಟವಾಗಿದೆ.

ಕೋಟ್‌
ಕುಂದಾಪುರ, ಮಂಗಳೂರು, ಹೊನ್ನಾವರ, ಭಟ್ಕಳ, ಕಾರವಾರ, ಕುಮಟಾ, ಗೋಕರ್ಣ, ಮುಡೇìಶ್ವರಗಳಿಂದ ಇಲ್ಲಿಗೆ ಮೀನು ತರಿಸಿಕೊಳ್ಳುತ್ತೇವೆ. ಏಕೆಂದರೆ ಅದರ ಊರಿನ ಮೀನುಗಳ ರುಚಿಯ ಬೇರೆ. ಕರಾವಳಿಯ ಮೀನೂಟದ ರುಚಿಯನ್ನೇ ಬೆಂಗಳೂರಿಗರಿಗೂ ನೀಡಬೇಕೆನ್ನುವುದು ನಮ್ಮಾಸೆ.
– ರಾಜೇಶ್‌ ಕುಮಾರ್‌ ಶೆಟ್ಟಿ, ಮಾಲೀಕ

ಸ್ಥಳ: ಕರಾವಳಿ ಲಂಚ್‌ ಹೋಂ, ನಂ.1779, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಸ್ಟೇಷನ್‌ ಹತ್ತಿರ 
ಸಂಪರ್ಕ: 9900690959/9986141386

 ಬಳಕೂರು ವಿ.ಎಸ್‌. ನಾಯಕ 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.