ಕಾರ್ಕಳ: 24 ಪಲ್ಲಕ್ಕಿಯಲ್ಲಿ ಭವ್ಯ ಮಂಗಳ ಶೋಭಾಯಾತ್ರೆ
Team Udayavani, Aug 19, 2018, 6:10 AM IST
ಕಾರ್ಕಳ: ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಭವ್ಯಮಂಗಲ ಚಾತುರ್ಮಾಸ ಹಿನ್ನೆಲೆಯಲ್ಲಿ 1008ನೇ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ ಭವ್ಯಮಂಗಲ ಶೋಭಾಯಾತ್ರೆ ಆ. 18ರಂದು ನಗರದಲ್ಲಿ ನಡೆಯಿತು.
ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಿಂದ ಹೊರಟ ಶೋಭಾಯಾತ್ರೆ ಆನೆಕೆರೆ, ಮೂರು ಮಾರ್ಗ, ಬಸ್ನಿಲ್ದಾಣದಿಂದ ಅನಂತಶಯನ ಮಾರ್ಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾಹುಬಲಿ ಪ್ರಚನಮಂದಿರಕ್ಕೆ ಸಾಗಿತು. ಅದಕ್ಕೂ ಮೊದಲು ಮುಂಜಾನೆ ಹಿರಿಯಂಗಡಿ ಗುರುಬಸದಿಯಿಂದ ತೀರ್ಥಂಕರರ ಜಿನಬಿಂಬಗಳನ್ನು ಬಾಹುಬಲಿ ಪ್ರವಚನ ಮಂದಿರಕ್ಕೆ ಕೊಂಡೊಯ್ದು ಅಭಿಷೇಕ ಮಾಡಲಾಯಿತು.
24 ತೀರ್ಥಂಕರರ ಜಿನಬಿಂಬಗಳನ್ನು 24 ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧ ಸ್ತೋತ್ರ, ಜಿನವಾಣಿ, ಘೋಷಣೆಗಳ ಮೂಲಕ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಹೊರಜಿಲ್ಲೆಗಳ ಜನಪದೀಯ ಕಲಾ ತಂಡಗಳ ನೃತ್ಯಗಳು, ಡೋಲು, ವಾದ್ಯ, ಬ್ಯಾಂಡ್ಸೆಟ್ ಮೊದಲಾದ ಕಲಾ ಪ್ರಕಾರಗಳು ಮತ್ತಷ್ಟು ಮೆರುಗು ನೀಡಿತು.
ಹರಿದು ಬಂದ ಭಕ್ತಸಾಗರ
ಕರಾವಳಿ ಭಾಗದ ಸಾವಿರಾರು ಭಕ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಜತೆಗೆ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ಮಾತ್ರವಲ್ಲದೇ ಉಡುಪಿ ಜಿಲ್ಲೆಯ ವಿವಿಧ ಭಾಗಗಳ ಸಾವಿರಾರು ಮಂದಿ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.